ಉದಯ್ಪುರ: ಮೋದಿ ಯಾವ ರೀತಿಯ ಹಿಂದು? ಅವರಿಗೆ ಹಿಂದುತ್ವ ಅಂದರೆ ಏನು ಎಂದು ಗೊತ್ತೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ರಾಜಸ್ಥಾನದ ಉದಯ್ಪುರ್ನಲ್ಲಿ ಬ್ಯುಸಿನೆಎಸ್ ಕಮ್ಯುನಿಟಿ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿಗೆ ಹಿಂದೂ ಧರ್ಮದ ಅಡಿಪಾಯ ಅಂದರೆ ಏನು? ಅದರ ಉದ್ದೇಶವೇನು ಎಂಬುದು ಗೊತ್ತಿಲ್ಲ” ಎಂದು ಟೀಕಿಸಿದ್ದಾರೆ.
“ಮೋದಿ ತಾನು ಹಿಂದೂ ಎಂದು ಹೇಳುತ್ತಾರೆ. ಆದರೆ ಅವರಿಗೆ ಹಿಂದುತ್ವದ ಮೂಲತತ್ವ ಏನು? ಭಗವದ್ಗೀತೆ ಏನು ಮಾಡಬೇಕು ಎಂದು ಹೇಳುತ್ತೆ? ಎಂದು ಪ್ರಶ್ನಿಸಿದರು. ಜ್ಞಾನವು ಪ್ರತಿಯೊಬ್ಬರೊಂದಿಗೂ ಆಗಿದೆ, ಜ್ಞಾನವು ನಿಮ್ಮ ಸುತ್ತಲೂ ಇದೆ. ಪ್ರತಿಯೊಂದು ಜೀವಿಯು ಜ್ಞಾನವನ್ನು ಹೊಂದಿದೆ. ಆದರೆ ಮೋದಿ ತಾನು ಹಿಂದೂ ಎಂದು ಹೇಳುತ್ತಾರೆ. ಹಿಂದುತ್ವದ ಮೂಲತತ್ವವೇ ಗೊತ್ತಿರದ ಅವರು ಯಾವ ರೀತಿಯ ಹಿಂದೂ?” ಎಂದು ಪ್ರಶ್ನಿಸಿದರು.
ಅಲ್ಲದೆ ಮೋದಿ ತಮ್ಮೊಳಗೆ ಜ್ಞಾನ ಹುಟ್ಟುತ್ತದೆ ಅಂದ್ಕೊಂಡಿದ್ದಾರೆ. ಅದಕ್ಕಾಗಿಯೇ ಎಲ್ಲ ವಿಷಯದಲ್ಲೂ ಅವರು ತಲೆಹಾಕುತ್ತಿದ್ದಾರೆ” ಎಂದು ಹರಿಹಾಯ್ದರು.
ಹಿಂದು ಧರ್ಮದ ಬಗ್ಗೆ ಮೋದಿಗೆ ಎಷ್ಟು ಗೊತ್ತಿದೆ? ಪ್ರಧಾನಿ ಮೋದಿ ಯಾವ ರೀತಿಯ ಹಿಂದು? ಮೋದಿ ಅವರಿಗೆ ಹಿಂದು ಧರ್ಮದ ಆಂತರ್ಯ ತಿಳಿದಿಲ್ಲ. ಗೀತೆ ಏನು ಹೇಳುತ್ತದೆ ಎಂದರೆ, ಜ್ಞಾನ ಎಲ್ಲೆಡೆಯೂ ಇದೆ. ನಮ್ಮ ಸುತ್ತಮುತ್ತಲಿರುವ ಎಲ್ಲರಲ್ಲೂ ಜ್ಞಾನವಿರುತ್ತದೆ. ನಮ್ಮ ಪ್ರಧಾನ ಮಂತ್ರಿ ನಾನು ಹಿಂದು ಎನ್ನುತ್ತಾರೆ. ಆದರೆ ಧರ್ಮದ ಆಳ ಅರಿತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…