ಮೇಷ : ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸಮಯ ಸಾಧಕರ ಬಗ್ಗೆ ಎಚ್ಚರಿದಿಂದಿರಿ. ವಿನಾಕಾರಣ ಸಂಗಾತಿಯ ಮೇಲೆ ಸಂಶಯ ಬೇಡ. ಬೇರೆಯವರು ನಿಮ್ಮನ್ನ ದುರುಪಯೋಗಪಡಿಸುವ ಸಾಧ್ಯತೆ ಇದೆ.
ವೃಷಭ : ಆರ್ಥಿಕ ಸಮಸ್ಯೆಗಳು ಕಡಿಮೆ ಆಗಲಿದೆ. ಯಾರದ್ದೋ ಮಾತನ್ನ ಕೇಳಿ ಸಿಟ್ಟಾಗಿರುವ ಪತ್ನಿಯನ್ನ ಸಾಂತ್ವನಗೊಳಿಸಲು ನಿಮ್ಮ ತಾಳ್ಮೆಯೇ ಪ್ರಮುಖ ಸಾಧನ. ಅಸಹಾಯಕರಿಗೆ ಸಹಾಯ ಮಾಡೋದ್ರಿಂದ ಪುಣ್ಯ ಪ್ರಾಪ್ತಿಯಾಗಲಿದೆ.
ಮಿಥುನ : ಮಾನಸಿಕ ನೋವನ್ನ ಮರೆಯಲು ಕುಟುಂಬಸ್ಥರ ಜೊತೆ ಕಾಲ ಕಳೆಯಲಿದ್ದೀರಿ. ಎಲ್ಲದ್ದಕ್ಕೂ ಇನ್ನೊಬ್ಬರನ್ನ ಅವಲಂಬಿಸುವ ಬುದ್ಧಿಯನ್ನ ಬಿಟ್ಟುಬಿಡಿ. ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ.
ಸಿಂಹ : ಕಚೇರಿ ಕೆಲಸಗಳಿಗೆ ಮೊದಲ ಆದ್ಯತೆಯನ್ನ ನೀಡಿ. ಸರ್ಕಾರಿ ಕೆಲಸಗಾರರಿಗೆ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯಕತೆ ಎದುರಾಗಬಹುದು. ಹಿರಿಯರೊಂದಿಗೆ ವಾದ ಮಾಡಬೇಡಿ.
ಕನ್ಯಾ : ಜವಳಿ ಉದ್ಯಮಿಗಳಿಗೆ ಲಾಭವಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಕೊಳ್ಳಲಿದ್ದೀರಿ. ಖಾಸಗಿ ನೌಕರಿ ಮಾಡುವವರಿಗೆ ಕೊಂಚ ಹಿನ್ನಡೆಯಿದೆ. ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬರಲಿದೆ.
ತುಲಾ : ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಮದುವೆಯಾಗಬೇಕು ಎಂದುಕೊಂಡವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಯಶಸ್ಸಿನ ಅಲೆಯಲ್ಲಿ ಹೆಚ್ಚು ಸಮಯ ತೇಲಬೇಡಿ.
ವೃಶ್ಚಿಕ : ಬೇರೆಯವರು ನಿಮ್ಮ ಮುಗ್ದತೆಯ ಲಾಭ ಪಡೆಯವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಅಣ್ಣ – ತಮ್ಮಂದಿರ ನಡುವೆ ಸಂಘರ್ಷ ಉಂಟಾಗಬಹುದು. ಅಗ್ನಿಯಿಂದ ಅಂತರ ಕಾಪಾಡಿ.
ಧನು : ಅನಾವಶ್ಯಕ ಋಣಾತ್ಮಕ ಚಿಂತನೆ ಬೇಡ. ಕಾರ್ಯಕ್ಷೇತ್ರಗಳಲ್ಲಿ ವಿರೋಧಿಗಳ ಕಾಟ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿ ಹಂತಹಂತವಾಗಿ ನೆಮ್ಮದಿ ಸಿಗಲಿದೆ.
ಮಕರ : ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಕಂಡುಬರಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ವೈಯಕ್ತಿಕ ಸಮಸ್ಯೆಗಳನ್ನ ಸಮಾಧಾನದಿಂದ ಎದುರಿಸಿ. ಅಗ್ನಿಯಿಂದ ದೂರವಿರಿ.
ಕುಂಭ : ದುರಂಹಕಾರಿ ಎಂಬ ಪಟ್ಟ ನಿಮಗೆ ಸಿಗಲಿದೆ. ಹೊಂದಾಣಿಕೆ ಮಾಡಿಕೊಂಡಷ್ಟೂ ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಸಂಚಾರ ಅತಿಯಾದ ಪರಿಣಾಮ ಧನವ್ಯಯವಾಗಲಿದೆ.
ಮೀನ : ಸಂತಾನ ಭಾಗ್ಯವಿದೆ. ಗರ್ಭಿಣಿಯರು ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ. ದೈವಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಲಿದೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…