ಕಾಪು: ಕರ್ನಾಟಕದಲ್ಲಿ ಕಳೆದ ತಿಂಗಳವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ಸ್ಥಳೀಯ ಶಾಸಕರು ಶಿಫಾರಸ್ಸು ಮಾಡಿದಾಗಲೂ ಅಭಿವೃದ್ಧಿ ಕಾರ್ಯಗಳ ಸ್ಥಗಿತಕ್ಕೆ ಹಾಗೂ ಕೆಲವು ಅಸಮರ್ಥ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿ ತೆರೆಮರೆಯ ರಾಜಕಾರಣದಿಂದಾಗಿಯೇ, ಅಭಿವೃದ್ಧಿಯ ಕುಂಠಿತಕ್ಕೆ ಕೈ ಆಡಿಸಿದ್ದಾರೆ ಕೈ ಪಕ್ಷದ ಮಾಜಿ ಶಾಸಕರು.
ತರಾತುರಿಯಲ್ಲಿ ಸರಿಯಾದ ಜನಸಂಖ್ಯೆ ಆಧಾರದ ಅಂಶ ಕೊಡದೆ ಪುರಸಭೆ ಘೋಷಣೆ ಮಾಡಿ ವರ್ಷಕ್ಕೆ 150 ಕೋಟಿ ತರುತ್ತೇನೆಂದು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿ ಎಷ್ಟು ಅನುದಾನ ಸಿಕ್ಕಿದೆಯೆಂದು ನಮಗೂ ಗೊತ್ತಿದೆ. ಜನರು ನಂಬಿ ಕುಳಿತುಕೊಳ್ಳಲು ಮೂರ್ಖರಲ್ಲ! ಕಾಪು ಪುರಸಭೆಯ ವ್ಯಾಪ್ತಿಯಲ್ಲಿ ಜನರಿಗೆ ಮನೆ ಕಟ್ಟಲು ಈಗ ಇರುವ ಸಮಸ್ಯೆ, ಏಕಮುಖ ಬಡಾವಣೆ ಸಮಸ್ಯೆ, ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕದಿಂದ ವಂಚಿತ, ಸರಿಯಾದ ಯೋಜನಾ ಬದ್ಧವಲ್ಲದ ಒಳಚರಂಡಿ ಅವ್ಯವಸ್ಥೆಯಿಂದಾಗಿ ಕಾಮಗಾರಿ ಸ್ಥಗಿತ, ಕಸ ವಿಲೇವಾರಿ ಘಟಕ ಈಗ ಘನ ತ್ಯಾಜ ಶೇಖರಣಾ ಘಟಕವಾಗಿ ರೂಪುಗೊಂಡಿದೆ. ಇದರ ನೂರು ಮೀಟರ್ ವ್ಯಾಪ್ತಿಯಲ್ಲಿ ಶಾಲಾ, ಕಾಲೇಜು ಇದ್ದು 1000 ಮಕ್ಕಳು ದಿನನಿತ್ಯ ದುರ್ವಾಸನೆಯಿಂದಾನೆ ಶಾಲೆಗೆ ಹೋಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಶಾಸಕತ್ವ ಅವಧಿಯಲ್ಲಿ ಶಾಲಾ ಕಾಲೇಜು, ತಾಂತ್ರಿಕ ಶಿಕ್ಷಣ ವಿದ್ಯಾ ಸಂಸ್ಥೆಗಳು, ರಸ್ತೆಗಳ, ಬೃಹತ್ ಸೇತುವೆಗಳು, ಕಡಲ್ ಕೊರೆತಕ್ಕೆ ತಡೆಗೋಡೆ, ವಸತಿ ಯೋಜನೆ ಮುಂತಾದ ಯೋಜನೆಗಳ ಅಭಿವೃದ್ಧಿ ಬಗ್ಗೆ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಸರಿಯಾದ ಪೂರ್ವ ತಯಾರಿಯಿಲ್ಲದೆ ಕಾಪು ಹೊಸ ತಾಲೂಕು ಘೋಷಣೆ ಮಾಡಿದ್ದೂ ಕನಿಷ್ಠ 32 ಇಲಾಖೆಗಳು ಕಾರ್ಯನಿರ್ವಹಿಸಬೇಕಾದಲ್ಲಿ ಈ ತನಕ ಎರಡು ಮೂರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದೆ. ನನ್ನ ಬೇಡಿಕೆ ಮೇರೆಗೆ ಈಗಾಗಲೇ ಮಿನಿ ವಿಧಾನಸೌಧಕ್ಕೆ ಪ್ರಾಥಮಿಕ ಹಂತದ ಸರ್ವೇ ಕೂಡ ಮಾಡಲಾಗಿದೆ, ಅನುದಾನ ಭರವಸೆ ಕೂಡ ಸಿಕ್ಕಿದೆ, ಮಾಜಿ ಶಾಸಕರ ಅಗ್ಗದ ಪ್ರಚಾರ, ಕೋಟಿ ಲೆಕ್ಕಗಳನ್ನು ನೀಡುದನ್ನು ಬಿಟ್ಟು ವಾಸ್ತವಿಕ ಸತ್ಯಂಶವನ್ನು ತಿಳಿದುಕೊಳ್ಳುವುದು ಉತ್ತಮ. ಮುಂದಿನ ದಿನಗಳಲ್ಲಿ ಸನ್ಮಾನ್ಯ ಯಡಿಯೂರಪ್ಪ ರವರ ನೇತೃತ್ವದ ಸರಕಾರ ಉತ್ತಮ ಆಡಳಿತ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ವಿಶ್ವಾಸವಿದೆ ಏoದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…