ಹಳೆಯಂಗಡಿ: ಮದುವೆ ಸಂಭ್ರಮದಲ್ಲಿದ್ದ ವಧು-ವರರು ವರನ ಮೊದಲ ಪತ್ನಿ ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದಂತೆ ಪರಾರಿಯಾದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬಳಿ ನಡೆದಿದೆ.
ಶಿವಮೊಗ್ಗ-ಮೂಡಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕನಾಗಿರುವ ತೀರ್ಥಹಳ್ಳಿ ಮೂಲದ 40 ವರ್ಷದ ವ್ಯಕ್ತಿ ಮತ್ತು ಸಸಿಹಿತ್ಲು ಮೂಲದ ಯುವತಿಗೆ ಇಲ್ಲಿನ ಮದುವೆ ಮಂಟಪದಲ್ಲಿ ಗುರುವಾರ ಮದುವೆ ನಿಶ್ಚಯವಾಗಿತ್ತು. ಮದುವೆ ಹಾಲ್ನಲ್ಲಿ ಧಾರಾಕಾರ್ಯಕ್ಕೂ ಮುನ್ನ ವಧು-ವರರ ಫೋಟೋಶೂಟ್ ನಡೆಯುತ್ತಿತ್ತು. ಈ ವೇಳೆ ವರನ ಮೊದಲ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಮಂಟಪಕ್ಕೆ ಆಗಮಿಸಿದ್ದಾಳೆ. ಅಲ್ಲದೆ, ಒಬ್ಬ ಗಂಡು ಮಗು ಇದೆ ಎಂದೂ ಆಕೆ ಹೇಳಿದ್ದರು. ಈ ವಿಷಯ ವರನ ಕಿವಿಗೆ ಬೀಳುತ್ತಿದ್ದಂತೆ ಫೋಟೋಶೂಟ್ ನಡೆಯುತ್ತಿದ್ದಲ್ಲಿಂದಲೇ ವಧುವನ್ನು ಕರೆದುಕೊಂಡು ಚಿನ್ನಾಭರಣ ಸಹಿತ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವರನ ಕಡೆಯಿಂದ ಐವರು ಮಾತ್ರ ಮದುವೆಗೆ ಆಗಮಿಸಿದ್ದರು ಎನ್ನಲಾಗಿದೆ.
ವರ ಈ ಹಿಂದೆ ಮದುವೆಯಾಗಿರುವ ವಿಷಯ ವಧುವಿಗೆ ತಿಳಿದಿತ್ತಾದರೂ, ಇಬ್ಬರು ಪ್ರೀತಿಸುತ್ತಿದ್ದರು. ಅಲ್ಲದೆ, ಆತ ಮೊದಲ ಪತ್ನಿಗೆ ವಿಚ್ಚೇದನ ನೀಡಲು ಅರ್ಜಿ ಹಾಕಿದ್ದಾನೆ ಎಂದೂ ತಿಳಿಸಿಲ್ಲ. ಯಾವುದೇ ವಿಚಾರವನ್ನು ವಧು ಮನೆಯಲ್ಲಿ ಹೇಳಿರಲಿಲ್ಲ ಎನ್ನಲಾಗಿದೆ. ಮೂಲ್ಕಿ ಪೊಲೀಸ್ ಠಾಣೆಗೆ ವಧುವಿನ ಪೋಷಕರು ತೆರಳಿ ಮಾಹಿತಿ ನೀಡಿದ್ದು, ಚಿನ್ನಾಭರಣ ಹಿಂತಿರುಗಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮಾಡಿದ ಅಡುಗೆ ಕೂಡಾ ಹಾಗೆಯೇ ಉಳಿದಿದ್ದು, ಸಭಾಂಗಣದವರು ಊಟವನ್ನು ಊರಿನವರಿಗೆ ಹಂಚಿದ್ದಾರೆ.
ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 32ನೇ ಕಂತಿನ ಹಣ ಬಿಡುಗಡೆಯಾಗಿದೆ.…
ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ ಮೈಸೂರು: ನನ್ನ ಅವಶ್ಯಕತೆ ಇರಲಿಲ್ಲವೇನೋ ?…
ಶಿರ್ವ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು ಶಿರ್ವ : ರಸ್ತೆ ದಾಟಲು ನಿಂತಿದ್ದ…
ಕೊಟ್ಟಿಗೆಹಾರ: ಭೀಕರ ರಸ್ತೆ ಅಪಘಾತ ; ಲಾರಿಗೆ ಕಾರು ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು ಕೊಟ್ಟಿಗೆಹಾರ: ವಿಲ್ಪುರಂ - ಮಂಗಳೂರು…
ಹೆಬ್ರಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಮೃತ್ಯು ಉಡುಪಿ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು…
ಉಡುಪಿ: ಡೇವಿಡ್ ಡಿಸೋಜ ಕೊಲೆ ಪ್ರಕರಣ : ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ; ಶೂಟರ್ ಕಾಲಿಗೆ ಗುಂಡೇಟು…