ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಉಚ್ಚಿಲ ತುಂಬೆ ಕರ್ಕೆರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ” ಬಿಜೆಪಿಯವರು ಕೇವಲ ಮೋದಿ ಹೆಸರಲ್ಲಿ ಮತ ಕೇಳಿ ಜನರನ್ನ ಮರುಳು ಮಾಡಿದ್ದಾರೆ. ಜಾತಿ,ಧರ್ಮ,ದೇವರ ಹೆಸರಿನಲ್ಲಿ ಮತಯಾಚಿಸಿ ಇಂದು ಗೆಲುವು ಸಾಧಿಸಿರಬಹುದು ಆದ್ರೆ ಕಾಪುವಿನಲ್ಲಿ ನಾವು ಮಾಡಿರುವಷ್ಟು ಅಭಿವೃದ್ದಿ ಕಾರ್ಯ ಇವ್ರಿಂದ ಮಾಡಲು ಸಾಧ್ಯವಾಗಿಲ್ಲ, ಈಗಿನ ಶಾಸಕರಿಗೆ ಕಾಪುವನ್ನ ತಾಲೂಕ್ ಮಾಡಬೇಕೆಂದು ಕನಸಿನಲ್ಲಿಯೂ ಅನ್ನಿಸಿರಲು ಸಾಧ್ಯವಿಲ್ಲ, ಮತ್ತು ನಾನು ಸೋಲಿನಿಂದ ಕಂಗೆಟ್ಟಿಲ್ಲ ,ಕ್ಷೇತ್ರ ಬಿಡುವ ಪ್ರಮೇಯನೆ ಇಲ್ಲ ಸದಾ ಕ್ಷೇತ್ರದ ಜನರ ಜೊತೆ,ಕಾರ್ಯಕರ್ತರ ಜತೆಗಿದ್ದೇನೆಂದರು.
ಮುಂದಿನ ದಿನದಲ್ಲಿಯೂ ಕೂಡ ನಾವೂ ಹಾಕಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಈ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬರುವ ವ್ಯಕ್ತಿಯ ಜತೆ ಸೇರಿಕೊಂಡು ಪ್ರಯತ್ನಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವಿನ್ ಚಂದ್ರ ಶೆಟ್ಟಿ, ಕಾಪು ಯೋಜಾನ ಪ್ರಾಧಿಕಾರ ಅಧ್ಯಕ್ಷ ದಿವಾಕರ್ ಶೆಟ್ಟಿ ಕಾಪು,
ದೇವಿಪ್ರಸಾದ್ ಶೆಟ್ಟಿ ಬೆಳಪು, ದೀಪಕ್ ಕುಮಾರ್ ಏರ್ಮಾಳ್ ,ಗೀತಾ ವಾಗ್ಲೆ,ಎಮ್.ಎ ಗಫೂರ್, ವಿನಯ್ ಬಲ್ಲಾಳ್ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು .
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…
ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…
ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…