ಮೇಷ ರಾಶಿ:
ಕಷ್ಟದಲ್ಲೇ ಕಾರ್ಯಸಾಧನೆಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಗೊಂದಲಗಳು ಕಂಡುಬರಲಿವೆ. ವೃತ್ತಿರಂಗದಲ್ಲಿ ಸಾವಧಾನವಾಗಿ ಮುಂದುವರಿಯಿರಿ.
ವೃಷಭ ರಾಶಿ:
ಶುಭ ಕಾರ್ಯಗಳಿಗೆ ಇದು ಸಕಾಲ. ಹಿರಿಯರಿಗೆ ಪ್ರವಾಸದಲ್ಲಿ ಸಂತಸ ತರಲಿದೆ. ಸಕಾಲಿಕ ಯೋಜನೆಗಳು ಕಾರ್ಯಗತವಾಗಲಿವೆ.
ಮಿಥುನ ರಾಶಿ:
ಅನವಶ್ಯಕವಾಗಿ ವಾದ ವಿವಾದಗಳಿಗೆ ಕಾರಣರಾಗದಂತೆ ಜಾಗ್ರತೆ ವಹಿಸಿ. ಆಗಾಗ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿ ಕಂಡುಬರಲಿವೆ.
ಕಟಕ ರಾಶಿ:
ಮಿತ್ರರ ಪ್ರೇರಣೆಯಿಂದ ಹೊಸ ಯೋಜನೆ ಚಾಲನೆಗೆ ಬರಲಿದೆ. ಆಗಾಗ ಕೌಟುಂಬಿಕ ಗೊಂದಲಗಳು ಕಂಡು ಬರದಂತೆ ಜಾಗ್ರತೆ ವಹಿಸಿ. ವಾಹನ ಖರೀದಿಗಾಗಿ, ರಿಪೇರಿಗಾಗಿ ಖರ್ಚು ಬರುತ್ತದೆ.
ಸಿಂಹ ರಾಶಿ :
ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು. ಗೃಹದಲ್ಲಿ ಮನಸ್ತಾಪದಿಂದ ಅಸಮಧಾನಕರ ವಾತಾವರಣ ಕಂಡುಬರಲಿದೆ. .
ಕನ್ಯಾ ರಾಶಿ:
ಅನಿರೀಕ್ಷಿತವಾಗಿ ಕಾರ್ಯಕ್ಷೇತ್ರದಲ್ಲಿ ಪರಿವರ್ತನೆ ಹಂತಹಂತವಾಗಿ ಗೋಚರಕ್ಕೆ ಬರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಗಾಗ ಗೊಂದಲಗಳು ಕಂಡುಬರಬಹುದು.
ತುಲಾ ರಾಶಿ:
ಸಂಸಾರದಲ್ಲಿ ಗೃಹಿಣಿಗೂ, ಮಕ್ಕಳಿಗೂ ಇಷ್ಟಾರ್ಥ ಸಿದ್ಧಿ ತೃಪ್ತಿತರಲಿದೆ. ಆರ್ಥಿಕ ಸ್ಥಿತಿಯು ಖರ್ಚುವೆಚ್ಚಗಳಿಗೆ ಕಾರಣವಾದರೂ ಧನಾದಾಯವು ಉತ್ತಮವಿರುತ್ತದೆ. ಹೊಸ ಮಿತ್ರರ ಸಹಕಾರ ಸಿಗಲಿದೆ.
ವೃಶ್ಚಿಕ ರಾಶಿ:
ಹೊಸ ವ್ಯಾಪಾರ, ವ್ಯವಹಾರಗಳು ನಿರೀಕ್ಷೆಯ ಮಟ್ಟದಲ್ಲಿ ಆದಾಯವನ್ನು ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ತಲೆಬಿಸಿಯಾಗಬಹುದು. ಎಲ್ಲಾ ವಿಚಾರಗಳಲ್ಲಿ ಸಾಧನೆಗಳು ಹಂತಹಂತವಾಗಿ ನೆರವೇರಲಿವೆ.
ಧನುಸ್ಸು ರಾಶಿ:
ಉದ್ದಿಮೆಗಳಲ್ಲಿ ಸೋಲನ್ನು ಅರಿಯದ ಛಲವಾದಿಗಳಿಗೆ ಆತಂಕ ಉಂಟಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ.
ಮಕರ ರಾಶಿ:
ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಆರೋಗ್ಯ ಸುಧಾರಿಸಲಿದೆ. ಮಂಗಳ ಕಾರ್ಯಗಳಿಗೆ ಅಡಚಣೆಯಾಗಬಹುದು. ಹಿರಿಯರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ.
ಕುಂಭ ರಾಶಿ:
ಹೊಸ ಸಾಮಗ್ರಿಗಳು ಮನೆಗೆ ಬರಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅನಗತ್ಯ ಚಿಂತೆ ಬೇಡ. ಕೃಷಿಕರಿಗೆ ಅವರ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ.
ಮೀನ ರಾಶಿ:
ನಿಮ್ಮಲ್ಲಿ ನಾಯಕತ್ವ ಮತ್ತು ಸಾಂಸ್ಥಿಕ ಸಾಮರ್ಥ್ಯವು ಅಭಿವೃದ್ಧಿಗೊಳ್ಳುತ್ತದೆ. ತಂದೆಯ ಕಡೆಯಿಂದ ಪೂರ್ಣ ಬೆಂಬಲವಿರುತ್ತದೆ.
ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…
ಉಡುಪಿ : ಮಲಬಾರ್ ಗೋಲ್ಡ್ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಉಡುಪಿ : ಮಲಬಾರ್…
ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…
ಪ್ರಧಾನಿ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…
ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…