Featured

ಸ್ನೇಹಿತನ ಶಸ್ತ್ರಚಿಕಿತ್ಸೆಗಾಗಿ ತನ್ನ ಜಮೀನನ್ನೇ ಮಾರಿದ ಗೆಳೆಯ..

ಬೆಳಗಾವಿ: ಇವರಿಬ್ಬರ 35 ವರ್ಷಗಳ ಸ್ನೇಹಕ್ಕೆ ಯಾವುದೂ ಅಡ್ಡ ಬರಲಿಲ್ಲ,  ಬೆಳಗಾವಿಯ ವ್ಯಕ್ತಿಯೊಬ್ಬ  ತನ್ನ ಸ್ನೇಹಿತನ ಲಿವರ್ ಪ್ಲಾಂಟೇಶನ್ ಗಾಗಿ ತನ್ನ ಜಮೀನನ್ನೇ ಮಾರಾಟ ಮಾಡಿ ಹಣ ನೀಡಿದ್ದಾನೆ.

ಬೆಳಗಾವಿಯ ಸಂದೀಪ್ ಮುಚಂಡಿ ಯಕೃತ್ತಿನ ಸಂಬಂಧದ ಕಾಯಿಲೆಯಿಂದ ಬಳಲುತ್ತಿದ್ದರು, ಹೀಗಾಗಿ ಶಸ್ತ್ರಚಿಕಿತ್ಸೆಗೊಳಪಡುವಂತೆ ಸಲಹೆ ನೀಡಿದ್ದರು. ಆದರೆ ತುಂಬಾ ಬಡತನದ ಹಿನ್ನೆಲೆಯಿಂದ ಬಂದ ಸಂದೀಪ್ ಅಷ್ಟು ಹಣ ಹೊಂದಿಸಲು ಸಾಧ್ಯವಾಗಲಿಲ್ಲ.

ಆದರೆ ಆತನಿಗೆ ಯಾರು ಹಣ ನೀಡಲು ಬರಲಿಲ್ಲ, ಆದರೆ ಈ ವೇಳೆ ಸಂದೀಪ್ ಸ್ನೇಹಿತ  ವಿಷ್ಣುಗಲ್ಲಿಯ ಬಾಬುಲಾಲ್ ಪಠಾಣ್ ತನ್ನ 1.5 ಗುಂಟೆ ಜಮೀನನ್ನು 22 ಲಕ್ಷ ಹಣಕ್ಕೆ ಮಾರಿ ಹಣ ನೀಡಿದ್ದಾನೆ, ಉಳಿದ 6 ಲಕ್ಷ ಹಣವನ್ನು ಕುಟುಂಬದ ಸದಸ್ಯರು ಅಡ್ಜಸ್ಟ್  ಮಾಡಿದ್ದಾರೆ, ಕಳೆದ ತಿಂಗಳು ಮುಂಬಯಿಯ ಅಪೊಲೋ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಸರ್ಜರಿ ಮಾಡಿಸಿದ್ದಾರೆ.
ಸಂದೀಪ್ ಗೆ ಸಹಾಯ ಮಾಡಲು ಯಾವ ಮಟ್ಟಕ್ಕೆ ನಾನು ಹೋಗಲು ಸಿದ್ಧ, ಆತನನ್ನು ರಕ್ಷಿಸುವುದಷ್ಟೇ ನನ್ನ ಗುರಿಯಾಗಿತ್ತು, ತನ್ನ ಸ್ನೇಹಿತನಿಗಾಗಿ ಕಿಡ್ನಿ ದಾನ ಮಾಡುವಂತೆ ಮಗನಿಗೆ ಕೇಳಬೇಕೆಂಬ ಯೋಚನೆ ಬಂದಿತ್ತು ಆದರೆ ವೈದ್ಯರು ಅಂಗ ಮ್ಯಾಚ್ ಆಗುವುದಿಲ್ಲ ಎಂದು ವೈದ್ಯರು ಹೇಳಿದಾಗ ಅದರ ಬದಲು ಹಣ ಹೊಂದಿಸಿದೆ ಎಂದು ಹೇಳಿದ್ದಾರೆ.
ವಿಷ್ಣುಗಲ್ಲಿಯ ನಿವಾಸಿ ಬಾಬುಲಾಲ್ ಪಠಾಣ್ ಮುಂಬಯಿಯ ವೈದ್ಯರ ಜೊತೆ  ಮಾತನಾಡಿ, ಹಣ ಹೊಂದಿಸಲು ಹೋರಾಟ ಮಾಡಿರುವುದಾಗಿ ಹೇಳಿದೆ, ಆಗ ವೈದ್ಯರು ಬಿಲ್ ನಲ್ಲಿ 4 ಲಕ್ಷ ಹಣ ಕಡಿಮೆ ಮಾಡಿದರು ಎಂದು ತಿಳಿಸಿದರು.
ಬಾಬುಲಾಲ್  ಸಂದೀಪ್ ಮತ್ತು ಅವರ ಕುಟುಂಬದವರಿಗಾಗಿ ಸಂಪೂರ್ಣ ಬೆಂಬಲ ನೀಡಿದ್ದು, ಹಣ ಹೊಂದಿಸಲು ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.
ಸಂದೀಪ್ ಈಗ ಚೇತರಿಸಿಕೊಳ್ಳುತ್ತಿದ್ದು, ಅವರ ಪರಿಸ್ಥಿತಿ ನಾರ್ಮಲ್ ಆಗಿದೆ, ಸದ್ಯ ಸಂದೀಪ್ ಮುಂಬಯಿಯಲ್ಲಿದ್ದು, ನಿಯಮಿತ ಚಿಕಿತ್ಸೆ ಪಡೆಯುತ್ತಿದ್ದಾರೆ.
Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

16 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

2 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago