ಉಡುಪಿ

BREAKING NEWS ಕಾಪು ಬಿಜೆಪಿಯಲ್ಲಿ ಸೀಟಿನ ವಿಚಾರದ ಮಹತ್ತರ ತಿರುವು, ಇಬ್ಬರ ಪೈಪೋಟಿ ಮಹಿಳೆಗೆ ಲಾಭ!….?

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಿದ್ದಂತೆ ಕಾಪು ಬಿಜೆಪಿಯಲ್ಲಿ ಹೊಸ ರಾಜಕೀಯ ಅಲೆಯೊಂದು ಎಬ್ಬಿದೆ, ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಲಾಲಜಿ ಆರ್ ಮೆಂಡನ್ ಟಿಕೆಟ್ ಪೈಪೋಟಿಗೆ ತೆರೆ ಎಳೆಯಲು ಬಿಜೆಪಿ ಹೈಕಾಮಂಡ್ ಮುಂದಾಗಿದೆ ಎನ್ನಲಾಗುತ್ತಿದೆ.

ಉಡುಪಿಯಲ್ಲಿ ಸದ್ದು ಮಾಡಿದ್ದ ಮಹಿಳೆ ನಯನ ಗಣೇಶ್ ಹೆಸರನ್ನು ಕಾಪುವಿಗೆ ಜೋಡಿಸುವ ಕಾರ್ಯ ನಡೆಯಬಹುದು, ಇಲ್ಲವೇ ಬಿಲ್ಲವ ವಿನಯ್ ಕುಮಾರ್ ಸೊರಕೆಯೆದುರು ಮಹಿಳಾ ಬಿಲ್ಲವ ನಾಯಕಿ ಗೀತಾಂಜಲಿ ಸುವರ್ಣರನ್ನು ಕಣಕ್ಕಿಳಿಸುವ ಪ್ರಯತ್ನವೂ ನಡೆಯಬಹುದಾಗಿದೆ. ಈ ಎಲ್ಲದರ ನಡುವೇ ವಿನಯ್ ಕುಮಾರ್ ಸೊರಕೆಯನ್ನ ಎದುರಿಸಲು ಕಾಪುವಿನಲ್ಲಿ ಸಂಘಪರಿವಾರವೂ ಎಲ್ಲಾ ರೀತಿಯ ಪ್ರಯತ್ನವೂ ನಡೆಸುತ್ತಿದೆ ಎನ್ನುವ ಮಾಹಿತಿಯು ಲಭ್ಯವಾಗಿದೆ.

ಮೊಗವೀರ ಪುರುಷನ ಬದಲು ಮಹಿಳೆ

ಹೌದು ಕಾರ್ಯಕರ್ತರ ಹುಮ್ಮಸನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಮತ್ತು ಈಗಾಗಲೇ ಎರಡು ಬಾರಿ ಶಾಸಕರಾಗಿ ಹೊರಹೊಮ್ಮಿದ ಲಾಲಜಿ ಆರ್ ಮೆಂಡನ್ ರಾಜ್ಯದಲ್ಲಿಯೇ ಒರ್ವ ಮೊಗವೀರ ಶಾಸಕನಾದ ಹಿನ್ನಲೆಯಿರುವುದರಿಂದ ಮತ್ತು ಉಡುಪಿ, ಕಾಪುವಿನಲ್ಲಿ ಮೊಗವೀರ ವೋಟ್ ನಿರ್ಣಾಯಕವಾಗಿರುವುದರಿಂದ ಬಿಜೆಪಿಯಲ್ಲಿ ಒಂದು ಸೀಟು ಮೊಗವೀರರಿಗೆ ನೀಡಬೇಕಾಗುತ್ತದೆ ಮತ್ತು ಮಹಿಳಾಮಣಿಯರ ಮತವನ್ನ ಬಿಜೆಪಿ ತನ್ನತ ಸೆಳೆಯುವ ಉದ್ದೇಶದಿಂದ ಲಾಲಜಿ ಬದಲು ನಯನ ಗಣೇಶ್ ರನ್ನು ಕಣಕಿಳಿಸಬಹುದೆನ್ನುವ ಮಾತು ಕೂಡ ಕೇಳಿ ಬರುತ್ತಿದೆ.ಇದರಲ್ಲಿ ಯಾವುದೇ ಅನುಮಾನವೇನಿಲ್ಲ ಒಂದು ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆದುರುಳಿಸುವ (ಅಂದರೇ ಮಹಿಳಾ ಮತ ಮತ್ತು ಮೋಗವೀರ ಮತವನ್ನು )ಪ್ರಯತ್ನವನ್ನು ಬಿಜೆಪಿ ಮಾಡಬಹುದಾಗಿದೆ.


ಬಿಲ್ಲವನಿಗೆ ಬಿಲ್ಲವರಿಂದಲೇ ಎದುರೇಟು.
ಹೌದು ವಿನಯ್ ಕುಮಾರ್ ಸೊರಕೆ ಬಿಲ್ಲವ ನಾಯಕನಾಗಿರುವುರಿಂದ ಅವರನ್ನ ಮಣಿಸಲು ಬಿಲ್ಲವ ಮಹಿಳಾ ನಾಯಕಿ, ರಾಜ್ಯ ಮಹಿಳಾ ಮೋರ್ಚದ ಕಾರ್ಯದರ್ಶಿ, ಹಾಲಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಮತ್ತು ಎಲ್ಲಾರೊಂದಿಗೆ ಸೌಮ್ಯ ಸ್ವಭಾವದಿಂದ ಗೌರವಿಸುವ ಗೀತಾಂಜಲಿ ಸುವರ್ಣರನ್ನು ಕಣಕ್ಕಿಳಿಸಿಬಹುದಾಗಿದೆ. ಇದರಿಂದ ಜಾತಿಗುಂಗಿನ ಗೊಜಲು ದೂರವಾಗಿ ಬಂಟರು ಮತ್ತು ಮೊಗವೀರರು ಸೇರಿದಂತೆ ಎಲ್ಲರೂ ಒಮ್ಮತವಾಗಿ ಸುವರ್ಣ ರನ್ನ ಬೆಂಬಲಿಸಬಹುದೆನ್ನುವ ಲೆಕ್ಕಚಾರ ಕೂಡ ಹೈಕಾಮಂಡ್ ಬಳಿಯಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಗುರ್ಮೆಯ ನಡೆ

ಸಮಾಜಿಕವಾಗಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಗುರ್ಮೆ ಸುರೇಶ್ ಶೆಟ್ಟಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಪೈಪೋಟಿ ನಡೆಸಿದ್ದರೂ ಕೂಡ ಕಡೆ ಗಳಿಗೆಯಲ್ಲಿ ಅದು ವಿನಯ್ ಕುಮಾರ್ ಸೊರಕೆಯ ಪಾಲಾಯಿತು. ತದನಂತರ ಗುರ್ಮೆ ಕಾನಿಸಿಕೊಂಡದ್ದು ಭಾರತೀಯ ಜನತಾ ಪಾರ್ಟಿಯಲ್ಲಿ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪನವರ ಮತ್ತು ರಾಜ್ಯ ಹಾಗೂ ಕೇಂದ್ರ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಗುರ್ಮೆ ತದನಂತರದ ದಿನದಲ್ಲಿ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡು ಭಾಜಪದ ಕಾರ್ಯಕರ್ತರಿಗೆ ಮತ್ತು ಸಮಾಜಕ್ಕೆ ಚಿರಪರಿಚಿರಾದರು.
ಈ ಭಾರಿ ಬಿಜಪಿ ಸೀಟ್ ಆಕಾಂಕ್ಷಿಯಾಗಿರುವ ಗುರ್ಮೆಗೆ ಟಿಕೆಟ್ ಸಿಕ್ಕರೆ ವಿನಯ್ ಕುಮಾರ್ ಸೊರಕೆಯೆಂಬ ಗೆಲುವಿನ ಕುದುರೆಗೆ ಲಗಾಮು ಹಾಕುತ್ತಾರೆ ಮತ್ತು ಹತ್ತು ಸಾವಿರಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲುವುದು ಪಕ್ಕಾ ಅನ್ನುವ ಮಾತು ಕಾರ್ಯಕರ್ತರ ವಲಯದಿಂದ ಕೇಳಿಬರುತ್ತಿದೆ. ಒಂದು ವೇಳೆ ಟಿಕೆಟ್ ಸಿಗದೆಹೋದಲ್ಲಿ ಗುರ್ಮೆಯ ನಡೆ ಯಾವ ರೀತಿ ಇರುತ್ತೆ ಎಂಬುದನ್ನ ಕಾದು ನೋಡಬೇಕಾಗಿದೆ.


ಲಾಲಜಿಗೆ ಎಮ್.ಎಲ್.ಸಿ..?
ಕಡೆ ಪಕ್ಷ ಲಾಲಜಿ.ಆರ್ ಮೆಂಡನ್ ರಿಗೆ ಈ ಭಾರಿ ಟಿಕೆಟ್ ವಂಚಿತರಾದರೆ ಮೊಗವೀರ ನಾಯಕ ರಾಜ್ಯದಲ್ಲಿ ಬೇಕೆನ್ನುವ ಉದ್ದೇಶದಿಂದ ಮತ್ತು ಸಮಾಧಾನ ಮಾಡುವ ನಿಟ್ಟಿನಲ್ಲಿ ಸರ್ಕಾರ ಗದ್ದುಗೆಯೇರಿದರೆ ಮಾಜಿ ಶಾಸಕ ಮತ್ತು ಹಾಲಿ ಶಾಸಕ ಟಿಕೆಟ್ ವಂಚಿತರಿಗೆ ಸೂಕ್ತ ಸ್ಥಾನಮಾನದ ಗೌರವ ನೀಡುತ್ತೆವೆಂದು ಇಂದು ಯಡಿಯೂರಪ್ಪನವರು ಹೇಳಿದ್ದಾರೆ, ಆ ಸರದಿ ಪ್ರಕಾರ ಮೆಂಡನ್ ರನ್ನು ಎಮ್.ಎಲ್.ಸಿ ಮಾಡುವ ಸಾಧ್ಯತೆಯೂ ಹೆಚ್ಚಿದೆ.

ಒಟ್ಟಾರೆಯಾಗಿ ಎರಡನೇ ಪಟ್ಟಿಯಲ್ಲಿಯೂ ಕೂಡ ಕಾಪು ಮತ್ತು ಉಡುಪಿಯ ಹೆಸರು ಬಾರದಿರುವುದರಿಂದ ಕಾರ್ಯಕರ್ತರ ಕೂತುಹಲ ಮತ್ತಷ್ಟು ಕೆರಳಿಸಿದ್ದು. ಎರಡೂ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಮತ್ತು ಗೆಲ್ಲುವ ಕುದುರೆ ಯಾವುದೆಂಬುದನ್ನ ಕಾದು ನೋಡಬೇಕಾಗಿದೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago