ಮೇಷ : ಇಂದು ನಿಮ್ಮ ಕೌಟುಂಬಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಸಂಗಾತಿಯ ಮೇಲೆ ಬೇಸರ ಮೂಡುವಂತಹ ಘಟನೆಯೊಂದು ನಡೆಯಲಿದೆ.
ವೃಷಭ : ನಿಮ್ಮ ಬಹಳ ವರ್ಷಗಳ ಕಾಯುವಿಕೆಗೆ ಇಂದು ಉತ್ತರ ಸಿಗಲಿದೆ.ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿ ತೇಲಲಿದ್ದೀರಿ.
ಮಿಥುನ : ಚಿಕ್ಕ ಚಿಕ್ಕದಕ್ಕೂ ಕೋಪ ಮಾಡಿಕೊಳ್ಳುವುದನ್ನು ನಿಯಂತ್ರಿಸಿ. ಇಲ್ಲವಾದಲ್ಲಿ ಸಾರ್ವಜನಿಕ ಜೀವನದಲ್ಲಿ ನೀವು ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. .
ಕಟಕ : ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ನೇಹಿತರು ನೆರವಾಗಲಿದ್ದಾರೆ. ಇದರಿಂದ ನಿಮ್ಮ ತಲೆಯ ಮೇಲಿರುವ ಬಹುದೊಡ್ಡ ಭಾರವು ಇಳಿಯಲಿದೆ.
ಸಿಂಹ : ಸಂಗಾತಿಯು ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಬಿಡುತ್ತಿಲ್ಲವೆಂದು ಕೊರಗಲಿದ್ದೀರಿ. ಇದೇ ನಿಮ್ಮ ದಾಂಪತ್ಯ ಜೀವನದಲ್ಲಿ ಅಂತರ ಉಂಟು ಮಾಡಬಹುದು.
ಕನ್ಯಾ : ನಂಬಿಕೆ ಇದೆ ಎಂದ ಮಾತ್ರಕ್ಕೆ ಪ್ರಶ್ನಿಸಲೇಬಾರದು ಎಂದೇನಿಲ್ಲ. ನಿಮಗೆ ತಪ್ಪು ಎನಿಸಿದ್ದನ್ನು ಪ್ರಶ್ನೆ ಮಾಡುವ ಗುಣವನ್ನು ರೂಢಿಸಿಕೊಳ್ಳಿ. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳಲಿದ್ದೀರಿ.
ತುಲಾ : ಕೊಟ್ಟ ಮಾತಿಗೆ ಕಟ್ಟು ಬಿದ್ದು ನಿಮ್ಮಿಷ್ಟಗಳನ್ನು ಬಲಿಕೊಡುವ ಪ್ರಸಂಗ ಎದುರಾದೀತು. ಇಂದು ಹಲ್ಲು ನೋವಿನ ಸಮಸ್ಯೆ ನಿಮ್ಮನ್ನು ಅತಿಯಾಗಿ ಭಾದಿಸಲಿದೆ.
ವೃಶ್ಚಿಕ : ಕಚೇರಿ ಕೆಲಸದ ನಿಮಿತ್ತ ನಿಮಗೆ ವಿದೇಶ ಪ್ರಯಾಣದ ಅವಕಾಶ ಎದುರಾಗಲಿದೆ. ಪೋಷಕರು ತೀರ್ಥಯಾತ್ರೆಗೆ ತೆರಳುವ ಬಗ್ಗೆ ಇಂದು ನಿಮ್ಮೊಡನೆ ಚರ್ಚಿಸಲಿದ್ದಾರೆ.
ಧನು : ಕೆಲವೊಂದು ಪ್ರಯಾಣ ನಿಮಗೆ ಉಪಯುಕ್ತ ಎಂದು ಸಾಬೀತಾಗಲಿದೆ. ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಹೊಸ ಮಾರ್ಗಗಳನ್ನು ಹುಡುಕಲಿದ್ದೀರಿ.
ಮಕರ : ಲೌಕಿಕ ಜೀವನಕ್ಕಿಂತ ಆಧ್ಯಾತ್ಮ ಜೀವನದ ಕಡೆ ನಿಮ್ಮ ಮನಸ್ಸು ವಾಲಲಿದೆ. ಆಸೆ ಈಡೇರಿಸದ ಹಿನ್ನೆಲೆಯಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು.
ಕುಂಭ : ಇಂದು ನೀವು ಕಚೇರಿಯನ್ನು ಬದಲಾಯಿಸುತ್ತಿದ್ದೀರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತೇ ಆಗಲಿದೆ.
ಮೀನ : ಸಂಬಳ ಪಡೆಯುವ ಜನರು ಇಂದು ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…