Featured

ಸಂಸದರ ನಿಧಿ ಬಳಕೆಯಲ್ಲಿ ಪ್ರತಾಪ ಸಿಂಹ ನಂ.1..- Vishwanews24

ನವದೆಹಲಿ :  17ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಪ್ರಾರಂಭವಾಗಿರುವಾಗಲೇ 16ನೇ ಲೋಕಸಭೆ ಅವಧಿಯಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಪೂರ್ಣವಾಗಿ ಬಳಸಲು ವಿಫಲರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ತಮಗೆ ಬಿಡುಗಡೆಯಾದ ಒಟ್ಟಾರೆ ನಿಧಿಯಲ್ಲಿ ರಾಜ್ಯದ ಸಂಸದರು ಇನ್ನೂ 85 ಕೋಟಿ ರು.ಗಳನ್ನು ಬಳಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಆದಾಗ್ಯೂ ಮೈಸೂರು ಸಂಸದ ಪ್ರತಾಪ ಸಿಂಹ ಅವರು ಅತಿ ಹೆಚ್ಚು ಅನುದಾನ ಬಳಕೆ ಮಾಡಿದ್ದಾರೆ. ಆದರೆ ಕೇಂದ್ರ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅತಿ ಕಡಿಮೆ ಬಳಕೆ ಮಾಡಿದ್ದಾರೆ.

ಮೈಸೂರಿನ ಸಂಸದ ಪ್ರತಾಪ್‌ ಸಿಂಹ ತಮಗೆ ಬಿಡುಗಡೆಯಾಗಿರುವ .22.50 ಕೋಟಿಯಲ್ಲಿ ಕೇವಲ .5 ಲಕ್ಷ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರು ಸೆಂಟ್ರಲ… ಸಂಸದ ಪಿ.ಸಿ.ಮೋಹನ್‌ .17.50 ಕೋಟಿಯಲ್ಲಿ ಕೇವಲ .23 ಲಕ್ಷ, ಹಾವೇರಿಯ ಸಂಸದ ಶಿವಕುಮಾರ್‌ ಉದಾಸಿ .17.50 ಕೋಟಿಯಲ್ಲಿ ಕೇವಲ .19 ಲಕ್ಷ ಮಾತ್ರ ಬಾಕಿಯಿರಿಸಿಕೊಂಡಿದ್ದಾರೆ. ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ .17.50 ಕೋಟಿಯಲ್ಲಿ .31 ಲಕ್ಷ ಮಾತ್ರ ಬಳಸಿಲ್ಲ. ತುಮಕೂರು ಸಂಸದ ಮುದ್ದ ಹನುಮೇಗೌಡ .22.50 ಕೋಟಿಯಲ್ಲಿ 61 ಲಕ್ಷ ಮಾತ್ರ ಖರ್ಚು ಮಾಡಲು ಬಾಕಿಯಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬಿಡುಗಡೆಯಾಗಿರುವ .17.50 ಕೋಟಿಗಳಲ್ಲಿ .85 ಲಕ್ಷ ಬಳಸಿಲ್ಲ.

ಪ್ರತಾಪ್‌ಸಿಂಹ ಶೇ.99.50 ಸಾಧನೆ ಮಾಡಿದ್ದರೆ, ಮುನಿಯುಪ್ಪ ಶೇ.97.27, ಶೋಭಾ ಕರಂದ್ಲಾಜೆ ಶೇ.103.94, ಪಿ.ಸಿ.ಮೋಹನ್‌ ಶೇ.103.12, ಮುದ್ದಹನುಮೇಗೌಡ ಶೇ.102.46 ಮತ್ತು ಶಿವಕುಮಾರ್‌ ಉದಾಸಿ ಶೇ.100.86ರ ಸಾಧನೆ ಮಾಡಿದ್ದಾರೆ. ಸಂಸದರ ನಿಧಿಯನ್ನು ಸರ್ಕಾರ ಬ್ಯಾಂಕ್‌ ಖಾತೆಗೆ ಜಮೆ ಮಾಡುವುದರಿಂದ, ವಿಳಂಬವಾಗಿ ಬಳಸಿದರೆ ಬ್ಯಾಂಕಿನಿಂದ ಬಡ್ಡಿಯೂ ಸಿಗುತ್ತದೆ. ಹೀಗಾಗಿ ಕೆಲವು ಸಂಸದರು ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದಾರೆ.

ಕಡಿಮೆ ಬಾಕಿ ಉಳಿಸಿಕೊಂಡವರು

ಪ್ರತಾಪ್‌ ಸಿಂಹ    ಮೈಸೂರು    22.50 ಕೋಟಿ    5 ಲಕ್ಷ

ಶಿವಕುಮಾರ್‌ ಉದಾಸಿ    ಹಾವೇರಿ    17.50 ಕೋಟಿ    19 ಲಕ್ಷ

ಕೆ.ಎಚ್‌. ಮುನಿಯಪ್ಪ    ಕೋಲಾರ    17.50 ಕೋಟಿ    31 ಲಕ್ಷ

ಪಿ.ಸಿ. ಮೋಹನ್‌    ಬೆಂ.ಸೆಂಟ್ರಲ್‌    17.50 ಕೋಟಿ    23 ಲಕ್ಷ

ಮುದ್ದಹನುಮೇಗೌಡ    ತುಮಕೂರು    22.50 ಕೋ    ಟಿ    61 ಲಕ್ಷ

ಶೋಭಾ ಕರಂದ್ಲಾಜೆ    17.50 ಕೋಟಿ    85 ಲಕ್ಷ

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

8 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

8 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

8 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

9 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

9 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

9 hours ago