Featured

ಹೆಜಮಾಡಿ ಬಂದರಿನ ಜೊತೆ ಆಧುನಿಕ ತಂತ್ರಜ್ಞಾನದೊಂದಿಗೆ ಸಮುದ್ರದಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡಲಾಗುವುದು: ಸಚಿವ ನಾಡಗೌಡ

ಕಾಪು : ಕರ್ನಾಟಕ ಸರ್ಕಾರ ಪಶುಸಂಗೋಪನ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೆಜಮಾಡಿ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು. ಬಂದರು ಸಂಪರ್ಕ ರಸ್ತೆ ಕೋಟಿ ಅನುದಾನದಲ್ಲಿ ಇಷ್ಟರ ತನಕ ಕಾಮಗಾರಿ ಮುಗಿದು ಜನರ ಉಪಯೋಗಕ್ಕೆ ಬರಬೇಕಿತ್ತು. ಎಪ್ರಿಲ್ ತಿಂಗಳಲ್ಲಿ ಟೆಂಡರಾದ ಕಾಮಗಾರಿ ಚುನಾವಣಾ ನೀತಿ ಸಂಹಿತೆಯ ಕಾರಣ ವಿಳಂಭವಾಯಿತು. ಆದರೂ ಚುನಾವಣೆ ಮುಗಿದು ತಿಂಗಳು ಎರಡಾದರೂ ಕಾಮಗಾರಿ ಪ್ರಾರಂಭಿಸದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಸಚಿವರು ಬರುವ ಸೂಚನೆ ಸಿಕ್ಕದ ಕೂಡಲೇ ಗುತ್ತಿಗೆ ದಾರರು ರಾತೋರಾತ್ರಿ ರಸ್ತೆಗೆ ಜಲ್ಲಿ ಸುರಿದು ರಿಪೇರಿ ಪ್ರಾರಂಭಿಸಿದರು. ಜೆಸಿಬಿ ಕೈ ಕೊಟ್ಟಿದ್ದರಿಂದ ಕಾಮಗಾರಿ ಅರ್ಧದಲ್ಲಿಯೇ ನಿಂತು. ಬಂದರು ಪ್ರದೇಶಕ್ಕೆ ಯಾವುದೇ ವಾಹನ ತೆರಳದಂತಾಯಿತು.
ಸಚಿವರ ಆಗಮನವಾಗುತಿದ್ದಂತೆಯೇ ಸಚಿವರಿಗೆ ಬಂದರ ದರ್ಶನ ಭಾಗ್ಯ ಲಭಿಸದೆ ದಾರಿಯಲ್ಲಿಯೇ ಅವರನ್ನು ಸ್ವಾಗತಿಸಿದರು. ಮಾಧ್ಯಮದೊಡನೆ ಮಾತನಾಡಿದ ನಾಡೆಗೌಡ ಈ ಪ್ರದೇಶದ ಬಂದರು ನಿರ್ಮಾಣಕ್ಕಾಗಿ ಕೆಂದ್ರ ಹಾಗು ರಾಜ್ಯ ಸರಕಾರ ಈಗಾಗಲೇ ಒಪ್ಪಿಕೊಂಡಿವೆ. ಇದರ ಬಗ್ಗೆ ಕರಾವಳಿಯನ್ನು ಯಾವುದೇ ರೀತಿಯಲ್ಲಿ ಸರಕಾರ ಕಡೆಗೆಣಿಸಿಲ್ಲ. ಹಿಂದಿನ ಸರಕಾರ ಏನು ಬಜೆಟ್ ಮಂಡಿಸಿದೆಯೋ ಅದನ್ನೆÃ ಮುಂದುರೆಸಿ ಕುಮಾರಸ್ವಾಮಿ ಸರ್ಕಾರ ಕಾರ್ಯ ವೆಸಗಲಿದೆ. ಇಲ್ಲಿ ಸಮುದ್ರದಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸು ಯೋಜನೆ ಇದೆ. ಸಮುದ್ರದಲ್ಲಿ ಇದನ್ನು ಮಾಡುವುದರಿಂದ ಯಾರದೇ ಪರವಾನಿಗೆ ಅಗತ್ಯ ಬೀಳುವುದಿಲ್ಲ. ಆಕ್ಷೆÃಪಣೆ ಗಳೂ ಬರುವುದಿಲ್ಲ. ಗೋವಾ ಮಾದರಿಯಲ್ಲಿ ಆಧುನಿಕ ತಂತ್ರಜ್ನಾನವನ್ನುಪಯೋಗಿಸಿ ಮಾಡಲಿದ್ದೆÃವೆ. ಇದರ ಬಗ್ಗೆ ತಜ್ಙರ ತಂಡವೊಂದನ್ನು ಗೋವಾಕ್ಕೆ ಕಳುಹಿಸಿ ಅಧ್ಯಯನ ಮಾಡಿ ಆಮೇಲೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಡಲಿದ್ದೆÃವೆ ಎಂದರು.
ಈ ಸಂದರ್ಭ ಮುಲ್ಕಿ ಪರ್ಸಿನ್ ಮತ್ತು ಟ್ರಾಲ್ ಬೋಟು ಸಂಘದ ವಿಜಯ ಬಂಗೇರ ಮಾತನಾಡಿ “ಹೆಜಮಾಡಿ ಬಂದರು ಬಗ್ಗೆ ನಾವು ಕಳೆದ ೪೦ ವರ್ಷಗಳಿಂದ ಶತಪ್ರಯತ್ನ ಮಾಡಿದ್ದೆÃವೆ. ಈಗ ರಾಜ್ಯ ಮತ್ತು ಕೇಂದ್ರ ಸರಕಾರ ಇದರ ಬಗ್ಗೆ ಅನುಮೋದನೆ ಮಾಡಿದೆ. ರಾಜ್ಯ ಸರ್ಕಾರ ೫೦ ಶೇಕಡಾ ಕೊಡಲು ಒಪ್ಪಿದ್ದಾರೆ. ಇನ್ನಾದರೂ ಈ ಭಾಗಕ್ಕೆ ಬಂದರು ನಿರ್ಮಾಣ ಮಾಡಿದರೆ ನಮ್ಮ ಬಹುಕಾಲದ ಕನಸು ನನಸು” ಆದಂತಾಗುತ್ತದೆ ಎಂದರು.
ಸಚಿವರ ಜೊತೆಯಲ್ಲಿ ಶಾಸಕ ಲಾಲಜಿ ಮೆಂಡನ್,ಜೆಡಿಎಸ್ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ , ಮುಂತಾದವರಿದ್ದರು.

Vishwa News 24

Recent Posts

USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ ; ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ – vishwanews24

USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ .. ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ ವಾಷಿಂಗ್ಟನ್:…

7 minutes ago

ಮಂಗಳೂರು : ಸ್ಕೂಟರ್ ಗೆ ಕಾರು ಡಿಕ್ಕಿ ; ಸವಾರ ಮೃತ್ಯು – vishwanews24

ಮಂಗಳೂರು : ಸ್ಕೂಟರ್ ಗೆ ಕಾರು ಡಿಕ್ಕಿ ; ಸವಾರ ಮೃತ್ಯು ಮಂಗಳೂರು: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದ…

20 minutes ago

ಹೋಟೆಲ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆಗೆ  ಖಾದರ್ ಸೂಚನೆ – vishwanews24

ಹೋಟೆಲ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆಗೆ  ಖಾದರ್ ಸೂಚನೆ ಬೆಂಗಳೂರು: ಹೋಟೆಲ್ ರೇಡ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ…

33 minutes ago

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

18 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

18 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

18 hours ago