ಹಣಕ್ಕೆ ಸಂಬಂಧಿಸಿದ ನಂಬಿಕೆಗಳ ಬಗ್ಗೆ ನಿಮಗೆಷ್ಟು ಗೊತ್ತು..ಹಾಗಾದರೆ ಓದಿ ಈ ವರದಿ – Vishwanews24

ಪುರಾಣ ಕಥೆಗಳ ಅನುಸಾರ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ. ಅವು ನಮ್ಮನ್ನು ಧಾರ್ಮಿಕ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಜೊತೆಗೆ ಕೆಲವು ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತದೆ ಎನ್ನುವ ನಂಬಿಕೆಯಿದೆ. ನಮ್ಮ ಜಗತ್ತು ಹಣ ಎನ್ನುವುದರ ಮೇಲೆ ನಿಂತಿದೆ. ಅದಕ್ಕೆ ಸಂಬಂಧಿಸಿದಂತೆ ಕೆಲವು ನಂಬಿಕೆ ಅಥವಾ ಆಚರಣೆಯನ್ನು ಅನುಸರಿಸುವುದರಿಂದ ದೀರ್ಘ ಸಮಯಗಳ ಕಾಲ ಉತ್ತಮ ಹಣದ ಹರಿವನ್ನು ಪಡೆದುಕೊಳ್ಳಬಹುದು ಎಂದು ಸಹ ಹೇಳಲಾಗುವುದು.

ನಿಜ, ಹಣಕ್ಕೆ ಸಂಬಂಧಿಸಿದಂತೆ ಅನೇಕ ಮೂಢನಂಬಿಕೆಗಳಿವೆ. ಅವು ವಿವಿಧ ದೇಶಗಳಿಂದ ಹಾಗೂ ಧರ್ಮಗಳ ಆಚರಣೆಯಿಂದ ಬಂದಿವೆ. ಆ ಆಚರಣೆಯ ಕ್ರಮಗಳು ವಿಭಿನ್ನತೆಯಿಂದ ಕೂಡಿದ್ದು, ವಿವಿಧ ಬಗೆಯ ಅರ್ಥವನ್ನು ನೀಡುವುದು. ಜೊತೆಗೆ ನಮ್ಮ ಮಾನಸಿಕ ಚಿಂತನೆಗಳ ಮೇಲೆ ಹಾಗೂ ಜೀವನ ಕ್ರಮಗಳ ಮೇಲೆ ಗಂಭೀರವಾದ ಪ್ರಭಾವ ಬೀರುವುದು ಎಂದು ಹೇಳಲಾಗುವುದು. ಹಾಗಾದರೆ ಹಣಕ್ಕೆ ಸಂಬಂಧಿಸಿದ ಆ ನಂಬಿಕೆಗಳು ಯಾವವು? ಎನ್ನುವುದನ್ನು ತಿಳಿಯೋಣ ಬನ್ನಿ…

ನೆಲದ ಮೇಲೆ ಪರ್ಸ್ ಇಡುವುದು, ಬಾಗಿಲ ಹೊರಗೆ ಹಣ ಇಡುವುದು

ಈ ಕ್ರಮದ ಮೂಢನಂಬಿಕೆಯು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದನ್ನು ಚೀನಾ ಮೂಲದ ಮೂಢ ನಂಬಿಕೆ ಎಂದು ಪರಿಗಣಿಸಲಾಗಿದೆ. ನೆಲದ ಮೇಲೆ ಪರ್ಸ್ ಅನ್ನು ಇಟ್ಟು ಬಾಗಿಲ ಹೊರಗೆ ಹಣವನ್ನು ಇಟ್ಟರೆ ಹಣದ ಹರಿವು ಹೆಚಾಗುವುದು. ಎಂದಿಗೂ ಹಣದ ಕೊರತೆ ಉಂಟಾಗದು. ಹಣವು ಸದಾ ನಮ್ಮ ಹಿಂದೆಯೇ ಬರುತ್ತದೆ ಎಂದು ಹೇಳಲಾಗುವುದು.

ಬ್ಯಾಗ್ ಅಥವಾ ಪರ್ಸ್ ಒಳಗೆ ಹಣ ಇಡಬೇಕು

ಬ್ಯಾಗ್ ಅಥವಾ ಪರ್ಸ್ ಅನ್ನು ಉಡುಗೊರೆಯಾಗಿ ನೀಡುವಾಗ ಅದರೊಳಗೆ ಹಣವನ್ನು ಇಟ್ಟು ಉಡುಗೊರೆಯನ್ನು ನೀಡಬೇಕು. ಪಡೆದ ಉಡುಗೊರೆಯನ್ನು ತೆರೆದಾಗ ಅದರಲ್ಲಿ ಹಣ ಇಲ್ಲದೆ ಖಾಲಿಯಾಗಿದ್ದರೆ ಅದು ಅವರ ಅದೃಷ್ಟವನ್ನು ಋಣಾತ್ಮಕ ಗೊಳಿಸುವುದು. ಹಾಗಾಗಿ ಇಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುವಾಗ ಸ್ವಲ್ಪ ಹಣವನ್ನು ಇಟ್ಟು ಕೊಡಬೇಕು ಎಂದು ಗ್ರೀಕ್ ನಂಬಿಕೆ ಹೇಳುತ್ತದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ನೆಲದ ಮೇಲೆ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವುದು

ನೆಲದ ಮೇಲೆ ಬಿದ್ದ ನಾಣ್ಯವನ್ನು ಹುಡುಕಿ ಎತ್ತಿಕೊಂಡರೆ ಅದು ಅತ್ಯಂತ ಅದೃಷ್ಟದ ಸಂಕೇತ ಎಂದು ಹೇಳಲಾಗುವುದು. ನಾಣ್ಯವನ್ನು ಹುಡುಕಿ ಎತ್ತಿಕೊಂಡರೆ ಅದು ನಮ್ಮ ಉತ್ತಮ ಅದೃಷ್ಟವನ್ನು ಸೂಚಿಸುವುದು ಎಂದು ಐರಿಶ್ ಜಾನಪದ ನಂಬಿಕೆಯು ವ್ಯಕ್ತಪಡಿಸುತ್ತದೆ. ಯಾರು ನಾಣ್ಯವನ್ನು ಹುಡುಕಿ ಎತ್ತಿಕೊಳ್ಳುತ್ತಾರೆ ಅವರಿಗೆ ಕೆಟ್ಟದ್ದು ಸಂಭವಿಸುವುದಿಲ್ಲ. ಜೊತೆಗೆ ಸದಾ ಕಾಲ ಅವರ ಕೈಯಲ್ಲಿ ಹಣ ಇರುತ್ತದೆ ಎಂದು ಹೇಳಲಾಗುವುದು.

ನಾಣ್ಯಗಳನ್ನು ಟಾಸ್ ಹಾರಿಸಿ ಅದೃಷ್ಟದ ಬಗ್ಗೆ ತಿಳಿದುಕೊಳ್ಳುವುದು

ನಮ್ಮ ಮನಸ್ಸಿನಲ್ಲಿ ಇರುವ ಆಸೆಗಳು ಈಡೇರುವುದೇ? ಅಥವಾ ಇಲ್ಲವೇ ಎನ್ನುವುದನ್ನು ನಾಣ್ಯವನ್ನು ಹಾರಿಸಿ ಟಾಸ್ ನೋಡಿದರೆ ತಿಳಿಯುವುದು. ಈ ನಂಬಿಕೆಯು ಸಾಮಾನ್ಯವಾದ ನಂಬಿಕೆ. ಇದನ್ನು ಜಗತ್ತಿನಾದ್ಯಂತ ನಂಬುವ ಒಂದು ನಂಬಿಕೆ ಎಂದೂ ಹೇಳಬಹುದು. ಅಂದುಕೊಂಡ ನಾಣ್ಯದ ಮುಖವು ಬಿದ್ದರೆ ಅದು ಭವಿಷ್ಯದಲ್ಲಿ ನಿಜವಾಗಿಯೂ ಸಂಭವಿಸುವುದು ಎಂದು ಹೇಳುತ್ತಾರೆ. ನಾಣ್ಯವನ್ನು ಹಾರಿಸುವುದರಿಂದ ಅದೃಷ್ಟವು ಕಾರಂಜಿಯ ರೀತಿಯಲ್ಲಿ ಸುರಿಯುವುದು ಎಂದು ಸಹ ನಂಬಲಾಗುತ್ತದೆ.

ಹೊಸ ವರ್ಷದ ಸಮಯದಲ್ಲಿ ಜೇಬಿನಲ್ಲಿ ಹಣವನ್ನು ತುಂಬಿಕೊಳ್ಳುವುದು

ಹೊಸ ವರ್ಷದ ಸಮಯದಲ್ಲಿ ನಮ್ಮ ಜೇಬಿನಲ್ಲಿ ಹೆಚ್ಚು ಹಣವನ್ನು ಇಟ್ಟುಕೊಂಡಿದ್ದರೆ ವರ್ಷ ಪೂರ್ತಿ ಹಣದ ಹರಿವು ಉತ್ತಮವಾಗಿ ಇರುವುದು. ಅಂದರೆ ಮುಂದಿನ 12 ತಿಂಗಳುಗಳ ಕಾಲ ಜೇಬಿನಲ್ಲಿ ಸದಾ ಹಣ ಇರುವಂತಹ ಅದೃಷ್ಟ ಒಲಿಯುವುದು ಎನ್ನುವ ನಂಬಿಕೆಯಿದೆ. ಲ್ಯಾಟಿನ್ ಸಂಪ್ರದಾಯದಿಂದ ಬಂದ ಈ ನಂಬಿಕೆಯನ್ನು ಪ್ರಪಂಚದಾದ್ಯಂತ ಅನುಸರಿಸುವುದನ್ನು ಕಾಣಬಹುದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಬಲಗೈಯಿಂದ ಹಣವನ್ನು ಸ್ವೀಕರಿಸುವುದು

ನಮಗೆ ಇತರರು ಹಣವನ್ನು ಕೊಡುವಾಗ ಅಥವಾ ನಾವೇ ಇತರರಿಗೆ ಹಣವವನ್ನು ಕೊಡುವಾಗ ಬಲಗೈ ಮೂಲಕವೇ ನೀಡಬೇಕು. ಎಡಗೈಯನ್ನು ಬಳಸಬಾರದು. ಅದು ಲಕ್ಷ್ಮಿ ದೇವಿಯನ್ನು ಅವಮಾನ ಮಾಡಿದಂತೆ. ಒಳ್ಳೆಯ ಕಾರ್ಯ ಹಾಗೂ ದೈವರ ಕೆಲಸ ಮಾಡುವಾಗ ಬಲಗೈಯಿಂದಲೇ ಮಾಡಬೇಕು. ಆಗ ಸಮೃದ್ಧಿ ಹಾಗೂ ಶ್ರೇಯಸ್ಸು ದೊರೆಯುವುದು. ಈ ಸಂಪ್ರದಾಯವು ದಕ್ಷಿಣ ಏಷ್ಯಾದ ಹಿಂದೂಗಳಿಂದ ಬಂದಿರುವ ನಂಬಿಕೆ ಎಂದು ಹೇಳಲಾಗುವುದು. ಹಣವನ್ನು ನೀಡುವಾಗ ಅಥವಾ ಪಡೆಯುವಾಗ ಬಲಗೈ ಬಳಸಿದರೆ ದೇವಿಯು ಪ್ರಸನ್ನಳಾಗುತ್ತಾಳೆ. ಜೊತೆಗೆ ಜೀವನ ಪರ್ಯಂತ ಆರ್ಥಿಕ ತೊಂದರೆ ಉಂಟಾಗದಂತೆ ಕಾಯುತ್ತಾಳೆ ಎಂದು ಹೇಳಲಾಗುವುದು.

ಸಂಪತ್ತಿನ ಮೂಲೆಯನ್ನು ತಿಳಿದುಕೊಳ್ಳಬೇಕು

ವಾಸ್ತು ಶಾಸ್ತ್ರದ ಪ್ರಕಾರ ಕುಬೇರ ಮೂಲೆಯಲ್ಲಿಯೇ ಹಣವನ್ನು ಇಡಬೇಕು. ಅದು ಆಸ್ತಿ ಹಾಗೂ ಐಶ್ವರ್ಯಗಳ ಸಮೃದ್ಧಿಗೆ ಸಹಾಯ ಮಾಡುವ ಮೂಲೆ. ಕುಬೇರ ಮೂಲೆಯಲ್ಲಿ ಹಣವನ್ನು ಇಟ್ಟರೆ ದೇವಿಯು ಒಲಿದು ಬರುವಳು. ಸದಾ ಹಣದ ಹರಿವು ತುಂಬಿರುತ್ತವೆ. ಹಣದ ನಾಶ ಉಂಟಾಗದು ಎಂದು ಹೇಳಲಾಗುವುದು. ಮನೆಯಲ್ಲಿ ಸಮೃದ್ಧಿ ಹಾಗೂ ಆರ್ಥಿಕ ಸ್ಥಿತಿಯ ಸುಧಾರಣೆ ಆಗುವುದು ಎಂದು ಹೇಳಲಾಗುತ್ತದೆ. ಹಾಗಾಗಿ ನಾವು ನಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕುಬೇರ ಮೂಲೆ ಅಥವಾ ಸಂಪತ್ತಿನ ಮೂಲೆ ಯಾವುದು ಎಂದು ಮೊದಲು ತಿಳಿದುಕೊಳ್ಳಬೇಕು. ಆಗ ಅಲ್ಲೇ ಹಣವನ್ನು ಇಡುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು.

ಶುಕ್ರವಾರ ಹಣವನ್ನು ನೀಡಬಾರದು

ಶುಕ್ರವಾರವು ಲಕ್ಷ್ಮಿ ದೇವಿಗೆ ಮೀಸಲಾದ ದಿನ. ಅಂದು ದೇವಿಯ ಆರಾಧನೆಯನ್ನು ಮಾಡಬೇಕು. ಶುಕ್ರವಾರದಂದು ಹಣವನ್ನು ಅನಗತ್ಯವಾಗಿ ದಾನ ಮಾಡುವುದು ಅಥವಾ ಅಗೌರವ ನೀಡುವುದು ಮಾಡಬಾರದು. ಹಾಗೆ ಮಾಡಿದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಜೊತೆಗೆ ಭವಿಷ್ಯದಲ್ಲಿ ಹಣದ ತೊಂದರೆ ಉಂಟಾಗುವುದು.

ಹಬ್ಬಗಳಲ್ಲಿ ಹಣ ದಾನ ಮಾಡಬಾರದು

ಹಬ್ಬ ಎಂದರೆ ಮನೆಯಲ್ಲಿ ವಿಶೇಷವಾದ ಸಂಭ್ರಮ ಹಾಗೂ ಸಡಗರವಿರುತ್ತದೆ. ಪ್ರತಿಯೊಂದು ಹಬ್ಬದಲ್ಲೂ ಎಲ್ಲಾ ದೇವತೆಗಳಿಗೆ ಪೂಜೆ ಸಲ್ಲಿಸಬೇಕು. ಜೊತೆಗೆ ನಿರ್ಗತಿಕರಿಗೆ ಆಹಾರದ ದಾನ ಮಾಡಬೇಕು. ಅದೇ ಹಣವನ್ನು ದಾನ ಮಾಡಬಾರದು. ಅಂತೆಯೇ ಹಬ್ಬದ ದಿನ ಹಣವನ್ನು ವ್ಯಯಮಾಡುವ ಆಟ, ಖರೀದಿಯನ್ನು ಮಾಡಬಾರದು. ಅದು ಅಶುಭ ಸೂಚಕ. ಭವಿಷ್ಯದಲ್ಲಿ ಆರ್ಥಿಕ ತೊಂದರೆಯನ್ನು ಆಹ್ವಾನಿಸಿದಂತೆ ಎನ್ನುವ ನಂಬಿಕೆಯಿದೆ.

ಸಾಯಂಕಾಲ ಹಣವನ್ನು ಮನೆಯಿಂದಾಚೆ ಹಾಕಬಾರದು

ಹಿಂದೂಗಳ ಆಚರಣೆ ಹಾಗೂ ಸಂಪ್ರದಾಯದ ಪ್ರಕಾರ ಸಾಯಂಕಾಲವು ಅತ್ಯಂತ ಪವಿತ್ರವಾದ ಸಮಯ. ಗೋಧೂಳಿ ಸಮಯ ಎಂದು ಸಹ ಹೇಳಲಾಗುವುದು. ಆ ಪವಿತ್ರವಾದ ಸಮಯದಲ್ಲಿ ಲಕ್ಷ್ಮಿ ದೇವಿ ಹಾಗೂ ಸಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶ ಪಡೆದುಕೊಳ್ಳುತ್ತವೆ. ಅಂತಹ ಸಮಯದಲ್ಲಿ ಹಣವನ್ನು ದಾನ ಮಾಡಿದರೆ ಅಥವಾ ಖರೀದಿ ಮಾಡಿದರೆ ತೊಂದರೆ ಉಂಟಾಗುವುದು. ಲಕ್ಷ್ಮಿ ದೇವಿ ಮನೆಯಿಂದ ಆಚೆ ಹೋಗುವಳು. ಆಗ ಆರ್ಥಿಕ ತೊಂದರೆ ಅತಿಯಾಗಿ ತಲೆದೂರುವುದು ಎಂದು ಹೇಳಲಾಗುತ್ತದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು – vishwanews24

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…

9 minutes ago

ರಾಮಮಂದಿರದ ಹುಂಡಿ ಕಳವು ಪ್ರಕರಣ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಬೇಕು : ಸೊರಕೆ ಆಗ್ರಹ – vishwanews24

ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…

22 minutes ago

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ – vishwanews24

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…

44 minutes ago

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ – vishwanews24

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…

55 minutes ago

ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ :  ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ – vishwanews24

ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ :  ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ ಮುಂಬೈ: ನವಿ ಮುಂಬೈ ಅಂತರರಾಷ್ಟ್ರೀಯ…

1 hour ago

ಸುರತ್ಕಲ್: ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ – vishwanews24

ಸುರತ್ಕಲ್: ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ ಸುರತ್ಕಲ್ : ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು…

1 hour ago