Featured

RSS ಗೆ ನಿರ್ಬಂಧ ವಿವಾದ : ಹೈಕೋರ್ಟ್ ಆದೇಶ ಹಿನ್ನೆಲೆ ಸರ್ಕಾರದಿಂದ ಮೇಲ್ಮನವಿ: ಪ್ರಿಯಾಂಕ್ ಖರ್ಗೆ – vishwanews24

ಆರ್‌ಎಸ್‌ಸ್‌ಗೆ ನಿರ್ಬಂಧ ವಿವಾದ : ಹೈಕೋರ್ಟ್ ಆದೇಶ ಹಿನ್ನೆಲೆ ಸರ್ಕಾರದಿಂದ ಮೇಲ್ಮನವಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸರ್ಕಾರಿ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ ಹಾಕಿರುವ ಸರ್ಕಾರದ ನಡೆಗೆ ಹೈಕೋರ್ಟ್ ಅಂಕುಶ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾವು ಮೇಲ್ಮನವಿ ಹೋಗುತ್ತೇವೆ. ನಾವು ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕೊಡುವುದಿಲ್ಲ ಎಂದು ಹೇಳಿಲ್ಲ. ಬದಲಾಗಿ, ಅನುಮತಿ ಪಡೆಯಿರಿ ಅಂತಿದ್ದೀವಿ ಎಂದು ಸ್ಪಷ್ಟಪಡಿಸಿದರು.

ಈವರೆಗೆ ಆರ್ ಎಸ್ ಎಸ್ ಏನೇನು ಬೈದಿದ್ದಾರೆ‌‌ ಗೊತ್ತಿದೆ. ಬಿಜೆಪಿ ಲೀಡರ್ ಗಳು ಏನೇನು ಬೈತಿದ್ದಾರೆ, ವೈಯಕ್ತಿಕ ವಿಚಾರಕ್ಕೆ ಏನೆಲ್ಲಾ ಹೇಳಿಕೆ ನೀಡಿದ್ದಾರೆ ಎಂಬುವುದನ್ನು ನೀವೇ ನೋಡಿದ್ದೀರಿ. ಇಷ್ಟೆಲ್ಲ ಆದಮೇಲೂ ಆರ್ ಎಸ್ ಎಸ್ ನವರು ಖಂಡಿಸಿದ್ದಾರಾ? ಎಂದು ಪ್ರಶ್ನಿಸಿದರು.

ಯಾವುದೇ ಖಾಸಗಿ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಕೇಳಲಿ, ಸೂಕ್ತ ಅನಿಸಿದರೆ ಸರ್ಕಾರ ಅನುಮತಿ ನೀಡುತ್ತದೆ. ಧಾರವಾಡ ಕೋರ್ಟ್ ನಲ್ಲಿ ಇರುವ ಬಗ್ಗೆ ಎ.ಜಿ ಯವರಿಗೆ ಮಾಹಿತಿ ಇರಲಿಲ್ಲ. ಸ್ಥಳೀಯ ಅಧಿಕಾರಿಗಳ ಲೋಪ ಇದೆ. ಎ.ಜಿಯವರಿಗೆ ಮಾಹಿತಿ ಇರಲಿಲ್ಲ ಅಂತ ಸಿಎಂಗೂ ನಮಗೂ ತಿಳಿಸಿದ್ದಾರೆ. ಇದು ಮಧ್ಯಂತರ ತಡೆಯಾಜ್ಞೆ ಅಷ್ಟೇ . ಆದರೆ ಬಿಜೆಪಿಯವರು ಈಗಾಗಲೇ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಅವರ ಸಂಭ್ರಮಾಚರಣೆ ಪ್ರಕಾರ ಹತ್ತು ಬಾರಿ ಪಥ ಸಂಚಲನ ಮಾಡಬೇಕಾಗಿತ್ತಲ್ವಾ? ನಾಲ್ಕೈದು ಬಾರಿ ಪಥ ಸಂಚಲನೆ ಮಾಡಬೇಕಾಗಿತ್ತಲ್ವಾ? ಇನ್ನೂ ಯಾಕೆ ಚಿತ್ತಾಪುರದಲ್ಲಿ ಪಥ ಸಂಚಲನ ಆಗಿಲ್ಲ? ನಿನ್ನೆ ನಡೆದ ಶಾಂತಿ ಸಭೆಯ ಎಲ್ಲ ಮಾಹಿತಿ ಆಡಿಯೋ ವೀಡಿಯೋ ರೆಕಾರ್ಡ್ ಆಗಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ನ್ಯಾಯಾಲಯ ನಿರ್ಧಾರ ಮಾಡಲಿ ಎಂದರು.

ಮೊದಲು ಬಿಜೆಪಿಯವರು ಕ್ಷಮೆ ಕೇಳಲಿ ನನಗೆ ವೈಯಕ್ತಿಕ ಟೀಕೆ ಬೆದರಿಕೆ ಹಾಕಿದ್ದಕ್ಕೆ. ಬಿಜೆಪಿಯವರು ಒಬ್ಬರಾದರೂ ಕ್ಷಮೆ ಕೇಳಿದ್ದಾರಾ? ಬಿಜೆಪಿ ವಿಪಕ್ಷ ನಾಯಕರು ನನಗೆ ನಾಯಿ ಅಂದುಬಿಟ್ಟು. ನಮ್ಮ ಕ್ಷೇತ್ರಕ್ಕೇ ಬರ್ತಾರೆ ನಾವು ಸನ್ಮಾನ ಮಾಡಬೇಕಾ? ಬೆಳೆ ಹಾನಿ ಆದಾಗ ಇವರು ಒಮ್ಮೆಯೂ ಬರಲಿಲ್ಲ? ಯಾಕೆ ಬಂದಿಲ್ಲ ಆರ್ ಎಸ್ ಎಸ್ ಪಥ ಸಂಚಲನಕ್ಕೆ? ಕಾನೂನನ್ನು ಅವರಿಗೆ ಬೇಕಾದಂತೆ ಅರ್ಥೈಸುವುದು ದಿನ ನಿತ್ಯದ ರೂಢಿ ಆಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಕಾನೂನು ಅನುಮತಿ ಪಡೆಯಬೇಕಾಗಿರುವುದು ಯಾರ ಕೆಲಸ? ಕಾನೂನು ಕಾಪಾಡಬೇಕಾಗಿರುವುದು ಸರ್ಕಾರದ ಕೆಲಸ? ನಾನು ಯಾವತ್ತೂ ಆರ್ ಎಸ್ ಎಸ್‌ ಬ್ಯಾನ್ ಮಾಡಿ ಅಂತ ಹೇಳಿಲ್ಲ. ಬೆಂಗಳೂರು ಆದೇಶವೇ ಇಡೀ ರಾಜ್ಯ ವ್ಯಾಪ್ತಿಯಲ್ಲಿ ಬಂದಿದೆ ಎಂದರು.

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

34 minutes ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

40 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

47 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

1 hour ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago