Featured

RSS ಗೆ ನಿರ್ಬಂಧ ವಿವಾದ : ಹೈಕೋರ್ಟ್ ಆದೇಶ ಹಿನ್ನೆಲೆ ಸರ್ಕಾರದಿಂದ ಮೇಲ್ಮನವಿ: ಪ್ರಿಯಾಂಕ್ ಖರ್ಗೆ – vishwanews24

ಆರ್‌ಎಸ್‌ಸ್‌ಗೆ ನಿರ್ಬಂಧ ವಿವಾದ : ಹೈಕೋರ್ಟ್ ಆದೇಶ ಹಿನ್ನೆಲೆ ಸರ್ಕಾರದಿಂದ ಮೇಲ್ಮನವಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸರ್ಕಾರಿ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ ಹಾಕಿರುವ ಸರ್ಕಾರದ ನಡೆಗೆ ಹೈಕೋರ್ಟ್ ಅಂಕುಶ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾವು ಮೇಲ್ಮನವಿ ಹೋಗುತ್ತೇವೆ. ನಾವು ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕೊಡುವುದಿಲ್ಲ ಎಂದು ಹೇಳಿಲ್ಲ. ಬದಲಾಗಿ, ಅನುಮತಿ ಪಡೆಯಿರಿ ಅಂತಿದ್ದೀವಿ ಎಂದು ಸ್ಪಷ್ಟಪಡಿಸಿದರು.

ಈವರೆಗೆ ಆರ್ ಎಸ್ ಎಸ್ ಏನೇನು ಬೈದಿದ್ದಾರೆ‌‌ ಗೊತ್ತಿದೆ. ಬಿಜೆಪಿ ಲೀಡರ್ ಗಳು ಏನೇನು ಬೈತಿದ್ದಾರೆ, ವೈಯಕ್ತಿಕ ವಿಚಾರಕ್ಕೆ ಏನೆಲ್ಲಾ ಹೇಳಿಕೆ ನೀಡಿದ್ದಾರೆ ಎಂಬುವುದನ್ನು ನೀವೇ ನೋಡಿದ್ದೀರಿ. ಇಷ್ಟೆಲ್ಲ ಆದಮೇಲೂ ಆರ್ ಎಸ್ ಎಸ್ ನವರು ಖಂಡಿಸಿದ್ದಾರಾ? ಎಂದು ಪ್ರಶ್ನಿಸಿದರು.

ಯಾವುದೇ ಖಾಸಗಿ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಕೇಳಲಿ, ಸೂಕ್ತ ಅನಿಸಿದರೆ ಸರ್ಕಾರ ಅನುಮತಿ ನೀಡುತ್ತದೆ. ಧಾರವಾಡ ಕೋರ್ಟ್ ನಲ್ಲಿ ಇರುವ ಬಗ್ಗೆ ಎ.ಜಿ ಯವರಿಗೆ ಮಾಹಿತಿ ಇರಲಿಲ್ಲ. ಸ್ಥಳೀಯ ಅಧಿಕಾರಿಗಳ ಲೋಪ ಇದೆ. ಎ.ಜಿಯವರಿಗೆ ಮಾಹಿತಿ ಇರಲಿಲ್ಲ ಅಂತ ಸಿಎಂಗೂ ನಮಗೂ ತಿಳಿಸಿದ್ದಾರೆ. ಇದು ಮಧ್ಯಂತರ ತಡೆಯಾಜ್ಞೆ ಅಷ್ಟೇ . ಆದರೆ ಬಿಜೆಪಿಯವರು ಈಗಾಗಲೇ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಅವರ ಸಂಭ್ರಮಾಚರಣೆ ಪ್ರಕಾರ ಹತ್ತು ಬಾರಿ ಪಥ ಸಂಚಲನ ಮಾಡಬೇಕಾಗಿತ್ತಲ್ವಾ? ನಾಲ್ಕೈದು ಬಾರಿ ಪಥ ಸಂಚಲನೆ ಮಾಡಬೇಕಾಗಿತ್ತಲ್ವಾ? ಇನ್ನೂ ಯಾಕೆ ಚಿತ್ತಾಪುರದಲ್ಲಿ ಪಥ ಸಂಚಲನ ಆಗಿಲ್ಲ? ನಿನ್ನೆ ನಡೆದ ಶಾಂತಿ ಸಭೆಯ ಎಲ್ಲ ಮಾಹಿತಿ ಆಡಿಯೋ ವೀಡಿಯೋ ರೆಕಾರ್ಡ್ ಆಗಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ನ್ಯಾಯಾಲಯ ನಿರ್ಧಾರ ಮಾಡಲಿ ಎಂದರು.

ಮೊದಲು ಬಿಜೆಪಿಯವರು ಕ್ಷಮೆ ಕೇಳಲಿ ನನಗೆ ವೈಯಕ್ತಿಕ ಟೀಕೆ ಬೆದರಿಕೆ ಹಾಕಿದ್ದಕ್ಕೆ. ಬಿಜೆಪಿಯವರು ಒಬ್ಬರಾದರೂ ಕ್ಷಮೆ ಕೇಳಿದ್ದಾರಾ? ಬಿಜೆಪಿ ವಿಪಕ್ಷ ನಾಯಕರು ನನಗೆ ನಾಯಿ ಅಂದುಬಿಟ್ಟು. ನಮ್ಮ ಕ್ಷೇತ್ರಕ್ಕೇ ಬರ್ತಾರೆ ನಾವು ಸನ್ಮಾನ ಮಾಡಬೇಕಾ? ಬೆಳೆ ಹಾನಿ ಆದಾಗ ಇವರು ಒಮ್ಮೆಯೂ ಬರಲಿಲ್ಲ? ಯಾಕೆ ಬಂದಿಲ್ಲ ಆರ್ ಎಸ್ ಎಸ್ ಪಥ ಸಂಚಲನಕ್ಕೆ? ಕಾನೂನನ್ನು ಅವರಿಗೆ ಬೇಕಾದಂತೆ ಅರ್ಥೈಸುವುದು ದಿನ ನಿತ್ಯದ ರೂಢಿ ಆಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಕಾನೂನು ಅನುಮತಿ ಪಡೆಯಬೇಕಾಗಿರುವುದು ಯಾರ ಕೆಲಸ? ಕಾನೂನು ಕಾಪಾಡಬೇಕಾಗಿರುವುದು ಸರ್ಕಾರದ ಕೆಲಸ? ನಾನು ಯಾವತ್ತೂ ಆರ್ ಎಸ್ ಎಸ್‌ ಬ್ಯಾನ್ ಮಾಡಿ ಅಂತ ಹೇಳಿಲ್ಲ. ಬೆಂಗಳೂರು ಆದೇಶವೇ ಇಡೀ ರಾಜ್ಯ ವ್ಯಾಪ್ತಿಯಲ್ಲಿ ಬಂದಿದೆ ಎಂದರು.

Vishwa News 24

Recent Posts

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

3 days ago

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ – 2026 -vishwanews24

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…

3 days ago

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ -vishwanews24

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…

3 days ago

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ -vishwanews24

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…

3 days ago

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ -vishwanews24

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…

3 days ago