ಕಟಪಾಡಿ: ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ,ರಾಜ್ಯ ಬಿಜೆಪಿ ನಾಯಕಿ ಗೀತಾಂಜಲಿ ಎಮ್ ಸುವರ್ಣ ಭಾರತ ಲಾಕ್-ಡೌನ್ ಆದ ದಿನದಿಂದ ಪ್ರತಿದಿನ ಮಧ್ಯಾಹ್ನ ಹಸಿವಿನಿಂದ ಬಳಲುತ್ತಿರುವ ಬಡವರಿಗೆ,ನಿರ್ಗತಿಕರಿಗೆ,ಕೂಲಿಕಾರ್ಮಿಕರಿಗೆ ಅನ್ನವನ್ನು ಖುದ್ದಾಗಿ ತಯಾರಿಸುತ್ತಿದ್ದಾರೆ.
ಪ್ರತಿದಿನ ಸುಮಾರು 400 ಮಂದಿಗೆ ಅನ್ನದ ಪೊಟ್ಟನ ತಯಾರಿಸಿ ವಿತರಿಸುತ್ತಿದ್ದು ಸ್ಥಳಿಯ ಯುವಕರು ಸಹಕರಿಸುವ ಮೂಲಕ ವಿತರಣೆ ಕಾರ್ಯ ನಡೆಯುತ್ತಿದೆ.
ಮಾತ್ರವಲ್ಲದೆ ಮನೆಬಾಗಿಲಿಗೆ ಬರುವ ಎಲ್ಲಾ ಬಡ ಕುಟುಂಬಗಳಿಗೆ ಅಕ್ಕಿ ದಿನಸಿ ಪದಾರ್ಥಗಳನ್ನು ವಿತರಿಸಿ ಮಾತೃಹೃದಯ ತೋರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅವರ ಬೆಂಬಲಿಗ ಯುವಕರ ತಂಡವೊಂದು ಔಷಧಿಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದು ಧನ ಸಹಾಯ ರೂಪದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಈ ಬಗ್ಗೆ ಮಾಧ್ಯಮದ ಜತೆ ಮಾತಾಡಿ ” ಈ ಎಲ್ಲಾ ಕೆಲಸ ಕಾರ್ಯಗಳು ದೇವರ ಸೇವೆ ಎಂಬ ದೃಷ್ಟಿಯಿಂದ ಮಾಡುತ್ತಿದ್ದೇವೆ ಜನರಿಗೆ ಇಂತಹ ಸಂಧರ್ಭದಲ್ಲಿ ಸಹಕಾರ ಮಾಡದೇ ಇದ್ದರೆ ಉಲ್ಲವರು ಇದ್ದರೂ ಏನು ಪ್ರಯೋಜನ,ಅನ್ನದಾನದ ಭಾಗ್ಯ ದೇವರು ಕರುಣಿಸಿದ್ದು ಖುದ್ದಾಗಿ ತಯಾರಿಸಿ ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ ಇದಕ್ಕೆ ನನ್ನ ಕುಟುಂಬ ವರ್ಗ ಮತ್ತು ಆತ್ಮೀಯರ ಸಹಕಾರ ಇದೆ,ಯಾರು ಬಂದರು ನನ್ನಿಂದಾಗುವ ಸಹಾಯ ಮಾಡಲು ಸದಾಸಿದ್ದ ಎಂದರು”
ಇವರ ಈ ಕಾಯಕದಲ್ಲಿ ಅವರ ಸುಪುತ್ರ ಅಭಿರಾಜ್,ಭಾಜಪ ಕಾರ್ಯಕರ್ತರು ,ವಿವಿಧ ಸಂಘಟನೆಯ ಯುವಕರು ವಿತರಣೆಗೆ ಕೈ ಜೋಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಗೀತಾಂಜಲಿ ಸುವರ್ಣ ರು ನಿರ್ಗತಿಕರು ಬಡವರ ಪಾಲಿಗೆ ಅನ್ನಪೂರ್ಣೇಶ್ವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…