ಜೆಡಿಎಸ್ ಒಂದು ಸುಳ್ಳುಪಕ್ಷ ಹಾಗೂ ಬಿಜೆಪಿಯ ಅಂಗಪಕ್ಷವಾಗಿದೆ: ಇಕ್ಬಾಲ್ ಅನ್ಸಾರಿ
ಕೊಪ್ಪಳ : ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬಿರುಕು ಮೂಡಿದೆಯೇ ಎಂಬ ಅನುಮಾನ ಹುಟ್ಟಿಸುವ ಘಟನೆಯೊಂದು ನಡೆದಿದೆ. ಸಿಎಂ ಕುಮಾರಸ್ವಾಮಿ ಕಟ್ಟಾ ಬೆಂಬಲಿಗರು ಬಹಿರಂಗ ಸಭೆಯಲ್ಲಿ ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಂಸದ, ಮಾಜಿ ಶಾಸಕರು ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯವರು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
‘ ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಜೆಡಿಎಸ್ ಬಿಜೆಪಿ ಪಕ್ಷಗಳು ಯಾವತ್ತಿದ್ರೂ ಕಾಂಗ್ರೆಸ್ ನ ವಿರೋಧಿಗಳು ಅಂತೆ. ಗಂಗಾವತಿಯಲ್ಲಿ ಜೆಡಿಎಸ್ ಬಂದ್ರೆ ದುರಾಡಳಿತ ನಡೆಯುತ್ತೆ. ಬಿಜೆಪಿಯನ್ನು ಗೆಲ್ಲಿಸೋ ಸಲುವಾಗಿ ಜೆಡಿಎಸ್ ಹುಟ್ಟಿಕೊಂಡಿದೆ. ಬಿಜೆಪಿಗೆ ಖೋ ಕೊಟ್ಟು ಜೆಡಿಎಸ್ ಮನೆಯಲ್ಲಿ ಕೂಡುತ್ತೆ. ಈ ಕಾರಣಕ್ಕೆ ಕಾಂಗ್ರೆಸ್ ನ್ನು ತಾವೆಲ್ಲರು ಬೆಂಬಲಿಸಬೇಕು, ‘ ಜೆಡಿಎಸ್ ಒಂದು ಸುಳ್ಳು ಪಕ್ಷವಾಗಿದ್ದು, ಅದು ಬಿಜೆಪಿಯ ಅಂಗಪಕ್ಷವಾಗಿದೆ. ಇನ್ನು ಜೆಡಿಎಸ್ ಬಿಜೆಪಿಯನ್ನು ಗೆಲ್ಲಿಸಲೆಂದೇ ಉಂಟಾದ ಪಕ್ಷವೆಂದು ಇಕ್ಬಾಲ್ ಅನ್ಸಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗಂಗಾವತಿಯಲ್ಲಿರುವ ಜೆಡಿಎಸ್ ಬಿಜೆಪಿ ಪಕ್ಷದ ಅಂಗಪಕ್ಷ. ಚುನಾವಣೆ ಬಂದಾಗ ಮುಸ್ಲಿಂ ಮತ ಇದ್ದಲ್ಲಿ ಜೆಡಿಎಸ್ ಅಂತಾರೆ. ಹಿಂದುಗಳ ಮತ ಹೆಚ್ಚಿದ್ದಲ್ಲಿ ಬಿಜೆಪಿ ಅಂತಾರೆ. ಈ ಕಾರಣಕ್ಕೆ ಜೆಡಿಎಸ್ನ್ನು ನಂಬಬೇಡಿ. ಇಂತ ಪಕ್ಷಗಳು ಯಾತಕ್ಕಾಗಿ ಇದ್ದಾವೆ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ಗೆಲ್ಲಿಸಲು ಇವೆ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
‘ ಜೆಡಿಎಸ್ ಟಿಕೆಟ್ ಭಾರೀ ಸುಲಭ ಸಿಗುತ್ತೆ. ಅದೇನು ದೊಡ್ಡ ಮಾತು ಅಲ್ಲ. ಆದರೆ ಎಲೆಕ್ಷನ್ ಆಗಿದ ಮೇಲೆ ಪಕ್ಷಕ್ಕೆ ಬಾಗಿಲು ಹಾಕ್ತಾರೆ ಇದು ಜೆಡಿಎಸ್ ಚಾಳಿ. ಜೆಡಿಎಸ್ ಪಕ್ಷವನ್ನು ನಂಬಬೇಡಿ ‘ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ. ಅನ್ಸಾರಿ ಹಾಗೂ ಶಿವರಾಮೇ ಗೌಡರ ವಾಗ್ದಾಳಿಯಿಂದ ಜೆಡಿಎಸ್ ಗೆ ಇರುಸು-ಮುರುಸು ಉಂಟಾಗಿದೆ.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…