ಪಡುಬಿದ್ರಿ : ಹೆಜಮಾಡಿಯ ಅಮಾಸೆಕರಿಯ ಸಮುದ್ರ ದಡದಲ್ಲಿ ಮೀನುಗಳ ಸುಗ್ಗಿ. ತಾ ಮುಂದು ನಾ ಮುಂದು ಪೈಪೋಟಿಯಲ್ಲಿ ಮೀನು ಹೆಕ್ಕಲು ಜನರು ಮುಗಿಬಿದ್ದಿದ್ದರು. ಅಪಾರ ಪ್ರಮಾಣ ದಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ಬಂದು ಬೀಳುತ್ತಿದ್ದು ಸ್ಥಳೀಯರು ಗೋಣಿ ಚೀಲಗಳಲ್ಲಿ ತುಂಬಿಸಿ ವಾಹನಗಳಲ್ಲಿ ಕೊಂಡೊಯ್ದರು,, ಅಮಾಸೆಕರಿಯ ಜನರಿಗಂತು ಹಬ್ಬದ ವಾತಾವರಣ. ರಸ್ತೆಯಲ್ಲಿ ಹಾದು ಹೋಗುವವರ ಕೈಯಲ್ಲಿ ಚೀಲ ತುಂಬಾ ಮೀನು. ವಿಷಯ ತಿಳಿದ ಪಕ್ಕದ ಊರುಗಳಿಂದಲೂ ವಾಹನದಲ್ಲಿ ಬಂದು ಮೀನು ಕೊಂಡು ಹೋಗಿದ್ದಾರೆ. ಕಡಲ ಬದಿಯಲ್ಲಿ ಬಲು ಅಪರೂಪದ ಸನ್ನಿವೇಷ ,, ಮಕ್ಕಳಿಂದ ಹಿಡಿದು ಮುದುಕರೂ ಸಮುದ್ರ ತೀರದಲ್ಲಿ ಮೀನು ಹೆಕ್ಕುತಿರುವ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಹೆಂಗಸರು ಮೀನು ಹೆಕ್ಕುವಲ್ಲಿ ಎತ್ತಿದ ಕೈ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ರೀತಿ ಮೀನು ಸಿಗುವುದು ಬಲು ಅಪರೂಪ.
ಕೈ ರಂಪಣಿ ಬಲೆಯವರು ಮೀನಿಗಾಗಿ ಹಾಕಿದ ಬಲೆಗೆ ಸಿಲ್ವರ್ ಫಿಷ್ (ಬೊಳೆಂಜೀರ್) ತುಂಬಿದ್ದರಿಂದ ಬಲೆ ಎಳೆಯಲು ಕಷ್ಟವಾಗಿ ದಡಕ್ಕೆ ಬಂದು ಬಲೆಯನ್ನು ಎಳೆಯಲು ಪ್ರಯತ್ನಿಸುತಿದ್ದರು. ಬಲೆಯಲ್ಲಿ ಮೀನು ತುಂಬಿ ತುಳುಕಿದ್ದು, ಅತಿಯಾದ ಮೀನುಗಳು ಸಮುದ್ರ ದಡದಲ್ಲಿ ಎಲ್ಲರ ಕೈಗೆ ಸಿಗುವಂತೆ ಒದ್ದಾಡುವ ದೃಶ್ಯ ಸಾಮಾನ್ಯವಾಗಿತ್ತು. ಸಮುದ್ರ ತೀರದಲ್ಲಿ ಈ ದೃಶ್ಯ ನೋಡಲು ಜನಸಾಗರವೇ ಇದ್ದರೂ ಎಲ್ಲರ ಚಿತ್ತ ಮೀನು ಹಿಡಿಯುವಲ್ಲೇ ಇತ್ತು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…