Featured

ಹಿಜಾಬ್ ವಿದ್ಯಾರ್ಥಿನಿಯರು ಪಾಕಿಸ್ತಾನ- ಸೌದಿಗೆ ಹೋಗಿ ಮಾತನಾಡಲಿ ಅಲ್ಲಿ ಆಗ್ತದಾ ನೋಡುವಾ..? : ಯು.ಟಿ ಖಾದರ್ ಅಕ್ರೋಶ- Vishwanews24

ಹಿಜಾಬ್ ವಿದ್ಯಾರ್ಥಿನಿಯರು ಪಾಕಿಸ್ತಾನ- ಸೌದಿಗೆ ಹೋಗಿ ಮಾತನಾಡಲಿ ಅಲ್ಲಿ ಆಗ್ತದಾ ನೋಡುವಾ..? : ಯು.ಟಿ ಖಾದರ್ ಅಕ್ರೋಶ- Vishwanews24

ಹಿಜಾಬ್ ವಿದ್ಯಾರ್ಥಿನಿಯರ ವಿರುದ್ದ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಸಮಾಧಾನ

ಹಿಜಾಬ್ ವಿಷಯದಲ್ಲಿ ಸಮಸ್ಯೆ ಇದ್ರೆ ವಿದ್ಯಾರ್ಥಿನಿಯರು ಕೋರ್ಟ್ ಗೆ ಹೋಗಲಿ

ಡಿಸಿ, ವಿಸಿ ಬಳಿ‌ ಆಗದೇ ಇದ್ರೆ ಕಾನೂನು ಹೋರಾಟ ಮಾಡಲಿ

ಸಮಾಜದಲ್ಲಿ ಗೊಂದಲ ಸೃಷ್ಡಿಸಬಾರದು, ಈ ದೇಶದ ಕಾನೂನು ಗೌರವಿಸಬೇಕು

ಇವರು ಈ ದೇಶದಲ್ಲಿ ಇದ್ದು ಮಾತನಾಡ್ತಾರೆ, ಆದರೆ ಇವರೆಲ್ಲಾ ವಿದೇಶಕ್ಕೆ ಹೋಗಲಿ

ಪಾಕಿಸ್ತಾನ, ಸೌದಿಗೆ ಹೋಗಿ ಮಾತನಾಡಲಿ, ಅಲ್ಲಿ ಆಗ್ತದಾ ನೋಡುವಾ?

ಈ ದೇಶದಲ್ಲಿ ಮಾತನಾಡೋಕೆ ಅವಕಾಶ ಇದೆ, ಅಲ್ಲಿ ಅದೂ ಇಲ್ಲ

ಹಾಗಾಗಿ ಈ ದೇಶದ ಕಾನೂನು ಗೌರವಿಸೋ ಕೆಲಸ ಮಾಡಿ

ಈ ದೇಶದಲ್ಲಿರೋ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ, ಅದು ಬೇರೆ ದೇಶಕ್ಕೆ ಹೋದ್ರೆ ಗೊತ್ತಾಗುತ್ತೆ

ಹಿಜಾಬ್ ವಿಚಾರದಲ್ಲಿ ದೇಶದ ಕಾನೂನು ಸುವ್ಯವಸ್ಥೆ ನಮಗೆ ಅಗತ್ಯ

ಅದರ ಜೊತೆಗೆ ಹೆಣ್ಮಕ್ಕಳಿಗೆ ಶಿಕ್ಷಣದ ಅಗತ್ಯ ಇದೆ, ಕೊರತೆ ಆಗಬಾರದು

ಆದರೆ ಕಾನೂನು ವ್ಯಾಪ್ತಿಯಲ್ಲೇ ನಾವು ಅವರಿಗೆ ನೆರವು ನೀಡಬಹುದು

ಅದು ಬಿಟ್ಟು ಕಾನೂನಿನ ಹೊರಗೆ ಬಂದು ಸಮಸ್ಯೆ ‌ಪರಿಹಾರ ಆಗಲ್ಲ

ಜಿಲ್ಲಾಧಿಕಾರಿ ಜಿಲ್ಲೆಯ ಸಂವಿಧಾನಿಕ‌ ಮುಖ್ಯಸ್ಥ

ಹೀಗಾಗಿ ಅವರು ವಿದ್ಯಾರ್ಥಿಗಳ ಮತ್ತು ಎಲ್ಲರ ಅಭಿಪ್ರಾಯ ‌ಪಡೆದು ಆದೇಶ ಮಾಡಲಿ

ಇಲಾಖೆ ‌ಮತ್ತು ವಿದ್ಯಾರ್ಥಿಗಳ ಮಧ್ಯೆ ಸಮಸ್ಯೆ ಆದಾಗ ಡಿಸಿ ಸಮಸ್ಯೆ ‌ಬಗೆ ಹರಿಸಲಿ

ಮಂಗಳೂರು ವಿವಿ ಕ್ಯಾಲೆಂಡರ್ ನಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು

ಆದರೆ ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಸಿಂಡಿಕೇಟ್ ಸಭೆ ಮಾಡಿ ನಿಯಮ ಬದಲಿಸಿದೆ

ಈ ವರ್ಷದ ಮಧ್ಯೆ ಸಿಂಡಿಕೇಟ್ ಈ ನಿರ್ಧಾರ ಮಾಡಿದ್ದು ತಪ್ಪಾ? ಸರಿಯಾ ಅನ್ನೋದು ಪ್ರಶ್ನೆ

ಇದೊಂದು ತಾಂತ್ರಿಕ ಸಮಸ್ಯೆ, ಇದನ್ನ ಡಿಸಿ ಕೂತು ಪರಿಹರಿಸಲಿ

ವಿದ್ಯಾರ್ಥಿನಿಯರಲ್ಲಿ ದ್ವಂದ್ವ ಇದ್ದರೆ ಪೋಷಕರು ನಿರ್ಧಾರ ತೆಗೆದುಕೊಳ್ಳಲಿ

ರಾಜಕೀಯವಾಗಿ ಈ ಮಕ್ಕಳು ದಾರಿ ತಪ್ಪುತ್ತಿದ್ದಾರಾ ಅಂತ ಹೆತ್ತವರು ನೋಡಲಿ

ಆ ವಿದ್ಯಾರ್ಥಿನಿಯರು ನನ್ನ ಜೊತೆ ಫೋನ್ ನಲ್ಲಿ ಮಾತನಾಡಿದ್ರು

ಆ ಮೇಲೆ ನಾನೇ ಕರೆ ಮಾಡಿದಾಗ ಅವರು ಕಾಲ್ ತೆಗೆದಿಲ್ಲ

ಉಪ್ಪಿನಂಗಡಿ ಹಿಜಾಬ್ ಕೇಸಲ್ಲಿ ಅಲ್ಲಿನ ಶಾಸಕರ ಜೊತೆ ಮಾತನಾಡಿದ್ದೇನೆ

ವಿವಿ ಸಿಂಡಿಕೇಟ್ ನಿರ್ಣಯ ಕಾನೂನು ವ್ಯಾಪ್ತಿಯಲ್ಲಿ ಇದ್ಯಾ ನೋಡಲಿ

ಇಲ್ಲದೇ ಇದ್ರೆ ನ್ಯಾಯಾಲಯಕ್ಕೆ ಹೋಗಿ ಬಗೆ ಹರಿಸಲಿ

ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ರೆ ಯಾವುದೇ ಸಮಸ್ಯೆ ಇಲ್ಲ

ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಗಲಾಟೆ ಎಬ್ಬಿಸಿದ್ರೆ ಇವರಿಗೆ ತೊಂದರೆ ಇಲ್ಲ

ಗಾಂಧಿ ಕೊಂದವನನ್ನ ವೈಭವೀಕರಿಸಿದ್ರೆ ಇವರಿಗೆ ತೊಂದರೆ ಇಲ್ಲ

ಆದರೆ ಪಠ್ಯ ಪುಸ್ತಕ ವಿಚಾರದಲ್ಲಿ ಮಾತನಾಡಿದ್ರೆ ಇವರಿಗೆ ಅದು ವಿರೋಧ

ಸಚಿವರ ಮನೆ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿದ್ರೆ ಬಂಧಿಸ್ತಾರೆ

ಅವರೇನು ಸಚಿವರ ಮಂಡೆ ತಂದು ಸುಟ್ಟು ಹಾಕಿದ್ರಾ?

ವಿದ್ಯಾರ್ಥಿಗಳ ಮೇಲೆ ದೊಡ್ಡ ಕೇಸ್ ಹಾಕೋದು ಸರಿಯಾ?

ಮಂಗಳೂರಿನಲ್ಲಿ ವಿಪಕ್ಷ ನಾಯಕ ಯು.ಟಿ.ಖಾದರ್ ಹೇಳಿಕೆ..

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

5 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

6 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

6 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

6 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago