Featured

ಕೋಳಿ ಫಾರಂ -ನೊಣಗಳ ಹಾವಳಿ:ಹೇರೂರು ಗ್ರಾಮಸ್ಥರ ನರಕಯಾತನೆ- ದೂರು ಸಲ್ಲಿಸಿದ ಗ್ರಾಮಸ್ಥರು

ನೊಣಗಳ ಹಾವಳಿ:ಹೇರೂರು ಗ್ರಾಮಸ್ಥರ ನರಕಯಾತನೆ- ದೂರು ಸಲ್ಲಿಸಿದ ಗ್ರಾಮಸ್ಥರು

ಕಾಪು: ಮಜೂರು ಗ್ರಾಮ‌ಪಂಚಾಯತ್ ವ್ಯಾಪ್ತಿಯ ಹೇರೂರು ವಾರ್ಡಿನಲ್ಲಿ ನೊಣಗಳ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮದ ಜನತೆ ಹಾಗೂ 92ನೇ ಹೇರೂರು ಹಾಲು ಉತ್ಪಾದಕರ ಮಹಿಳಾ ಸಂಘದದ ವತಿಯಿಂದ ಸ್ಥಳೀಯವಾಗಿರುವ ಕೋಳಿ ಫಾರಂನ್ನು ಸರಿಯಾಗಿ ನಿರ್ವಹಿಸಲು ಮಾಲಕರಿಗೆ ಸೂಚನೆ ನೀಡುವಂತೆ ಒತ್ತಾಯಿಸಿ ದೂರು ನೀಡಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆಯಿತು.

ಮಜೂರು ಗ್ರಾಮಕ್ಕೆ ಹೊಂದಿಕೊಂಡಂತೆ ಹೇರೂರು ವಾರ್ಡಿನಲ್ಲಿ ಇರುವ  ಕೋಳಿ ಫಾರಂನಲ್ಲಿ ನೊಣಗಳು ದೊಡ್ಡ ಮಟ್ಟದಲ್ಲಿ ಉತ್ಪತ್ತಿಯಾಗುತ್ತಿರುವುದು ಸಾರ್ವಜನಿಕರ  ಹಾಗೂ ಹಾಲು ಉತ್ಪಾದಕರ ಅಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಕೆಲವು ಸಮಯಗಳಿಂದ ಕೋಳಿ ಫಾರಂನ್ನು ವಹಿಸಿಕೊಂಡು ಮೊಟ್ಟೆ ಕೋಳಿಗಳನ್ನು ಸಾಕಲು ಪ್ರಾರಂಭಿಸಿದ ದಿನದಿಂದ ನೊಣಗಳ ಸಮಸ್ಯೆ ಶುರುವಾಗಿದೆ ಎಂದು ದೂರಲಾಗಿದೆ.

ನೊಣಗಳ ಸಮಸ್ಯೆಯೆಂದರೆ ಒಬ್ಬಿಬ್ಬರ ಸಮಸ್ಯೆಯಲ್ಲ,  ಕುಳಿತರೆ ನೊಣ, ಊಟ ಮಾಡಲು ಹೋದರೆ ನೊಣ, ಮನೆಯಲ್ಲಿನ ಪಾತ್ರೆಗಳ ಮೇಲೆ ನೊಣಗಳು ಕುಳಿತು ಅಂಟು ಅಂಟಾಗಿವೆ, ಕಿಟಕಿ ಗಾಜುಗಳು, ಗೋಡೆಗಳು ನೊಣಗಳ ಅಂಟಿನಿಂದ ಗಲೀಜಾಗಿ ಕೈಯಿಂದ ಮುಟ್ಟಲಾಗದಂತೆ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಈ ಬಗ್ಗೆ ಮಜೂರು ಪಂಚಾಯತ್ ಪಿಡಿಓ ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ ” ಈ ನೊಣಗಳ ವಿಚಾರವಾಗಿ ಕಳೆದ ವರ್ಷವೂ ದೂರು ಬಂದಿದ್ದು ಫಾರಂ‌ ಮಾಲಿಕರಿಗೆ ನೋಟಿಸ್ ನೀಡಿ ಸರಿಯಾಗಿ ಸ್ವಚ್ಛತೆ ಕಾಪಾಡಿಕೊಂಡು ನಿರ್ವಹಿಸುವಂತೆ‌ ಹೇಳಿದ್ದೇವು ಈ ಸಲ ಮತ್ತೆ ಸಮಸ್ಯೆಯಾಗಿದೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

20 ವರ್ಷಗಳಿಂದ ಕೋಳಿ ಫಾರಂ ನಡೆಯುತ್ತಿತ್ತು, ಆಗ ಏನು ಸಮಸ್ಯೆ ಇರಲಿಲ್ಲ. ಪ್ರಸ್ತುತ ಲೀಸ್ ಆಧಾರದಲ್ಲಿ   ವಹಿಸಿ ಕೊಂಡ ಮೇಲೆ ನೊಣಗಳ ಸಮಸ್ಯೆ ಜಾಸ್ತಿಯಾಗಿರಬಹುದು ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದೆಂದು ಫಾರಂ‌ಮಾಲಕರು ತಿಳಿಸಿದರು

ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಪೂರ್ಣವಾಗಿ ನೊಣಗಳನ್ನು ನಿಯಂತ್ರಿಸಿ ನಡೆಸಬೇಕು,ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾದರೇ ಕ್ರಮಕ್ಕಾಗಿ  ಒತ್ತಾಯಿಸಲಾಗುವುದು ಅನ್ನುತ್ತಾರೆ ವಾರ್ಡ್ ಸದಸ್ಯ ವಿಜಯ್ ಧೀರಜ್.

ಒಟ್ಟಾರೆಯಾಗಿ ಯಾವುದೇ ರೀತಿಯಿಂದಾದರೂ ಗ್ರಾಮದ ಜನರಿಗೆ ನೊಣಗಳ ಸಮಸ್ಯೆಯಿಂದ ಮುಕ್ತಿ ಸಿಗಲಿ‌ ಎಂಬುದು ಆಶಯ.
ಬ್ಯೂರೋ ರಿಪೋರ್ಟ್
ವಿಶ್ವನ್ಯೂಸ್24- ಕಾಪು

Vishwa News 24

Recent Posts

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

21 hours ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

21 hours ago

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ – vishwanews24

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…

22 hours ago

ಟೈಮಿಂಗ್‌ ವಿವಾದ: ಕಾಪು ಸರ್ವಿಸ್ ರಸ್ತೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ – vishwanews24

ಟೈಮಿಂಗ್‌ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…

24 hours ago

ಉಡುಪಿ: ‘ಭಗವತಿ ಟೂರಿಸ್ಟ್’ ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ – vishwanews24

ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…

24 hours ago

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ – vishwanews24

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…

24 hours ago