ದಕ್ಷಿಣ ಕನ್ನಡ

ಹದಿನೇಳು ಗಂಟೆಗಳಲ್ಲಿ ತುಳುಚಲನಚಿತ್ರ ನಿರ್ಮಾಣ : ಗಿನ್ನೆಸ್‌ ದಾಖಲೆಯ ಗರಿ

ಮಹಾನಗರ: ‘ಅಂಬರ್‌ ಕ್ಯಾಟರರ್’ ತುಳು ಚಲನಚಿತ್ರ ನಿರ್ಮಿಸಿರುವ ನಾಗೇಶ್ವರ ಸಿನಿ ಕಂಬೈನ್ಸ್‌ ಸಂಸ್ಥೆ ಇದೀಗ ಹದಿನೇಳು ತಾಸುಗಳಲ್ಲಿ ತುಳುಚಲನಚಿತ್ರ ನಿರ್ಮಿಸಿ ಗಿನ್ನೆಸ್‌ ದಾಖಲೆಗೆ ತುಳು ಚಲನಚಿತ್ರವನ್ನು ಕೊಂಡೊಯ್ಯಲು ಸಿದ್ಧತೆ ನಡೆಸಿದೆ.

ನಗರದಲ್ಲಿ ಶನಿವಾರ ಪ ಈ ಬಗ್ಗೆ ವಿವರಿಸಿದ ನಾಗೇಶ್ವರ ಸಿನಿ ಕಂಬೈನ್ಸ್‌ ನಿರ್ಮಾಪಕ ಕಡಂದಲೆ ಸುರೇಶ್‌ ಭಂಡಾರಿ ಅವರು ಗಿನ್ನೆಸ್‌ ದಾಖಲೆಗೆ ತುಳುಚಿತ್ರವನ್ನು ಕೊಂಡೋಯ್ಯುವ ದೃಷ್ಟಿಯಿಟ್ಟುಕೊಂಡು 17 ಗಂಟೆಯಲ್ಲಿ ತುಳುಚಿತ್ರ ನಿರ್ಮಾಣ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತುಳು ಚಿತ್ರರಂಗದಲ್ಲಿ 10 ಯಶಸ್ವಿ ಚಿತ್ರಗಳನ್ನು ನೀಡಿರುವ 10 ನಿರ್ದೇಶಕರು ಏಕಕಾಲದಲ್ಲಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 10 ನಾಯಕ ನಟರು ಅಭಿನಯಿಸಲಿದ್ದು ಬಹುಶಃ ತುಳುಚಲನಚಿತ್ರ ರಂಗದಲ್ಲಿ ಪ್ರಥಮ ಮಲ್ಟಿಸ್ಟಾರ್‌ ಚಿತ್ರ ಇದಾಗಲಿದೆ ಎಂದರು. ಕಥೆ, ಚಿತ್ರಕಥೆ-ಸಂಭಾಷಣೆ-ಸಂಕಲನ ಹರೀಶ್‌ ಕೊಟ್ಪಾಡಿಯವರದ್ದಾಗಿದೆ. ಖ್ಯಾತ ನಿರ್ದೇಶಕರಾದ ದೇವದಾಸ್‌ ಕಾಪಿಕಾಡ್‌, ವಿಜಯ ಕುಮಾರ್‌ ಕೊಡಿಯಾಲಬೈಲ್‌, ಪ್ರಕಾಶ್‌ ಪಾಂಡೇಶ್ವರ, ಮಯೂರ್‌ ಶೆಟ್ಟಿ, ರಂಜಿತ್‌ ಸುವರ್ಣ, ರಾಜ್‌ಕಮಲ್‌, ರಿತೇಶ್‌ ಬಂಗೇರ, ರಘುಶೆಟ್ಟಿ ಮುಂತಾದವರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅರ್ಜುನ್‌ ಕಾಪಿಕಾಡ್‌, ಸೌರಭ್‌ ಭಂಡಾರಿ, ರೂಪೇಶ್‌ ಶೆಟ್ಟಿ , ಪ್ರಥ್ವಿ ಅಂಬರ್‌, ಅಸ್ತಿಕ್‌ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಲಿದ್ದಾರೆ. ಖ್ಯಾತ ಹಾಸ್ಯ ನಟರ ಸಮಾಗಮ ಇದರಲ್ಲಿದೆ. ತಮಿಳಿನ ಧನುಷ್‌ ಅವರ ‘ಪುಲಿಕುಟ್ಟಿ ‘ ಚಿತ್ರ ಖ್ಯಾತಿಯ, ಸುಮಾರು 40 ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ರಾಜಸಿಂಹ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎಂದರು.

ಪೃಥ್ವಿ ಅಂಬರ್‌ ಅವರು ಮಾತನಾಡಿ, ಚಿತ್ರ ಶೀರ್ಷಿಕೆಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಈಗ ಶಿವರಾಜ್‌ ಕುಮಾರ್‌ ಅವರ ಅಭಿನಯದ, 18 ತಾಸುಗಳಲ್ಲಿ ನಿರ್ಮಾಣವಾಗಿರುವ ‘ಸುಗ್ರೀವ’ ಚಿತ್ರ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣದ ದಾಖಲೆಯನ್ನು ಹೊಂದಿದೆ. ತುಳುವಿನಲ್ಲಿ 24 ತಾಸುಗಳಲ್ಲಿ ನಿರ್ಮಾಣಗೊಂಡಿರುವ ‘ಸೆಪ್ಟಂಬರ್‌ 8’ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಚಿತ್ರವಾಗಿದೆ ಎಂದು ವಿವರಿಸಿದರು.

ವಿಜಯ ಕುಮಾರ್‌ ಕೊಡಿಯಾಲಬೈಲ್‌, ಪ್ರಕಾಶ್‌ ಪಾಂಡೇಶ್ವರ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ, ನಟ ಅರ್ಜುನ್‌ ಕಾಪಿಕಾಡ್‌ ಮಾತನಾಡಿ, ತುಳು ಚಿತ್ರರಂಗಕ್ಕೆ ಇನ್ನಷ್ಟು ಉತ್ತೇಜನ ದೊರೆಯುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಎಂದು ಹೇಳಿ ಶುಭಹಾರೈಸಿದರು.

ಮಯೂರ್‌ ಶೆಟ್ಟಿ, ರಂಜಿತ್‌ ಸುವರ್ಣ, ರಾಜ್‌ಕಮಲ್‌, ರಿತೇಶ್‌ ಬಂಗೇರ, ರಘುಶೆಟ್ಟಿ, ಪಮ್ಮಿ ಕೊಡಿಯಾಲಬೈಲ್‌, ತಮಿಳು ನಟ ರಾಜಸಿಂಹ, ನಟರಾದ ಸೌರಭ್‌ ಭಂಡಾರಿ, ಅಸ್ತಿಕ್‌ ಶೆಟ್ಟಿ , ಚೇತನ್‌ ರೈ, ಪೂಜಾ ಶೆಟ್ಟಿ , ಇಸ್ಮಾಯಿಲ್‌ ಮೂಡುಶೆಡ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Vishwa News 24

Recent Posts

ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್‌ಪಾಲ್ ಸುವರ್ಣ – vishwanews24

ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್‌ಪಾಲ್ ಸುವರ್ಣ ಉಡುಪಿ: ಮೀನುಗಾರಿಕೆ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ…

4 hours ago

ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ – vishwanews24

ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ ನವದೆಹಲಿ: ನಾಳೆ ಮಧ್ಯಾಹ್ನ ಮತ್ತೆ ಕಾಕ್ರೋಚ್‌ ಜನತಾ ಪಾರ್ಟಿ…

4 hours ago

ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ – vishwanews24

ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ ಉಡುಪಿ :ಜಿಲ್ಲೆಯಲ್ಲಿ ಕಾಣೆಯಾಗಿದ್ದ ಎಂಟನೇ…

5 hours ago

ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ – vishwanews24

ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ ನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರನ್ನ…

5 hours ago

ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ – vishwanews24

ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ…

5 hours ago

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಾಲು…

6 hours ago