ಉಡುಪಿ: ಎರಡು ಕಾಲು ನೋವಿರುವ ವಯೋವೃದ್ಧರು ನಮ್ಮ ರಾಜ್ಯದಿಂದ ಅಯೋಧ್ಯೆಗೆ ಹೊರಟಿದ್ದಾರೆ.
ಕರ್ನಾಟಕದ ವಿಶೇಷ ಭಕ್ತರೊಬ್ಬರು ಅಯೋಧ್ಯೆಗೆ ಗಾಲಿಕುರ್ಚಿಯಲ್ಲಿ ಹೊರಟಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂದರ್ಶನ ಮಾಡುತ್ತಾ, ರಾಮಲಲ್ಲಾನನ್ನು ನೋಡಲು ಮಂಜುನಾಥ ತೆರಳುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ದಾರಿಯಲ್ಲಿರುವ ಎಲ್ಲಾ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ.
ಒಂದೆರಡು ತಿಂಗಳಲ್ಲಿ ಅಯೋಧ್ಯೆ ತಲುಪುವ ಲೆಕ್ಕಾಚಾರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ಮೂಲದ ಮಂಜುನಾಥ್, ಹರಿದ್ವಾರ, ಮಥುರಾ, ಆಗ್ರಾ ಮಹಾರಾಷ್ಟ್ರ ಖಂಡ್ವಾ ಪಂಡರಪುರ ಮಹಾಲಕ್ಷ್ಮಿ ಕೊಲ್ಹಾಪುರ ಕೂಡಲಸಂಗಮ, ತಮಿಳುನಾಡು, ತಿರುಪತಿ, ತಿರುಮಲ, ತಿರುಚಿ ಕನ್ಯಾಕುಮಾರಿ, ರಾಮೇಶ್ವರ ಕ್ಷೇತ್ರಗಳನ್ನು ಸುತ್ತಾಡಿದ್ದಾರೆ.
ಯುವಕನಾಗಿದ್ದಾಗ ಬೈಕ್, ಆಮೇಲೆ ಸೈಕಲ್ ಈಗ ಗಾಲಿಕುರ್ಚಿಯ ಮೂಲಕ ಮಂಜುನಾಥ್ ಯಾತ್ರೆ ಹೊರಟಿದ್ದಾರೆ. ಮo- ಮಂದಿರದಲ್ಲಿ ತಂಗಿ ಮುಂದಿನ ಕ್ಷೇತ್ರಕ್ಕೆ ತೆರಳುತ್ತಾರೆ. ಊಟ-ಉಪಹಾರ ಎಲ್ಲವೂ ಉಚಿತವಾಗಿಯೇ ಆಗುತ್ತದೆ. ಸಂತ ರವಿದಾಸರು ನನ್ನೊಳಗೆ ಅಂತರ್ಗತರು ಎನ್ನುತ್ತಾ, ರಾಮ – ಹನುಮನ ಧ್ವಜದ ರಕ್ಷೆಯೊಂದಿಗೆ ತೆರಳುತ್ತಿದ್ದೇನೆ ಎಂದು ಭಕ್ತಿಯ ಮಾತುಗಳನ್ನಾಡುತ್ತಾರೆ.
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…
ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…
ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…