ಅಗ್ನಿಪಥ್ ಯೋಜನೆ ಇಷ್ಟವಿಲ್ಲದಿದ್ದರೆ ಸೇನೆಗೆ ಬರಬೇಡಿ , ಯಾರು ನಿಮ್ಮನ್ನು ಬಲವಂತಪಡಿಸುವುದಿಲ್ಲ : ವಿ.ಕೆ.ಸಿಂಗ್ – Vishwanews24
ಅಗ್ನಿಪಥ್ ಯೋಜನೆ ಇಷ್ಟವಿಲ್ಲದಿದ್ದರೆ ಸೇನೆಗೆ ಬರಬೇಡಿ , ಯಾರು ನಿಮ್ಮನ್ನು ಬಲವಂತಪಡಿಸುವುದಿಲ್ಲ : ವಿ.ಕೆ.ಸಿಂಗ್
ನಾಗ್ಪುರ : ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ರೂಪಿಸಿರುವ ಹೊಸ ನೀತಿಯನ್ನು ಇಷ್ಟಪಡದಿದ್ದರೆ ಅವರು ಸೈನೆಯನ್ನು ಆರಿಸಿಕೊಳ್ಳಬಾರದು ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತೀಯ ಸೇನೆಯು ಸೈನಿಕರನ್ನು ಬಲವಂತಪಡಿಸುವುದಿಲ್ಲ ಮತ್ತು ಸೇನೆಗೆ ಸೇರಬಯಸುವ ಆಕಾಂಕ್ಷಿಗಳು ತಮ್ಮ ಸ್ವಂತ ಇಚ್ಛೆಯಿಂದ ಸೇರಬೇಕು ಎಂದರು.
ಇನ್ನು ಯಾವುದೇ ಆಕಾಂಕ್ಷಿಗಳು ಸೇರಲು ಬಯಸಿದರೆ, ಅವರು ತಮ್ಮ ಇಚ್ಛೆಯಂತೆ ಸೇರಬಹುದು, ನಾವು ಸೈನಿಕರನ್ನು ಬಲವಂತಪಡಿಸುವುದಿಲ್ಲ. ಆದರೆ ನಿಮಗೆ ಈ ನೇಮಕಾತಿ ಯೋಜನೆ (‘ಅಗ್ನಿಪಥ್’) ಇಷ್ಟವಾಗದಿದ್ದರೆ ಬರಬೇಡಿ, ಯಾರು ನಿಮ್ಮನ್ನು ಬರಲು ಒತ್ತಾಯ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
