Featured

ಸುಳ್ಯ : ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ – VIshwanews24

ಸುಳ್ಯ : ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ – VIshwanews24

ಸುಳ್ಯ : ಹಿರಿಯ ಯಕ್ಷಗಾನ ಭಾಗವತ, ಯಕ್ಷಗಾನ ಭಾಗವತಿಕೆಯ ಗಾನ ಗಂಧರ್ವರೆಂದೇ ಪ್ರಸಿದ್ಧರಾದ‌ ಪದ್ಯಾಣ ಗಣಪತಿ ಭಟ್(66) ಅಲ್ಪಕಾಲದ ಅಸೌಖ್ಯದಿಂದ ಕಲ್ಮಡ್ಕದ ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅದ್ಭುತ ಕಂಠ ಸಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ತನ್ನ ಹದಿಹರೆಯದ ಆರಂಭದಲ್ಲೇ ಯಕ್ಷಗಾನದ ಕ್ಷೇತ್ರಕ್ಕೆ ಬಂದು ಸುದೀರ್ಘ ನಾಲ್ಕು ದಶಕಗಳಿಂದಲೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. 1955 ಜ.21ರಂದು ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮೂರನೆಯ ಮಗನಾಗಿ ಜನಿಸಿದ ಗಣಪತಿ ಭಟ್ಟರ ಔಪಚಾರಿಕ ಶಿಕ್ಷಣ ಹುಟ್ಟೂರಿನಲ್ಲೇ ನಡೆಯಿತು. ಭಾಗವತಿಕೆಯ ಆರಂಭದ ಪಾಠಗಳು ತಮ್ಮ ಅಜ್ಜನ ಸಾಮಿಪ್ಯದಲ್ಲೇ ದೊರೆತವು. ನಂತರ ಮಾಂಬಾಡಿ ನಾರಾಯಣ ಭಾಗವತರಲ್ಲಿ ಎರಡು ವರ್ಷ ಶಾಸ್ತ್ರೀಯವಾಗಿ ಭಾಗವತಿಕೆಯನ್ನು ಕಲಿತರು. ತಮ್ಮ 16 ನೇ ವಯಸ್ಸಿನಲ್ಲಿಯೇ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಭಾಗವತಿಕೆ ಆರಂಭಿಸಿದರು.

ಚೌಡೇಶ್ವರಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಬಳಿಕ ಕುಂಡಾವು ಮೇಳದಲ್ಲಿ ಭಾಗವತರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಬಳಿಕ ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಶ್ರೀ ರಾಮಚಂದ್ರಾಪುರ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಸುರತ್ಕಲ್ ಶ್ರೀ ಮಹಮ್ಮಾಯಿ ಮೇಳವೊಂದರಲ್ಲೇ ಇಪ್ಪತ್ತಾರು ವರ್ಷಗಳ ಕಾಲ ಅವರು ಭಾಗವತರಾಗಿದ್ದರು.

ಬೆಂಗಳೂರಿನಿಂದ ನಾಪತ್ತೆಯಾಗಿದ್ದ‌ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ – Vishwanews24

ಸತಿ ಶೀಲಾವತಿ, ರಾಣಿ ರತ್ನಾವಳಿ, ಕಡುಗಲಿ ಮಾರರಾಮ, ಪಾಪಣ್ಣ ವಿಜಯ ಗುಣಸುಂದರಿ, ಬಪ್ಪನಾಡು ಕ್ಷೇತ್ರ ಮಹಾತ್ಮ ಅನೇಕ ಪ್ರಸಂಗಗಳು ಪದ್ಯಾಣರ ಭಾಗವತಿಕೆಯ ಕಾರಣದಿಂದಲೇ ಅಪಾರ ಯಶಸ್ಸು ಕಂಡಿತ್ತು. ಮುಮ್ಮೇಳದಲ್ಲಿರುವ ಕಲಾವಿದನ ಮನೋಸ್ಥಿತಿ ಸಾಮರ್ಥ್ಯವನ್ನು ಅರ್ಥೈಸಿಕೊಂಡು ಹಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ನಾಟಿ ಮತ್ತು ಭೈರವಿ ರಾಗಗಳಲ್ಲಿ ಅವರ ಹಿಡಿತ ವಿಶಿಷ್ಟ. ಯಕ್ಷಗಾನದಲ್ಲಿ ಅಪರೂಪವಾದ ಸಿಂಹೇಂದ್ರ ಮಧ್ಯಮ ,ಖಮಾತು , ತಿಲ್ಲಾನ , ವಾಸಂತಿ , ವೃಂದಾವನ ಷಣ್ಮುಖಪ್ರಿಯ , ಚಾರುಕೇಶಿ ಸಂಗೀತ ಪ್ರಯೋಗಗಳು ಅವರದ್ದೇ ಸಾಧನೆ. ಸಂಗೀತದ ಸುಮಾರು ಇಪ್ಪತ್ತು ರಾಗಗಳನ್ನು ಯಕ್ಷಗಾನದಲದಲಿ ಅಳವಡಿಸಿದ್ದಾರೆ.

ಕುವೈತ್, ಮುಂಬೈ , ಆಗ್ರಾ, ಚೆನ್ನೈ ಸೇರಿದಂತೆ ಹಲವಡೆಗಳಲ್ಲಿ ಪ್ರದರ್ಶನ ನೀಡಿದಷ್ಟೇ ಅಲ್ಲದೇ , ಅಲ್ಲಿನ ಅಭಿಮಾನಿಗಳಿಂದ ಮನ್ನಣೆ ಬಿರುದುಗಳನ್ನು ಪಡೆದಿದ್ದಾರೆ. ಸಾವಿರಾರು ಕನ್ನಡ , ತುಳು ಯಕ್ಷಗಾನ ಧ್ವನಿಸುರುಳಿಗಳಿಗೆ ಜೀವ ತುಂಬಿದ್ದಾರೆ

2007 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳಿಗೆ ಭಟ್ ಪಾತ್ರರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

ಅ.14ರಿಂದ ನ.14ವರೆಗೆ ‘ಯಕ್ಷ ಮೋಹಿನಿ’ ಕೋಳ್ಯೂರು ರಾಮಚಂದ್ರ ರಾಯರಿಗೆ 90ರ ಸಂಭ್ರಮ – Vishwanews24

Vishwa News 24

Recent Posts

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

3 hours ago

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

1 day ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

1 day ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

1 day ago