Featured

ಹೆಜಮಾಡಿ ಬಂದರಿನ ಜೊತೆ ಆಧುನಿಕ ತಂತ್ರಜ್ಞಾನದೊಂದಿಗೆ ಸಮುದ್ರದಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡಲಾಗುವುದು: ಸಚಿವ ನಾಡಗೌಡ

ಕಾಪು : ಕರ್ನಾಟಕ ಸರ್ಕಾರ ಪಶುಸಂಗೋಪನ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೆಜಮಾಡಿ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು. ಬಂದರು ಸಂಪರ್ಕ ರಸ್ತೆ ಕೋಟಿ ಅನುದಾನದಲ್ಲಿ ಇಷ್ಟರ ತನಕ ಕಾಮಗಾರಿ ಮುಗಿದು ಜನರ ಉಪಯೋಗಕ್ಕೆ ಬರಬೇಕಿತ್ತು. ಎಪ್ರಿಲ್ ತಿಂಗಳಲ್ಲಿ ಟೆಂಡರಾದ ಕಾಮಗಾರಿ ಚುನಾವಣಾ ನೀತಿ ಸಂಹಿತೆಯ ಕಾರಣ ವಿಳಂಭವಾಯಿತು. ಆದರೂ ಚುನಾವಣೆ ಮುಗಿದು ತಿಂಗಳು ಎರಡಾದರೂ ಕಾಮಗಾರಿ ಪ್ರಾರಂಭಿಸದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಸಚಿವರು ಬರುವ ಸೂಚನೆ ಸಿಕ್ಕದ ಕೂಡಲೇ ಗುತ್ತಿಗೆ ದಾರರು ರಾತೋರಾತ್ರಿ ರಸ್ತೆಗೆ ಜಲ್ಲಿ ಸುರಿದು ರಿಪೇರಿ ಪ್ರಾರಂಭಿಸಿದರು. ಜೆಸಿಬಿ ಕೈ ಕೊಟ್ಟಿದ್ದರಿಂದ ಕಾಮಗಾರಿ ಅರ್ಧದಲ್ಲಿಯೇ ನಿಂತು. ಬಂದರು ಪ್ರದೇಶಕ್ಕೆ ಯಾವುದೇ ವಾಹನ ತೆರಳದಂತಾಯಿತು.
ಸಚಿವರ ಆಗಮನವಾಗುತಿದ್ದಂತೆಯೇ ಸಚಿವರಿಗೆ ಬಂದರ ದರ್ಶನ ಭಾಗ್ಯ ಲಭಿಸದೆ ದಾರಿಯಲ್ಲಿಯೇ ಅವರನ್ನು ಸ್ವಾಗತಿಸಿದರು. ಮಾಧ್ಯಮದೊಡನೆ ಮಾತನಾಡಿದ ನಾಡೆಗೌಡ ಈ ಪ್ರದೇಶದ ಬಂದರು ನಿರ್ಮಾಣಕ್ಕಾಗಿ ಕೆಂದ್ರ ಹಾಗು ರಾಜ್ಯ ಸರಕಾರ ಈಗಾಗಲೇ ಒಪ್ಪಿಕೊಂಡಿವೆ. ಇದರ ಬಗ್ಗೆ ಕರಾವಳಿಯನ್ನು ಯಾವುದೇ ರೀತಿಯಲ್ಲಿ ಸರಕಾರ ಕಡೆಗೆಣಿಸಿಲ್ಲ. ಹಿಂದಿನ ಸರಕಾರ ಏನು ಬಜೆಟ್ ಮಂಡಿಸಿದೆಯೋ ಅದನ್ನೆÃ ಮುಂದುರೆಸಿ ಕುಮಾರಸ್ವಾಮಿ ಸರ್ಕಾರ ಕಾರ್ಯ ವೆಸಗಲಿದೆ. ಇಲ್ಲಿ ಸಮುದ್ರದಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸು ಯೋಜನೆ ಇದೆ. ಸಮುದ್ರದಲ್ಲಿ ಇದನ್ನು ಮಾಡುವುದರಿಂದ ಯಾರದೇ ಪರವಾನಿಗೆ ಅಗತ್ಯ ಬೀಳುವುದಿಲ್ಲ. ಆಕ್ಷೆÃಪಣೆ ಗಳೂ ಬರುವುದಿಲ್ಲ. ಗೋವಾ ಮಾದರಿಯಲ್ಲಿ ಆಧುನಿಕ ತಂತ್ರಜ್ನಾನವನ್ನುಪಯೋಗಿಸಿ ಮಾಡಲಿದ್ದೆÃವೆ. ಇದರ ಬಗ್ಗೆ ತಜ್ಙರ ತಂಡವೊಂದನ್ನು ಗೋವಾಕ್ಕೆ ಕಳುಹಿಸಿ ಅಧ್ಯಯನ ಮಾಡಿ ಆಮೇಲೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಡಲಿದ್ದೆÃವೆ ಎಂದರು.
ಈ ಸಂದರ್ಭ ಮುಲ್ಕಿ ಪರ್ಸಿನ್ ಮತ್ತು ಟ್ರಾಲ್ ಬೋಟು ಸಂಘದ ವಿಜಯ ಬಂಗೇರ ಮಾತನಾಡಿ “ಹೆಜಮಾಡಿ ಬಂದರು ಬಗ್ಗೆ ನಾವು ಕಳೆದ ೪೦ ವರ್ಷಗಳಿಂದ ಶತಪ್ರಯತ್ನ ಮಾಡಿದ್ದೆÃವೆ. ಈಗ ರಾಜ್ಯ ಮತ್ತು ಕೇಂದ್ರ ಸರಕಾರ ಇದರ ಬಗ್ಗೆ ಅನುಮೋದನೆ ಮಾಡಿದೆ. ರಾಜ್ಯ ಸರ್ಕಾರ ೫೦ ಶೇಕಡಾ ಕೊಡಲು ಒಪ್ಪಿದ್ದಾರೆ. ಇನ್ನಾದರೂ ಈ ಭಾಗಕ್ಕೆ ಬಂದರು ನಿರ್ಮಾಣ ಮಾಡಿದರೆ ನಮ್ಮ ಬಹುಕಾಲದ ಕನಸು ನನಸು” ಆದಂತಾಗುತ್ತದೆ ಎಂದರು.
ಸಚಿವರ ಜೊತೆಯಲ್ಲಿ ಶಾಸಕ ಲಾಲಜಿ ಮೆಂಡನ್,ಜೆಡಿಎಸ್ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ , ಮುಂತಾದವರಿದ್ದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

13 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 day ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

1 day ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

1 day ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

2 days ago