ಕಾಪು: ಇಲ್ಲಿನ ಪುರಸಭೆ ವ್ಯಾಪ್ತಿ ಮಾತ್ರವಲ್ಲದೆ ಸ್ಥಳಿಯ ಪಂಚಾಯತ್ ವ್ಯವಸ್ಥೆಯೊಳಗೆ ಸೇರಿಕೊಂಡಿರುವ ಕಾಪು ನಗರಾಭಿವೃದ್ದಿ ಪ್ರಾಧಿಕಾರದ ಕಾನೂನು ತೊಡಕುಗಳು ಸದ್ಯ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ ಇದರಿಂದಾಗಿ ಮುಂದಿನ ಚುನಾವಣೆ ನಡೆದು ಹೊಸ ಸರ್ಕಾರ ಬರುವವರೆಗೂ ಜನಸಾಮಾನ್ಯರು ಜಾತಕಪಕ್ಷಿಯಂತೆ ಕಾಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಪುವಿಗೆ ಬಿಜೆಪಿ ಶಾಸಕ ಆಡಳಿತ ಬಂದರೆ ಪ್ರಾಧಿಕಾರದ ಕಾನೂನು ತೊಡಕು ಮತ್ತು ಮಾಸ್ಟರ್ ಪ್ಲ್ಯಾನ್ ನಡೆಸಿ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನೀಡಿದ್ದ ಭರವಸೆ ಸದ್ಯ ಸುಳ್ಳಾಗಿದೆ ಮುಂದಿನ ಚುನಾವಣೆ ನಡೆದು ಹೊಸ ಶಾಸಕರು ಬರುವವರೆಗೆ ಈ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಸದ್ಯ ಕಾಣುತ್ತಿಲ್ಲ.
ಮಾಜಿ ಸಚಿವ ವಿನಯ ಕುಮಾರ್ ಸೊರಕೆಯ ಅವಧಿಯಲ್ಲಿ ಕಾಪುವಿಗೆ ಅಭಿವೃದ್ದಿಯ ದೃಷ್ಟಿಯಿಂದ ಜಾರಿಗೆ ಬಂದು ಹತ್ತಾರು ಸಾರ್ವಜನಿಕ ಕೆರೆಗಳು -ಇಂಟರ್ಲಾಕ್ – ಕಾಮಗಾರಿಗಳು ನಡೆದಿದ್ದವು ಅದೇ ಸಮಯದಲ್ಲಿ ಚುನಾವಣೆ ಘೋಷಣೆಯಾದ ಪರಿಣಾಮ ಪ್ರಾಧಿಕಾರದಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ ಬಿಜೆಪಿ ಶಾಸಕರಿ ಗೆದ್ದು ಬಂದ ಕೂಡಲೇ ಪ್ರಾಧಿಕಾರ ರದ್ದುಗೊಳಿಸುವುದಾಗಿ ಡಂಗುರ ಸಾರಿಸಿ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಕೈವಶ ಮಾಡಿಕೊಂಡು ೨೦೨೩ ನೇ ಸಾಲಿಗೆ ಐದು ವರ್ಷವಾದರೂ ಇದುವರೆಗೆ ಒಂದು ಪೈಸೆಯ ಹೊಸ ಬೆಳವಣಿಗೆ ಕಂಡುಬಂದಿಲ್ಲ ಮತ್ತು ಪ್ರಾಧಿಕಾರದಿಂದ ಹೊಸ ಯೋಜನೆಗಳು ಜಾರಿಗೆ ಬಾರದೇ ಹಿಂದಿನಿಗಿಂತ ಜಾಸ್ತಿ ಸಮಸ್ಯೆಗಳು ಉಧ್ಬವಗೊಂಡಿದೆ.
ಕಳೆದು ಐದು ವರ್ಷದಲ್ಲಿ ಮಾಸ್ಟರ್ ಪ್ಲ್ಯಾನ್ ಝಡ್.ಆರ್.ಆರ್ ಆಗದ ಪರಿಣಾಮವಾಗಿ ಸಾಮಾನ್ಯ ಜನರ ಸಮಸ್ಯೆಗೆ ಮುಕ್ತಿ ದೊರಕದೆ ಪ್ರತಿದಿನ ಬಿಜೆಪಿ ಶಾಸಕರ ಸುಳ್ಳು ಭರವಸೆಗೆ ಹಿಡಿಶಾಪ ಹಾಕುವಂತಾಗಿದೆ.ಈ ಪ್ರಾಧಿಕಾರದಿಂದಾಗಿ ಕಾಪು ಪುರಸಭೆಯ ಸುತ್ತಲಿನ ಪಂಚಾಯತ್ನ ಗ್ರಾಮಸ್ಥರು ಕೂಡ ಬಲಿಯಾಗುತ್ತಿದ್ದು ಆದರೇ ಅಲ್ಲಿನ ಅಧಿಕಾರ ಶಾಹಿ ಪಕ್ಷಗಳು ತಮ್ಮದೇ ಪಕ್ಷದ ಶಾಸಕರ ಪರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಪರಿಣಾಮವಾಗಿ ತಮ್ಮೂರಿನ ಗ್ರಾಮಸ್ಥರನ್ನು ಪ್ರಾಧಿಕಾರದ ಕೂಪದೊಳಗೆ ದೂಡುವ ಪ್ರಯತ್ನ ನಡೆಸುತ್ತಿರುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ವಿಪರ್ಯಾಸವಾಗಿದೆ.
ನಗರಾಭಿವೃದ್ದಿ ಪ್ರಾಧಿಕಾರ ಪೆಡಂಭೂತ ಎಂದು ಸಾರಿ ಸಾರಿ ಹೇಳುತ್ತಿದ್ದ ಬಿಜೆಪಿ ಶಾಸಕ ಲಾಲಾಜಿ ಆರ್ ಮೆಂಡನ್ ಗೆ ಇವತ್ತಿನವರೆಗೂ ಸಿಬ್ಬಂಧಿ ಕೊರತೆ ನೀಗಿಸಲು ಸಾಧ್ಯವಾಗಿಲ್ಲ ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಅಭಿವೃದ್ದಿ ಕಾಣಬೇಕಾಗಿದ್ದ ಕಾಪು ಇದೀಗ ಪ್ರಾಧಿಕಾರದ ಸಮಸ್ಯೆಯಿಂದ ನಲುಗುತ್ತಿದೆ ಸದ್ಯ ಮುಂದಿನ ಚುನಾವಣೆ ನಡೆಯುವವರೆಗೂ ಈ ಸಮಸ್ಯೆಗಳು ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಯಾವುದೇ ಬೆಳವಣಿಗೆಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ.
SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…
ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…
ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್ಪಿಜಿ ಪೂರೈಕೆ ಪುನರಾರಂಭ ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್ಪಿಜಿ ಪೂರೈಕೆ…
ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…
ನಾಳೆ SSLC ಫಲಿತಾಂಶ ಪ್ರಕಟ ಬೆಂಗಳೂರು: ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…
ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್ ಢಿಕ್ಕಿ - ಬಾಲಕಿ ಸಾವು ಕಾಪು : ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ…