Featured

ಸೇನಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ : ರಕ್ಷಣಾ ಸಚಿವೆಯಿಂದ ಮಹತ್ವದ ನಿರ್ಣಾಯ – Vishwanews24

ನವದೆಹಲಿ,: ಸೈನ್ಯದ ಮಿಲಿಟರಿ ಪೊಲೀಸ್‌ ಗೆ ಮಹಿಳೆಯರನ್ನು ಸೈನಿಕರನ್ನಾಗಿ ನೇಮಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ.

ಇನ್ನು ಮುಂದೆ ಮಹಿಳೆಯರು ಮಿಲಿಟರಿ ಪೊಲೀಸ್‌ನಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟು ಮಿಲಿಟರಿ ಪೊಲೀಸ್‌ ಸಿಬ್ಬಂದಿಯ 20% ನಷ್ಟು ಮಹಿಳೆಯರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಶುಕ್ರವಾರದಂದು ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಈ ಐತಿಹಾಸಿಕ ನಿರ್ಧಾರವನ್ನು ಜಾರಿಗೆ ತಂದಿದ್ದಾರೆ. ಈ ಹಿಂದೆ ಮಹಿಳೆಯರನ್ನು ಕೇವಲ ಸೇನಾ ಅಧಿಕಾರಿಗಳಾಗಿ ಆಯ್ದ ಶಾಖೆಗಳಿಗೆ ಮಾತ್ರ ನೇಮಿಸಿಕೊಳ್ಳಲಾಗುತ್ತಿತ್ತು. ಆದ್ರೆ ಇನ್ಮುಂದೆ ಮಹಿಳೆಯರು ಕೂಡ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ.

ಮಿಲಿಟರಿ ಪೊಲೀಸ್ ಸಿಬ್ಬಂದಿ ಭಾರತೀಯ ಸೇನೆಯ ಭಾಗವೇ ಆಗಿದ್ದು, ಇವರು ಯುದ್ಧ ಖೈದಿಗಳ ನಿರ್ವಹಣೆ, ವಿಚಾರಣೆ, ಸಂಚಾರ ವ್ಯವಸ್ಥೆ, ಮಿಲಿಟರಿ ಸಂಪರ್ಕ ವ್ಯವಸ್ಥೆ, ಸೇನೆಯ ಒಳಗೆ ವಿಐಪಿ ಭದ್ರತೆಗಳನ್ನು ನಿಭಾಯಿಸುತ್ತಾರೆ.

ಕಳೆದ ವರ್ಷ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಅವಕಾಶ ನೀಡಲು ಇನ್ನೂ ಕೆಲವು ವರ್ಷಗಳು ಸರಿಯಬೇಕು ಎಂದಿದ್ದರು. ಆದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಒಪ್ಪಿಗೆ ಸೂಚಿಸಿರುವುದರಿಂದ ಮಹಿಳೆಯರು ಯುದ್ಧ ಭೂಮಿಗೆ ಪ್ರವೇಶ ಪಡೆಯಲು ಈಗ ಮೊದಲ ಹೆಜ್ಜೆಯನ್ನು ಇರಿಸಿದಂತಾಗಿದೆ.

ಮಹಿಳೆಯರಿಗೆ ಮಿಲಿಟರಿ ಪೊಲೀಸ್ ಪಡೆಯಲ್ಲಿ ಅವಕಾಶ ನೀಡಬೇಕೆಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪ ಇಟಿದ್ದರು. ಈ ಪ್ರಸ್ತಾಪದ ಗಂಭೀರತೆಯನ್ನು ಅರಿತ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವಾಲಯವು ಮಹಿಳೆಯರಿಗೆ ಸೇನಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ.

Vishwa News 24

Recent Posts

ಆಳ್ವಾಸ್ ಪ್ರಗತಿ – 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ – vishwanews24

ಆಳ್ವಾಸ್ ಪ್ರಗತಿ - 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ ಉಡುಪಿ: ದೇಶದ ಯುವಜನರ ಉದ್ಯೋಗ…

19 minutes ago

ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್‌ ಗಾಂಧಿ ಆರೋಪ – vishwanews24

ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್‌ ಗಾಂಧಿ ಆರೋಪ ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆ…

28 minutes ago

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ – vishwanews24

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ ಪಡುಬಿದ್ರಿ: ಪಾನ್ ಸ್ಟಾಲ್ ಅಂಗಡಿಯಲ್ಲೇ ಅಕ್ರಮವಾಗಿ ಗಾಂಜಾ ಮಾರಾಟ…

56 minutes ago

ಸುಳ್ಯ : ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿ ಬಂಧನ – vishwanews24

ಸುಳ್ಯ : ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿ ಬಂಧನ ಸುಳ್ಯ : ಕೌಟುಂಬಿಕ…

1 hour ago

ಮೂಡುಬಿದಿರೆ:  ಬೈಕಿಗೆ ಆಟೋ ರಿಕ್ಷಾ ಡಿಕ್ಕಿ ; ನಿವೃತ್ತ ಶಿಕ್ಷಕ ಜಿ.ಕೆ ಭಟ್ ನಿಧನ – vishwanews24

ಮೂಡುಬಿದಿರೆ:  ಬೈಕಿಗೆ ಆಟೋ ರಿಕ್ಷಾ ಡಿಕ್ಕಿ ; ನಿವೃತ್ತ ಶಿಕ್ಷಕ ಜಿ ಕೆ ಭಟ್ ನಿಧನ ಮೂಡುಬಿದಿರೆ: ಪೇಟೆಯ ರತನ್…

1 hour ago

ಬಂಟ್ವಾಳ : ಬ್ಯಾಂಕ್ ಕಳ್ಳತನ ಪ್ರಕರಣ  ; ಪ್ರಮುಖ ಆರೋಪಿಯ ಬಂಧನ – vishwanews24

ಬಂಟ್ವಾಳ : ಬ್ಯಾಂಕ್ ಕಳ್ಳತನ ಪ್ರಕರಣ  ; ಪ್ರಮುಖ ಆರೋಪಿಯ ಬಂಧನ ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ…

1 hour ago