ಮೇಷ : ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸಮಯ ಸಾಧಕರ ಬಗ್ಗೆ ಎಚ್ಚರಿದಿಂದಿರಿ. ವಿನಾಕಾರಣ ಸಂಗಾತಿಯ ಮೇಲೆ ಸಂಶಯ ಬೇಡ. ಬೇರೆಯವರು ನಿಮ್ಮನ್ನ ದುರುಪಯೋಗಪಡಿಸುವ ಸಾಧ್ಯತೆ ಇದೆ.
ವೃಷಭ : ಆರ್ಥಿಕ ಸಮಸ್ಯೆಗಳು ಕಡಿಮೆ ಆಗಲಿದೆ. ಯಾರದ್ದೋ ಮಾತನ್ನ ಕೇಳಿ ಸಿಟ್ಟಾಗಿರುವ ಪತ್ನಿಯನ್ನ ಸಾಂತ್ವನಗೊಳಿಸಲು ನಿಮ್ಮ ತಾಳ್ಮೆಯೇ ಪ್ರಮುಖ ಸಾಧನ. ಅಸಹಾಯಕರಿಗೆ ಸಹಾಯ ಮಾಡೋದ್ರಿಂದ ಪುಣ್ಯ ಪ್ರಾಪ್ತಿಯಾಗಲಿದೆ.
ಮಿಥುನ : ಮಾನಸಿಕ ನೋವನ್ನ ಮರೆಯಲು ಕುಟುಂಬಸ್ಥರ ಜೊತೆ ಕಾಲ ಕಳೆಯಲಿದ್ದೀರಿ. ಎಲ್ಲದ್ದಕ್ಕೂ ಇನ್ನೊಬ್ಬರನ್ನ ಅವಲಂಬಿಸುವ ಬುದ್ಧಿಯನ್ನ ಬಿಟ್ಟುಬಿಡಿ. ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ.
ಸಿಂಹ : ಕಚೇರಿ ಕೆಲಸಗಳಿಗೆ ಮೊದಲ ಆದ್ಯತೆಯನ್ನ ನೀಡಿ. ಸರ್ಕಾರಿ ಕೆಲಸಗಾರರಿಗೆ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯಕತೆ ಎದುರಾಗಬಹುದು. ಹಿರಿಯರೊಂದಿಗೆ ವಾದ ಮಾಡಬೇಡಿ.
ಕನ್ಯಾ : ಜವಳಿ ಉದ್ಯಮಿಗಳಿಗೆ ಲಾಭವಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಕೊಳ್ಳಲಿದ್ದೀರಿ. ಖಾಸಗಿ ನೌಕರಿ ಮಾಡುವವರಿಗೆ ಕೊಂಚ ಹಿನ್ನಡೆಯಿದೆ. ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬರಲಿದೆ.
ತುಲಾ : ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಮದುವೆಯಾಗಬೇಕು ಎಂದುಕೊಂಡವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಯಶಸ್ಸಿನ ಅಲೆಯಲ್ಲಿ ಹೆಚ್ಚು ಸಮಯ ತೇಲಬೇಡಿ.
ವೃಶ್ಚಿಕ : ಬೇರೆಯವರು ನಿಮ್ಮ ಮುಗ್ದತೆಯ ಲಾಭ ಪಡೆಯವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಅಣ್ಣ – ತಮ್ಮಂದಿರ ನಡುವೆ ಸಂಘರ್ಷ ಉಂಟಾಗಬಹುದು. ಅಗ್ನಿಯಿಂದ ಅಂತರ ಕಾಪಾಡಿ.
ಧನು : ಅನಾವಶ್ಯಕ ಋಣಾತ್ಮಕ ಚಿಂತನೆ ಬೇಡ. ಕಾರ್ಯಕ್ಷೇತ್ರಗಳಲ್ಲಿ ವಿರೋಧಿಗಳ ಕಾಟ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿ ಹಂತಹಂತವಾಗಿ ನೆಮ್ಮದಿ ಸಿಗಲಿದೆ.
ಮಕರ : ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಕಂಡುಬರಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ವೈಯಕ್ತಿಕ ಸಮಸ್ಯೆಗಳನ್ನ ಸಮಾಧಾನದಿಂದ ಎದುರಿಸಿ. ಅಗ್ನಿಯಿಂದ ದೂರವಿರಿ.
ಕುಂಭ : ದುರಂಹಕಾರಿ ಎಂಬ ಪಟ್ಟ ನಿಮಗೆ ಸಿಗಲಿದೆ. ಹೊಂದಾಣಿಕೆ ಮಾಡಿಕೊಂಡಷ್ಟೂ ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಸಂಚಾರ ಅತಿಯಾದ ಪರಿಣಾಮ ಧನವ್ಯಯವಾಗಲಿದೆ.
ಮೀನ : ಸಂತಾನ ಭಾಗ್ಯವಿದೆ. ಗರ್ಭಿಣಿಯರು ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ. ದೈವಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಲಿದೆ.
ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ ಸಮುದ್ರಪಾಲಾದ ಘಟನೆ ಉತ್ತರ…
ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…
ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…
ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…