ಮಂಗಳೂರು: ಕೋಸ್ಟಲ್’ವುಡ್ ನ ಮೋಸ್ಟ್ ಹ್ಯಾಂಡ್ಸ್ ಸಮ್ ಬಾಯ್ “ಪ್ರಥ್ವಿ ಅಂಬರ್” ಅವರು ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ . ಹೌದು, ಎಷ್ಟೋ ಹುಡುಗಿಯರ ಕ್ರಶ್ ಆಗಿರುವ ತುಳುವ ರತ್ನ “ಪ್ರಥ್ವಿ ಅಂಬರ್ ” ಇದೀಗ ರಿಯಲ್ ಲೈಫ್ ನಲ್ಲಿ ಒಬ್ಬಾಕೆ ಹೃದಯ ಕದ್ದು ಮದುವೆಗೆ ಸಜ್ಜಾಗಿದ್ದಾರೆ.
10 ವರ್ಷಗಳಿಂದ ಹಿಂದೆ ಡ್ಯಾನ್ಸ್ ಶೋ ಒಂದರಲ್ಲಿ ಪಾರುಲ್ ಶುಕ್ಲಾ ಜೊತೆ ಆಕಸ್ಮಿಕವಾಗಿ ಮಾತನಾಡಿ, ಪರಿಚಯ ಮಾಡಿಕೊಂಡ ಪೃಥ್ವಿ ಅಂಬರ್, ಮಾತು, ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ದಡ ಸೇರಿದೆ. ಮೂಲತಃ ಉತ್ತರ ಭಾರತದ ಪಾರುಲ್ ಶುಕ್ಲಾ, ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಪಡೆದು ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ ಇವರಿಬ್ಬರು ಸತಿ ಪತಿಗಳಾಗಲಿದ್ದು ‘ಪ್ರಥ್ವಿ – ಪಾರುಲ್ ಪ್ರೇಮ ಕಾವ್ಯ’ವನ್ನು ಪ್ರಥ್ವಿ ಮನೆಯಲ್ಲಿ ತಿಳಿಸಿದ್ದು ಪಾರುಲ್ ಅವರೇ ಅನ್ನೋದು ವಿಶೇಷ
ಸದ್ಯ ಕೋಸ್ಟಲ್ವುಡ್ನ ಬಹು ಬೇಡಿಕೆಯ ನಟ ಆಗಿರುವ ಪೃಥ್ವಿ ಅಂಬರ್, ತುಳು ಭಾಷೆಯ ಬರ್ಕೆ ಸಿನಿಮಾದ ಬಣ್ಣದ ಜಗತ್ತಿಗೆ ಕಾಲಿಟ್ಟರು. ಈ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಜನಪ್ರೀಯರಾದ ಅವರು, 2016ರಲ್ಲಿ ಬಿಡುಗಡೆಯಾದ ‘ಪಿಲಿಬೈಲ್ ಯಮುನಕ್ಕ’ ಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ತನ್ನದಾಗಿಸಿಕೊಂಡು ಎಲ್ಲೆಡೆ ಮನೆಮಾತಾದರು. ಇವರ ಅಭಿನಯದ ತುಳು ಚಿತ್ರ ಲಾಸ್ಟ್ಬೆಂಚ್ ಹಾಗೂ ಇಂಗ್ಲೀಷ್, ಮತ್ತು ಕನ್ನಡ ಸಿನಿಮಾ ಪ್ರವೇಶ, ದಿಯಾ, ಇನ್ನಷ್ಟೇ ತೆರೆ ಕಾಣಬೇಕಾಗಿದೆ. ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಆರ್.ಜೆ. ಹಾಗೂ ವಿ.ಜೆ. ಆಗಿ ಮಿಂಚಿರುವ ನಾಗರಾಜ್ ಅಲಿಯಾಸ್ ಪೃಥ್ವಿ ಅಂಬರ್ ಡ್ಯಾನ್ಸ್ ರಿಯಾಲಿಟಿ ಶೋ, ಧಾರವಾಹಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆಯಾಗಿದ್ದಾರೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…