ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು – Vishwanews24

ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು – Vishwanews24

ಹಿಂದೂ ಧರ್ಮದಲ್ಲಿ ವಿವಿಧ ಬಗೆಯ ಆಚರಣೆ ಹಾಗೂ ನಂಬಿಕೆಗಳು ಇರುವಂತೆ ಹಲವಾರು ದೇವತೆಗಳನ್ನು ಪೂಜಿಸಲಾಗುವುದು. ಅಂತಹ ದೇವತೆಗಳಲ್ಲಿ ಹನುಮಂತನೂ ಒಬ್ಬ. ಬ್ರಹ್ಮಚಾರಿಯಾದ ಹನುಮಂತನು ಭಗವಾನ್ ಶ್ರೀರಾಮನ ಪರಮ ಭಕ್ತ ಹಾಗೂ ಶನಿಯ ಆತ್ಮೀಯ ಸ್ನೇಹಿತ. ಸದಾ ರಾಮ ನಾಮವನ್ನು ಜಪಿಸುವ ಹನುಮಂತನಿಗೆ ವಿಶೇಷ ಮಂತ್ರಗಳನ್ನು ಹಾಗೂ ಪೂಜೆಯನ್ನು ಕೈಗೊಂಡರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಸುಲಭವಾಗಿ ಕರಗಿಹೋಗುತ್ತವೆ. ಜೀವನವು ಉತ್ಸಾಹ ಹಾಗೂ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸಾಲದ ತೊಂದರೆ, ಮಾನಸಿಕ ತೊಂದರೆ ಹಾಗೂ ಸಂಕಟಗಳಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಹನುಮಾನ್ ದೇವರ ಮಂತ್ರವನ್ನು ಗಣನೀಯವಾಗಿ ಜಪಿಸಿದರೆ ವ್ಯಕ್ತಿಗೆ ಆತ್ಮವಿಶ್ವಾಸ ಹಾಗೂ ಧೈರ್ಯವು ಹೆಚ್ಚುವುದು. ಶತ್ರುಗಳನ್ನು ಹತ್ತಿರ ಸುಳಿಯದಂತೆ ಮಾಡುವುದು. ಜೊತೆಗೆ ವ್ಯಕ್ತಿಯು ಸಕಾರಾತ್ಮಕ ಹಾದಿಯಲ್ಲಿ ಜೀವನವನ್ನು ನಡೆಸುವನು. ದೀರ್ಘಾವಧಿಯ ಜೀವನವನ್ನು ನಡೆಸುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುವರು. ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಕ್ರಿಯರಾಗಿ ಮತ್ತು ಶಕ್ತಿಯುತರಾಗಿ ಕೆಲಸ ನಿರ್ವಹಿಸುವರು. ಯಾವುದೇ ಬಗೆಯ ಸೋಮಾರಿತನ ಹಾಗೂ ಬೇಸರಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುವುದು.

ಹನುಮಾನ್ ಮಂತ್ರ-1
“ಓಂ ಹನುಮತೇ ನಮಃ” ಈ ಮಂತ್ರವನ್ನು ನಿತ್ಯವೂ ಜಪಿಸಿದರೆ ದೈಹಿಕ ಶಕ್ತಿ, ತ್ರಾಣ ಮತ್ತು ಶಕ್ತಿಯನ್ನು ಪಡೆದುಕೊಳ್ಳಬಹುದು. ಜೀವನದಲ್ಲಿ ನೀವು ಬಯಸಿದ ಸಂಗತಿಯನ್ನು ಪಡೆದುಕೊಳ್ಳಲು ಸದಾ ಈ ಮಂತ್ರವನ್ನು ಜಪಿಸಿ.

ಹನುಮಾನ್ ಮಂತ್ರ-2
“ಓಂ ಪವನ ನಂದನಾಯ”
“ಹಂಗ್ ಹನುಮಂತೇ ರುದ್ರಾತ್ಮಕಾಯ ಹಂಗ್ ಪಟ್” ಈ ಮಂತ್ರವು ಅಪರಿಮಿತ ಶಕ್ತಿಯನ್ನು ಹೊಂದಿರುವ ಅತ್ಯಂತ ರಹಸ್ಯವಾದ ಮಂತ್ರವಾಗಿದೆ. ಈ ಹನುಮಾನ್ ಮಂತ್ರವು ತ್ವರಿತ ಫಲಿತಾಂಶವನ್ನು ತರುತ್ತದೆ. ಯಾರು ಈ ಮಂತ್ರವನ್ನು ಜಪಿಸುತ್ತಾರೆ ಅವರಿಗೆ ಅಸಾಧಾರಣ ಶಕ್ತಿ ಹಾಗೂ ಅದೃಷ್ಟವು ಪ್ರಾಪ್ತಿಯಾಗುವುದು. ಈ ಮಂತ್ರವನ್ನು ನಿತ್ಯವೂ ಜಪಿಸಿ, ಮನಸ್ಸಿನ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು.

ಹನುಮಾನ್ ಮಂತ್ರ-3
” ಓಂ ನಮೋ ಭಗವತ ಆಂಜನೇಯ ಮಹಾಬಲಾಯ ಸ್ವಾಹಾ” ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮನ್ನು ಕಾಡುತ್ತಿರುವ ರೋಗಗಳು ನಿವಾರಣೆಯಾಗುವುದು. ದುಷ್ಟ ಶಕ್ತಿಯ ಕಾಟಗಳಿಂದ ರಕ್ಷಣೆ ದೊರೆಯುವುದು. ಜೊತೆಗೆ ಜೀವನದಲ್ಲಿ ಇರುವ ಅನೇಕ ಅಡಚಣೆಗಳನ್ನು ನಿವಾರಣೆಹೊಂದುವುದು. ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುವುದು. ಮನೆ ಮಂದಿಗೆ ಸಂತೋಷ ದೊರೆಯುವುದು. ನಾವು ಅಂದುಕೊಂಡ ಆಸೆಗಳು ಸುಲಭವಾಗಿ ನೆರವೇರುವುದು

ಹನುಮಾನ್ ಮಂತ್ರ-4
“ಓಂ ಐಂಗ್ ಹರಿಂಗ್ ಹನುಮತೆ ರಾಮದೂತೇ ಲಂಕವಿಧ್ವಾನ್‌ಸೇ
ಅಂಜನೀ ಗರ್ಭ್ ಸಂಭೂತಯ್ ಶಾಕಿನಿ ಡಾಕಿನಿ ಡಾಕಿನಿವಿಧ್ವಾನ್‍ಸೇ

ಕಿಲಿಕಿಲಿ ಬುಬುಕರೇನ ವಿಭಿಷನಯ ಹನುಮದ್ದೇವಾಯ
ಓಂ ಹ್ರಿಂಗ್ ಶ್ರಿಂಗ್ ಹಂಗ್ ಹಾ ಫತ್ ಸ್ವಾಹಾ.”

 

 

 

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

9 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

9 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

9 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

12 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

13 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

13 hours ago