ರಿಯಾದ್: ಸೌದಿ ಅರೇಬಿಯಾಗೆ ಪ್ರಯಾಣಿಸುವವರು ತಮ್ಮೊಂದಿಗೆ ಔಷಧಗಳನ್ನು ಕೊಂಡೊಯ್ಯಲು ಬಯಸಿದರೆ, ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ನೀಡಿರುವ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೌದಿ ಅರೇಬಿಯ ಸರ್ಕಾರ ತಿಳಿಸಿದೆ.
ಹೊಸ ನಿಯಮದ ಅನ್ವಯ ನೋವು ನಿವಾರಕಗಳು, ನಿದ್ರೆಯ ಮಾತ್ರೆಗಳು ಅಥವಾ ಮನೋವೈದ್ಯಕೀಯ ಔಷಧಿಗಳಂತಹ ನಿಯಂತ್ರಿತ ಔಷಧಗಳನ್ನು ಸಾಗಿಸುವ ಮುನ್ನ, ಪ್ರಯಾಣಿಕರು ಅವುಗಳಿಗೆ ಮೊದಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.
SFDA ಯ ನಿಯಂತ್ರಿತ ಔಷಧ ವ್ಯವಸ್ಥೆ (CDS) ಆನ್ಲೈನ್ ಪೋರ್ಟಲ್ ಮೂಲಕ ಸರಳವಾಗಿ ಅರ್ಜಿ ಸಲ್ಲಿಸಬಹುದು. ಈ ವ್ಯವಸ್ಥೆಯ ಉದ್ದೇಶ, ಪ್ರಯಾಣಿಕರು ತಮ್ಮ ವೈದ್ಯಕೀಯ ಅಗತ್ಯಗಳನ್ನು ಕಾನೂನುಬದ್ಧವಾಗಿ ಸಾಗಿಸಲು ಅನುಕೂಲ ಮಾಡಿಕೊಡುವುದು ಮತ್ತು ಪೋರ್ಟ್ ಗಳಲ್ಲಿ ವಿಳಂಬ ತಪ್ಪಿಸುವುದು.
ಔಷಧಿ ಗಳನ್ನು ಸಾಗಿಸಲು ಅನುಮತಿ ಪಡೆಯುವುದು ಹೇಗೆ?
1. ಖಾತೆ ರಚನೆ
CDS ಪ್ಲಾಟ್ಫಾರ್ಮ್ನಲ್ಲಿ ವೈಯಕ್ತಿಕ ಖಾತೆ ರಚಿಸಬೇಕು.
2. ಇ-ಪರವಾನಗಿಗಾಗಿ ಅರ್ಜಿ ಸಲ್ಲಿಕೆ
ವೈಯಕ್ತಿಕ ಮಾಹಿತಿ, ಪ್ರಯಾಣ ವಿವರಗಳು ಹಾಗೂ ಕೊಂಡೊಯ್ಯುವ ಔಷಧಗಳ ವಿವರಗಳನ್ನು ಅರ್ಜಿಯ ಜೊತೆ ನಮೂದಿಸಬೇಕು.
3.ದಾಖಲೆಗಳ ಅಪ್ಲೋಡ್
ಮಾನ್ಯವಾಗಿರುವ ವೈದ್ಯಕೀಯ ಪ್ರಿಸ್ಕ್ರಿಪ್ಷನ್, ವೈದ್ಯರಿಂದ ನೀಡಲಾದ ವೈದ್ಯಕೀಯ ವರದಿಯ ಜೊತೆಗೆ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಬೇಕು. ಗುರುತಿನ ಚೀಟಿಯಾಗಿ ಪಾಸ್ಪೋರ್ಟ್/ ರೆಸಿಡೆಂಟ್ ಐಡಿ ಬಳಸಬಹುದು.
4. ಔಷಧದ ವಿವರಗಳನ್ನು ಘೋಷಿಸಬೇಕು.
ಈ ವೇಳೆ ಔಷಧದ ಹೆಸರು, ಅದರ ತಯಾರಿಕೆಯಲ್ಲಿ ಬಳಸಲಾದ ವಸ್ತುಗಳು, ಅದನ್ನು ತೆಗೆದುಕೊಳ್ಳುವ ವಿಧಾನವನ್ನು ತಿಳಿಸಬೇಕು. ಟ್ಯಾಬ್ಲೆಟ್/ಇಂಜೆಕ್ಷನ್ ಆಗಿದೆಯೇ ಎಂದು ನಮೂದಿಸಬೇಕು. ಅದರೊಂದಿಗೆ ಔಷಧ ಪ್ರಮಾಣ ಮತ್ತು ಅದರ ಪ್ಯಾಕೇಜ್ ಗಾತ್ರವನ್ನು ಉಲ್ಲೇಖಿಸಬೇಕು.
5.ವೈದ್ಯಕೀಯ ದೃಢೀಕರಣ ಅಗತ್ಯ.
ಅರ್ಜಿ ಸಲ್ಲಿಸುವವರು ಅಥವಾ ಅವರ ಕುಟುಂಬದವರಿಗೆ ಮಾತ್ರ ಬಳಸಲು ಎಂಬುದನ್ನು ಉಲ್ಲೇಖಿಸಬೇಕು.
6.ನಿಯಮ ಷರತ್ತುಗಳಿಗೆ ಒಪ್ಪಬೇಕು.
SFDA ನಿಯಮಗಳನ್ನು ಒಪ್ಪಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.
7. ಅರ್ಜಿಯ ಸ್ಥಿತಿ ಟ್ರ್ಯಾಕ್ ಮಾಡಿ
ಅರ್ಜಿಯ ಸ್ಥಿತಿಯನ್ನು ಆನ್ಲೈನ್ನಲ್ಲಿ ನೇರವಾಗಿ ಪರಿಶೀಲಿಸಬಹುದು. ಅರ್ಜಿ ಸ್ವೀಕೃತವಾಗಿದೆಯೇ ಅಥವಾ ತಿರಸ್ಕೃತಗೊಂಡಿದೆಯೇ ಎಂದು ಅಲ್ಲಿಯೇ ಪರಿಶೀಲಿಸಬಹುದು.
8. ಅನುಮತಿ ಪತ್ರ
ಅನುಮತಿ ಸಿಕ್ಕ ಬಳಿಕ ಅನುಮತಿ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿಕೊಂಡು ಜೊತೆಗೆ ತೆಗೆದುಕೊಂಡು ಹೋಗಬೇಕು.
ಸೌದಿ ಸರಕಾರ ಜಾರಿಗೊಳಿಸಿರುವ ನೂತನ ನಿಯಮಗಳಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಸಮಯದ ಉಳಿತಾಯವಾಗಲಿದೆ. ಮುಂಚಿತವಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಕಾಯುವ ಪ್ರಮೇಯ ಬರುವುದಿಲ್ಲ.
ಅನುಮತಿಗಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಎಲ್ಲವನ್ನೂ ಮನೆಯಿಂದಲೇ ಪೂರ್ಣಗೊಳಿಸಬಹುದು.
ಅರ್ಜಿ ಸಲ್ಲಿಸಬಹುದಾದ ಪೋರ್ಟಲ್ 24/7 ಲಭ್ಯವಿರುವುದರಿಂದ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…