Featured

400 ವರ್ಷಗಳ ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆಆಗಮಿಸುತ್ತಿದೆ ನೂತನ ಬ್ರಹ್ಮರಥ -Vishwanews24

ಮಂಗಳೂರು, ಅ.1ರಂದು (ಇಂದು) ಬೆಳಗ್ಗೆ  ನಗರದ ಕದ್ರಿ ಪಾರ್ಕ್ ಮುಂಭಾಗದಿಂದ ಬ್ರಹ್ಮರಥವನ್ನು ಕೊಂಡೊಯ್ಯುವ ಟ್ರಕ್ ಸುಬ್ರಹ್ಮಣ್ಯಕ್ಕೆ ಪಯಣಿಸಲಿದೆ. ಈ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಿತ್ ಶೆಟ್ಟಿ ಕಡಬ ತಿಳಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಉದ್ಯಮಿಗಳಾದ ಎನ್.ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಇವರು ಅರ್ಪಣೆ ಮಾಡಲಿರುವ ನೂತನ ಬ್ರಹ್ಮರಥ ಸೆ.30ರಂದು ಬೆಳಗ್ಗೆ 8ಕ್ಕೆ ಕೋಟೇಶ್ವರದಿಂದ ಬೃಹತ್ ಟ್ರಕ್ ಮೂಲಕ ಹೊರಟಿದ್ದು, ಕೋಟೇಶ್ವರ ಉಡುಪಿ ಮೂಲ್ಕಿ ಮಾರ್ಗವಾಗಿ ಆಗಮಿಸಿ ರಾತ್ರಿ ಮಂಗಳೂರು ತಲುಪಿದೆ.

ಚಂಪ ಷ್ಠಷ್ಠಿ ಸಮಯದಲ್ಲಿ ಶ್ರದ್ಧಾ ಭಕ್ತಿಂಯಿದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವಾಸ್ಥೆಗೆ ತಲುಪಿತ್ತು. ಹಾಗಾಗಿ ದೇವಳದ ವತಿಯಿಂದ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭ ಈ ವಿಚಾರ ತಿಳಿದ ಬಳಿಕ ನೂತನ ರಥಕ್ಕೆ ಮೂಹರ್ತ ಮಾಡಲಾಗಿತ್ತು. ಬೆಂಗಳೂರು ಬಿಡದಿ ರಿಯಾಲಿಟಿ ವೆಂಚರ್ ಪೋರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಮುತ್ತಪ್ಪ ರೈ ಹಾಗೂ ಪಾಲುದಾರ ಅಜಿತ್ ಶೆಟ್ಟಿ ಇವರ ಸಹಕಾರದೊಂದಿಗೆ ಅಂದಾಜು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನೂತನ ಬ್ರಹ್ಮರಥವನ್ನು ದೇವಳಕ್ಕೆ ದಾನ ರೂಪದಲ್ಲಿ ನೀಡಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 400 ವರ್ಷಗಳ ಇತಿಹಾಸ ಹೊಂದಿದ ಹಳೆ ಬ್ರಹ್ಮರಥದ ಮಾದರಿಯನ್ನಾಗಿಟ್ಟುಕೊಂಡು ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯ ಇವರ ನೇತೃತ್ವದಲ್ಲಿ ನಿರ್ಮಾಣಗೊಂಡಿದೆ.

ಶಿಲ್ಪಶಾಸ್ತ್ರದ ಪ್ರಕಾರ ಸ್ಕಂದ್ಯ ರಥದ ಮಾದರಿಯಲ್ಲೇ ರಥವನ್ನು ತಯಾರಿಸಲಾಗಿದೆ. ಹಳೆಯ ರಥದ ಆಯ ಮತು ಅಳತೆಗೆ ಸಮವಾಗಿ ಪ್ರಾಚೀನ ಶಿಲ್ಪ ಕಲೆಗೆ ದಕ್ಕೆ ಬರದಂತೆ ನೆಲದಿಂದ ಜಿಡೆಯವರೆಗೆ 17 ಅಡಿ ಎತ್ತರ ಮತ್ತು 17 ಅಡಿ ಅಗಲವಾಗಿ ಒಟ್ಟು ರಥ ಕಲಶದ ತುದಿಯವರೆಗೆ 63 ಅಡಿ ಎತ್ತರ ಹೊಂದಿದೆ.

ಈ ರಥದಲ್ಲಿ ಒಟ್ಟು 6 ಚಕ್ರಗಳಿದ್ದು 8.5 ಅಡಿ ಎತ್ತರವಾಗಿದೆ. ಇದರಲ್ಲಿ ಅಜ್ಜಿನ ಮರ, ನೆಗಳನ ಅಡ್ಡೆ, ಮತ್ತು ಚಕ್ರಗಳು ಕಿರಾಲು ಬೋಗಿ ಮರದಿಂದ ತಯಾರಿಸಿದ್ದು ಇನ್ನುಳಿದ ಭಾಗಕ್ಕೆ ಸಂಪೂರ್ಣ ಸಾಗುವಾನಿ ಮರವನ್ನು ಬಳಸಲಾಗಿದೆ. ಈ ರಥವು 16 ಅಂತಸ್ತುಗಳ ಚೌಕದಲ್ಲಿ ಆನೆ ಜಂತಿ, ಬಳ್ಳಿಸಾಲು, ಪದ್ಮನ ಸಾಲು, 4 ಅಂತಸ್ತು ಚಿತ್ರದ ವಿಗ್ರಹಗಳು, ವಿಷ್ಣುವಿನ ಚರ್ತುವಂಶಿ ಚಿತ್ರಗಳು, ಶೀವನ ಲೀಲೆಗಳು, ದಕ್ಷಯಜ್ಞ, ಪಾರ್ವತಿ ಕಲ್ಯಾಣ, ಸುಬ್ರಹ್ಮಣ್ಯ ಜನನ, ಕಾರ್ತಿಕೇಯ, ರಾಮಯಾಣ ಭಾಗವಾದ ಪುತ್ರ ಕಾಮ್ಟೇಯಾಗ, ದಶಾವತಾರ, ದಿಕ್ಕುಪಾಲಕರು, ದೇವರು ಕುಳಿತುಕೊಳ್ಳುವ ಪೀಠ, ಆನೆ ಮೇಲೆ ಕುಳಿತ ಸಿಂಹ, ಚತುರ್ವಿಂಶತಿ ಮೂರ್ತಿಗಳು, 4 ಮೂಲೆಯಲ್ಲಿ 5 ಅಡಿ ಎತ್ತರದ ದ್ವಾರಪಾಲಕರೂ ಸೇರಿದಂತೆ ಸಾವಿರಾರೂ ಚಿತ್ರಗಳು ಕಾಷ್ಠ ಶಿಲ್ಪ ಕೆತ್ತನೆಯ ಶಿಲ್ಪಿಗಳಿಂದ ವೈಭವವಾಗಿ ಮೂಡಿಬಂದಿದೆ. ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ 42ಕ್ಕೂ ಅಧಿಕ ಮಂದಿ ಶಿಲ್ಪಿಗಳ ಮೂಲಕ ಹಳೆಯ ಶೈಲಿಯಲ್ಲಿಯೇ ನೂತನವಾಗಿ ಈ ಬ್ರಹ್ಮರಥ ನಿರ್ಮಾಣಗೊಂಡಿದೆ.

 

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

4 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

4 days ago