ಉಡುಪಿ

ಕಾಪು ಕ್ಷೇತ್ರದಲ್ಲಿ ಚರುಕು ಗೊಂಡ ಜೆಡಿಎಸ್ ಮತಬೇಟೆ, ಸೊರಕೆಯ ಕಾಮಗಾರಿ ಕೇವಲ ಕಮೀಷನ್ ಕಾಮಗಾರಿಯೆಂದು ಆರೋಪ ಮಾಡಿದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ.

ಕಾಪು : ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟೀಯ ಪಕ್ಷಗಳ ಹವಾ ಜೋರಾಗುತ್ತಿದ್ದಂತೆ, ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತದಳದ ಮತಬೇಟೆಯು ಜೋರಾಗಿಯೇ ಶುರುವಾಗಿದೆ. ಕುಂದಾಪುರ ಮೂಲದ ಮನ್ಸೂರ್ ಇಬ್ರಾಹಿಂ ಕಾಪುವಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು ನಾಮ ಪತ್ರ ಸಲ್ಲಿಸಿದ ದಿನದಿಂದಲೇ ಪ್ರಚಾರ ಕಾರ್ಯ ಶುರುಮಾಡಿದ್ದಾರೆ. ಕಾಪುವಿನಲ್ಲಿ ಮತಯಾಚನೇ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ” ರಾಜ್ಯದಲ್ಲಿ ನಡೆಯುತ್ತಿರುವ ಅನಚಾರ ಜಾಸ್ತಿಯಾಗುತ್ತಿದೆ ಇದರಿಂದ ಜನ ಬೇಸತ್ತು ಕುಮಾರ ಸ್ವಾಮಿಯ ಸರ್ಕಾರವನ್ನ ಬಯಸುತ್ತಿದ್ದಾರೆ ಹಾಗಾಗಿ ಈ ಸಲ ಮಾತ್ರ ರಾಜ್ಯದಲ್ಲಿ ಸೇರಿದಂತೆ ಕಾಪುವಿನಲ್ಲಿ ಕೂಡ ಜೆಡಿಎಸ್ ತನ್ನ ಗದ್ದುಗೆಯನ್ನ ಗಟ್ಟಿ ಮಾಡಿಕೊಳ್ಳಲಿದೆ ಎಂದರು. ಕಾಪುವಿನ ಅಭಿವೃದ್ದಿ ಕೇವಲ ಜಾಹಿರಾತು ಮತ್ತು ಪ್ರಚಾರದಲ್ಲಿ ಸೀಮಿತವಾಗಿದೆ, ಸೊರಕೆಯ ಯಾವುದೇ ಕಾಮಗಾರಿ ನಡೆದರೂ ಕೂಡ ಅದು ಕಮಿಷನ್ ಆಧಾರವಾಗಿರುತ್ತೆ ಬಿಟ್ರೇ ಜನರ ಉಪಯೋಗಕ್ಕೆ ಖಂಡಿತ ಅಲ್ಲ, ಪ್ರವಾಸೋದ್ಯಮ ಕೇಂದ್ರವಾಗಿರುವ ಕಾಪುವಿನ ಅಭಿವೃದ್ದಿ ಏನೆಂದು ಜನ ತಿರ್ಮಾನಿಸಲಿದ್ದಾರೆ ಹಾಗೂ ಸರಿಯಾದ ಹೆಜಮಾಡಿ ಬಂದರು ನಿರ್ಮಾಣವಾಗಿಲ್ಲ, ಯಾವುದೇ ಒಬ್ಬನಿಗೆ ಒಂದು ಉದ್ಯೋಗ ಸೃಷ್ಟಿಸುವ ಕಾರ್ಯ ಸೊರಕೆ ಮಾಡಿಲ್ಲ. ಕೇವಲ ರಸ್ತೆ ಮಾಡಿದರೇ ಅದು ಅಭಿವೃದ್ದಿ ಎನ್ನಲು ಸಾದ್ಯವೇ ಎಂದು ಪ್ರಶ್ನಿಸಿದರು. ಕಾಪು ಕ್ಷೇತ್ರದ ಕಟಪಾಡಿ, ಸುಭಾಸ್ ನಗರ, ಅಚ್ಚಡ ಸೇರಿದಂತೆ ವಿವಿಧಡೆಯಲ್ಲಿ ಮತ ಪ್ರಚಾರ ಆರಂಭಿಸಿ ಸುಮಾರು ನೂರಕ್ಕೂ ಅಧಿಕ ಬಿಜೆಪಿ ಕಾಂಗ್ರೇಸ್ ಕಾರ್ಯಕರ್ತರನ್ನ ಜೆಡಿಎಸ್ ಗೆ ಸೇರ್ಪಡೆಗೊಳಿಸಲಾಯಿತು.

 

ಈ ಸಂಧರ್ಭ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಕಾರ್ಯಧ್ಯಕ್ಷ ವಾಸುದೇವ್ ರಾವ್, ಶಾಲಿನಿ ಶೆಟ್ಟಿ,ಉದಯ್ ಹೆಗ್ಡೆ, ಹುಸೇನ್ ಹೈಕಾಡಿ, ಮಕ್ದ್ ಮ್ ಇಸ್ಮಾಯಿಲ್ ಸೇರಿದಂತೆ ಹಲವಾರು ಮುಖಂಡರು ಜೊತೆಗಿದ್ದರು.

Vishwa News 24

Recent Posts

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ – vishwanews24

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು  ತಂಬಾಕು ಮತ್ತು ನಿಕೋಟಿನ್ ಹೊಂದಿರುವ…

13 minutes ago

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ  ಭೇಟಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ  ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ  ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…

28 minutes ago

ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24

‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

2 hours ago

ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24

ವೋಟರ್ ಲಿಸ್ಟ್​ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್​ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…

2 hours ago

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ…

3 hours ago

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ – vishwanews24

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…

3 hours ago