ಕಲಬುರ್ಗಿ/ವಿಜಯಪುರ: ರಾಜ್ಯ ಹೈಕೋರ್ಟ್ ನಿನ್ನೆ ನೀಡಿದಂತ ಸಮವಸ್ತ್ರ ಪಾಲನೆ ಕಡ್ಡಾಯದ ಆದೇಶಕ್ಕೂ ಡೋಂಟ್ ಕೇರ್ ಎಂದಿರುವಂತ ವಿದ್ಯಾರ್ಥಿನಿಯರು, ಇಂದು ಕೂಡ ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ, ಎಕ್ಸಾಂ ಬೇಡ, ಹಿಜಾಬ್ ಬೇಕು ಎಂಬುದಾಗಿ ಹೇಳುವ ಮೂಲಕ ತರಗತಿ, ಪರೀಕ್ಷೆಯನ್ನು ಬಹಿಷ್ಕರಿಸಿ ಮನೆಗೆ ವಾಪಾಸ್ ಆಗಿರುವಂತ ಘಟನೆ ಕಲಬುರ್ಗಿ, ವಿಜಯಪುರದಲ್ಲಿ ನಡೆದಿದೆ.
ಕಲಬುರ್ಗಿಯ ಸರ್ಕಾರಿ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದಂತ ವಿದ್ಯಾರ್ಥಿನಿಯರಿಗೆ, ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹಿಜಾಬ್ ತೆಗೆದು ತರಗತಿಗೆ ಹಾಜರಾಗುವಂತೆ ಸೂಚನೆಯನ್ನು ಪ್ರಿನ್ಸಿಪಾಲರು ನೀಡಿದರು. ಆದ್ರೇ.. ಹಿಜಾಬ್ ತೆಗೋಯಲ್ಲ ಎಂಬುದಾಗಿ ಕಾಲೇಜಿನಲ್ಲಿ ಹಠ ಹಿಡಿದರು.
ಜೊತೆಗೆ 10 – 12 ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿ, ನಮಗೆ ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ ಎಂಬುದಾಗಿ ಹೇಳುವ ಮೂಲಕ, ಮನೆಗೆ ವಾಪಾಸ್ ಆಗಿರೋದಾಗಿ ತಿಳಿದು ಬಂದಿದೆ.
ಮತ್ತೊಂದೆಡೆ ವಿಜಯಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು ಪಿಯು ಪ್ರಾಕ್ಟಿಕಲ್ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಗೆ ಹಿಜಾಬ್ ಧರಿಸಿ ಆಗಮಿಸಿದಂತ ವಿದ್ಯಾರ್ಥಿನಿಯರು, ಏನೇ ಆದ್ರೂ ಹಿಜಾಬ್ ಬಿಡೋದಿಲ್ಲ ಎಂಬುದಾಗಿ ಹಠ ಹಿಡಿದಿದ್ದಾರೆ. ನಾವು ಹಿಜಾಬ್ ತೆಗೆಯೋದಾದ್ರೇ ಕಾಲೇಜಿಗೆ ಬರೋದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬರೋವರೆಗೆ ಕಾಯುತ್ತೇವೆ. ಹಿಜಾಬ್ ತೆಗೆಯಲು ದೇವರ ಭಯವಿದೆ ಎಂಬುದಾಗಿ ಮನೆಗೆ ಪರೀಕ್ಷೆ ಬರೆಯದೇ ವಾಪಾಸ್ ಆಗಿದ್ದಾರೆ.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…