Featured

ಸ್ವಾತಂತ್ರ್ಯಾನಂತರದಲ್ಲಿ ಇದೇ ಮೊದಲ ಬಾರಿಗೆ ದೇಶದ ಮೂಲೆಮೂಲೆಯಲ್ಲೂ ಆಡಳಿತ ಪರ ಅಲೆ ಕಾಣುತ್ತಿದೆ : ವಾರಾಣಸಿಯಲ್ಲಿ ಪ್ರಧಾನಿ ಮೋದಿ -Vishwanews24

ವಾರಾಣಸಿ: ಸ್ವಾತಂತ್ರ್ಯಾನಂತರದಲ್ಲಿ ಇದೇ ಮೊದಲ ಬಾರಿಗೆ ದೇಶದ ಮೂಲೆಮೂಲೆಯಲ್ಲೂ ಆಡಳಿತ ಪರ ಅಲೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರ.

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮರುಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸುವ ಮುನ್ನ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ಗೆಲ್ಲಲಿ ಬಿಡಲಿ… ಒಟ್ಟಿನಲ್ಲಿ ಪ್ರಜಾಪ್ರಭುತ್ವಕ್ಕೆ ಗೆಲುವಾಗಬೇಕು. ಮೇ ತಿಂಗಳ ಬಿರುಬಿಸಿಲನ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಮತದಾನದ ಹಿಂದಿನ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಡಬೇಕು. ಎಷ್ಟು ಪುರುಷರು ಮತದಾನ ಮಾಡುತ್ತಾರೋ ಅದಕ್ಕಿಂತ ಶೇ.5 ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಸೂಚಿಸಿದರು.

100 ಜನ ಪುರುಷರು ಮತದಾನ ಮಾಡಿದರೆ, 105 ಮಹಿಳೆಯರು ಮತದಾನ ಮಾಡುವ ರೀತಿ ಎಚ್ಚರವಹಿಸಬೇಕು. ಕೇವಲ ವಾರಾಣಸಿಯನ್ನು ಗೆದ್ದರೆ ಸಾಲದು, ಪ್ರತಿಯೊಂದು ಬೂತ್​ ಅನ್ನೂ ನಾವು ಗೆಲ್ಲಬೇಕು. ಹೀಗೆ ಆಗದಿದ್ದರೆ ವಾರಾಣಸಿಯಲ್ಲಿನ ಗೆಲುವನ್ನು ಆಸ್ವಾದಿಸಲು ನನಗೆ ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಈ ಬಾರಿಯ ವಾರಾಣಸಿ ಚುನಾವಣೆ ಹೇಗಿರಬೇಕು ಎಂದರೆ, ನಮ್ಮ ದೇಶದ ರಾಜಕೀಯ ಪಂಡಿತರು ವಾರಾಣಸಿಯ ಐತಿಹಾಸಿಕ ಚುನಾವಣೆಯ ಕುರಿತು ಪುಸ್ತಕ ಬರೆಯುವಂತೆ ಇರಬೇಕು ಎಂದು ಹೇಳಿದರು.

ಗುರುವಾರ ನಡೆದ ತಮ್ಮ ರೋಡ್​ ಶೋಗೆ ವ್ಯಕ್ತವಾದ ಜನಬೆಂಬಲವನ್ನು ಗಮನಿಸಿದಾಗ ತಾವು ಈಗಾಗಲೆ ವಾರಾಣಸಿ ಕ್ಷೇತ್ರದಿಂದ ಗೆದ್ದಂತೆ ಭಾಸವಾಗುತ್ತಿದೆ. ವಾರಾಣಸಿಯ ಜನರು ರೋಡ್​ ಶೋಗೆ ವ್ಯಕ್ತಪಡಿಸಿದ ಬೆಂಬಲ ನೋಡಿದ ಬಳಿಕ ಮಾಧ್ಯಮಗಳು ಕೂಡ ಇನ್ನೇನು ಬಿಜೆಪಿ ಗೆದ್ದಾಗಿದೆ ಎಂದೇ ಹೇಳುತ್ತಿದ್ದು, ವಾರಾಣಸಿಯ ಚುನಾವಣೆ ಕುರಿತು ಹೆಚ್ಚಿನ ಕುತೂಹಲವನ್ನು ಕಳೆದುಕೊಂಡಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ನಾನು ಪ್ರಧಾನಿ ಎಂಬ ಅಹಂನಲ್ಲಿ ಯಾರನ್ನೂ ಭೇಟಿಯಾಗಲು ನಿರಾಕರಿಸಲಿಲ್ಲ. ಪಕ್ಷದ ಒಬ್ಬನೇ ಒಬ್ಬ ಕಾರ್ಯಕರ್ತನನ್ನೂ ಭೇಟಿಯಾಗಲು ಒಲ್ಲೆಯೆನ್ನಲಿಲ್ಲ. ನನ್ನೊಳಗಿನ ಕಾರ್ಯಕರ್ತನನ್ನು ಜೀವಂತವಾಗುಳಿಸಿಕೊಂಡೆ. ಪ್ರಧಾನಿಯಾಗಿ, ಸಂಸದನಾಗಿ ಮತ್ತು ಕಾರ್ಯಕರ್ತನಾಗಿ ನನ್ನ ಕರ್ತವ್ಯಗಳನ್ನು ನಾನೆಂದೂ ಮರೆಯಲಿಲ್ಲ… ಎಂದು ಪ್ರಧಾನಿ ಹೇಳಿದರು.

 

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

7 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

7 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

7 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

7 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

8 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

8 hours ago