Featured

ಹಿಜಾಬ್ ವಿದ್ಯಾರ್ಥಿನಿಯರು ಪಾಕಿಸ್ತಾನ- ಸೌದಿಗೆ ಹೋಗಿ ಮಾತನಾಡಲಿ ಅಲ್ಲಿ ಆಗ್ತದಾ ನೋಡುವಾ..? : ಯು.ಟಿ ಖಾದರ್ ಅಕ್ರೋಶ- Vishwanews24

ಹಿಜಾಬ್ ವಿದ್ಯಾರ್ಥಿನಿಯರು ಪಾಕಿಸ್ತಾನ- ಸೌದಿಗೆ ಹೋಗಿ ಮಾತನಾಡಲಿ ಅಲ್ಲಿ ಆಗ್ತದಾ ನೋಡುವಾ..? : ಯು.ಟಿ ಖಾದರ್ ಅಕ್ರೋಶ- Vishwanews24

ಹಿಜಾಬ್ ವಿದ್ಯಾರ್ಥಿನಿಯರ ವಿರುದ್ದ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಸಮಾಧಾನ

ಹಿಜಾಬ್ ವಿಷಯದಲ್ಲಿ ಸಮಸ್ಯೆ ಇದ್ರೆ ವಿದ್ಯಾರ್ಥಿನಿಯರು ಕೋರ್ಟ್ ಗೆ ಹೋಗಲಿ

ಡಿಸಿ, ವಿಸಿ ಬಳಿ‌ ಆಗದೇ ಇದ್ರೆ ಕಾನೂನು ಹೋರಾಟ ಮಾಡಲಿ

ಸಮಾಜದಲ್ಲಿ ಗೊಂದಲ ಸೃಷ್ಡಿಸಬಾರದು, ಈ ದೇಶದ ಕಾನೂನು ಗೌರವಿಸಬೇಕು

ಇವರು ಈ ದೇಶದಲ್ಲಿ ಇದ್ದು ಮಾತನಾಡ್ತಾರೆ, ಆದರೆ ಇವರೆಲ್ಲಾ ವಿದೇಶಕ್ಕೆ ಹೋಗಲಿ

ಪಾಕಿಸ್ತಾನ, ಸೌದಿಗೆ ಹೋಗಿ ಮಾತನಾಡಲಿ, ಅಲ್ಲಿ ಆಗ್ತದಾ ನೋಡುವಾ?

ಈ ದೇಶದಲ್ಲಿ ಮಾತನಾಡೋಕೆ ಅವಕಾಶ ಇದೆ, ಅಲ್ಲಿ ಅದೂ ಇಲ್ಲ

ಹಾಗಾಗಿ ಈ ದೇಶದ ಕಾನೂನು ಗೌರವಿಸೋ ಕೆಲಸ ಮಾಡಿ

ಈ ದೇಶದಲ್ಲಿರೋ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ, ಅದು ಬೇರೆ ದೇಶಕ್ಕೆ ಹೋದ್ರೆ ಗೊತ್ತಾಗುತ್ತೆ

ಹಿಜಾಬ್ ವಿಚಾರದಲ್ಲಿ ದೇಶದ ಕಾನೂನು ಸುವ್ಯವಸ್ಥೆ ನಮಗೆ ಅಗತ್ಯ

ಅದರ ಜೊತೆಗೆ ಹೆಣ್ಮಕ್ಕಳಿಗೆ ಶಿಕ್ಷಣದ ಅಗತ್ಯ ಇದೆ, ಕೊರತೆ ಆಗಬಾರದು

ಆದರೆ ಕಾನೂನು ವ್ಯಾಪ್ತಿಯಲ್ಲೇ ನಾವು ಅವರಿಗೆ ನೆರವು ನೀಡಬಹುದು

ಅದು ಬಿಟ್ಟು ಕಾನೂನಿನ ಹೊರಗೆ ಬಂದು ಸಮಸ್ಯೆ ‌ಪರಿಹಾರ ಆಗಲ್ಲ

ಜಿಲ್ಲಾಧಿಕಾರಿ ಜಿಲ್ಲೆಯ ಸಂವಿಧಾನಿಕ‌ ಮುಖ್ಯಸ್ಥ

ಹೀಗಾಗಿ ಅವರು ವಿದ್ಯಾರ್ಥಿಗಳ ಮತ್ತು ಎಲ್ಲರ ಅಭಿಪ್ರಾಯ ‌ಪಡೆದು ಆದೇಶ ಮಾಡಲಿ

ಇಲಾಖೆ ‌ಮತ್ತು ವಿದ್ಯಾರ್ಥಿಗಳ ಮಧ್ಯೆ ಸಮಸ್ಯೆ ಆದಾಗ ಡಿಸಿ ಸಮಸ್ಯೆ ‌ಬಗೆ ಹರಿಸಲಿ

ಮಂಗಳೂರು ವಿವಿ ಕ್ಯಾಲೆಂಡರ್ ನಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು

ಆದರೆ ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಸಿಂಡಿಕೇಟ್ ಸಭೆ ಮಾಡಿ ನಿಯಮ ಬದಲಿಸಿದೆ

ಈ ವರ್ಷದ ಮಧ್ಯೆ ಸಿಂಡಿಕೇಟ್ ಈ ನಿರ್ಧಾರ ಮಾಡಿದ್ದು ತಪ್ಪಾ? ಸರಿಯಾ ಅನ್ನೋದು ಪ್ರಶ್ನೆ

ಇದೊಂದು ತಾಂತ್ರಿಕ ಸಮಸ್ಯೆ, ಇದನ್ನ ಡಿಸಿ ಕೂತು ಪರಿಹರಿಸಲಿ

ವಿದ್ಯಾರ್ಥಿನಿಯರಲ್ಲಿ ದ್ವಂದ್ವ ಇದ್ದರೆ ಪೋಷಕರು ನಿರ್ಧಾರ ತೆಗೆದುಕೊಳ್ಳಲಿ

ರಾಜಕೀಯವಾಗಿ ಈ ಮಕ್ಕಳು ದಾರಿ ತಪ್ಪುತ್ತಿದ್ದಾರಾ ಅಂತ ಹೆತ್ತವರು ನೋಡಲಿ

ಆ ವಿದ್ಯಾರ್ಥಿನಿಯರು ನನ್ನ ಜೊತೆ ಫೋನ್ ನಲ್ಲಿ ಮಾತನಾಡಿದ್ರು

ಆ ಮೇಲೆ ನಾನೇ ಕರೆ ಮಾಡಿದಾಗ ಅವರು ಕಾಲ್ ತೆಗೆದಿಲ್ಲ

ಉಪ್ಪಿನಂಗಡಿ ಹಿಜಾಬ್ ಕೇಸಲ್ಲಿ ಅಲ್ಲಿನ ಶಾಸಕರ ಜೊತೆ ಮಾತನಾಡಿದ್ದೇನೆ

ವಿವಿ ಸಿಂಡಿಕೇಟ್ ನಿರ್ಣಯ ಕಾನೂನು ವ್ಯಾಪ್ತಿಯಲ್ಲಿ ಇದ್ಯಾ ನೋಡಲಿ

ಇಲ್ಲದೇ ಇದ್ರೆ ನ್ಯಾಯಾಲಯಕ್ಕೆ ಹೋಗಿ ಬಗೆ ಹರಿಸಲಿ

ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ರೆ ಯಾವುದೇ ಸಮಸ್ಯೆ ಇಲ್ಲ

ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಗಲಾಟೆ ಎಬ್ಬಿಸಿದ್ರೆ ಇವರಿಗೆ ತೊಂದರೆ ಇಲ್ಲ

ಗಾಂಧಿ ಕೊಂದವನನ್ನ ವೈಭವೀಕರಿಸಿದ್ರೆ ಇವರಿಗೆ ತೊಂದರೆ ಇಲ್ಲ

ಆದರೆ ಪಠ್ಯ ಪುಸ್ತಕ ವಿಚಾರದಲ್ಲಿ ಮಾತನಾಡಿದ್ರೆ ಇವರಿಗೆ ಅದು ವಿರೋಧ

ಸಚಿವರ ಮನೆ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿದ್ರೆ ಬಂಧಿಸ್ತಾರೆ

ಅವರೇನು ಸಚಿವರ ಮಂಡೆ ತಂದು ಸುಟ್ಟು ಹಾಕಿದ್ರಾ?

ವಿದ್ಯಾರ್ಥಿಗಳ ಮೇಲೆ ದೊಡ್ಡ ಕೇಸ್ ಹಾಕೋದು ಸರಿಯಾ?

ಮಂಗಳೂರಿನಲ್ಲಿ ವಿಪಕ್ಷ ನಾಯಕ ಯು.ಟಿ.ಖಾದರ್ ಹೇಳಿಕೆ..

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

14 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

16 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

16 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

16 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

16 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

3 days ago