ಇವಿಎಮ್ ಸರಿ ಇಲ್ಲ ಎಂದು ತಕರಾರು ಮಾಡಿದ ಮತದಾರ, ಚಾಲೆಂಜಿಗ್ ವೋಟ್ ಮಾಡಿ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು, ಬಂಧನ ಸಾಧ್ಯತೆ.
ಚಾಲೆಂಜಿಗ್ ವೋಟ್ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು.
ಪಡುಬಿದ್ರಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಒಂದು ಹಂತದ ಚುನಾವಣೆ ನಡೆದಿದ್ದು ಆ ಮೂಲಕ ಕಾಪು ವಿಧಾನಸಭ ಕ್ಷೇತ್ರದ ಎಲ್ಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಚಾಲೆಂಗ್ ವೋಟ್ ಪ್ರಕರಣದಡಿಯಲ್ಲಿ ವೀರೇಂದ್ರ ಲ್ಯಾನ್ಸಿ ಡಿಸೋಜ ಎಂಬವರ ಮೇಲೆ ದೂರು ದಾಖಲಾಗಿದೆ.
ಮತದಾನ ಮಾಡಿ ಹೊರ ಬಂದು ಪೋಲಿಗ್ ಏಜೆಂಟ್ ಬಳಿ ನಾನು ಹಾಕಿರುವ ಮತ ಬೇರೆ ಅಭ್ಯರ್ಥಿ ಪಾಲಾಗಿದೆ ಎಂದು ತಕರಾರು ಮಾಡಿದ ಹಿನ್ನೆಲೆಯಲ್ಲಿ ಚಾಲೆಂಜ್ ವೋಟ್ ಮಾಡಲು ಅವಕಾಶ ನೀಡಲಾಯಿತು.
ಈ ಸಂಧರ್ಭದಲ್ಲಿ ಮರು ಮತದಾನಕ್ಕೆ ಅವಕಾಶ ನೀಡಿದ ಸಮಯದಲ್ಲಿ ಇ.ವಿ.ಎಮ್ ಮೆಷಿನ್ ಸರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಆರೋಪ ಮಾಡಿದ ವ್ಯಕ್ತಿಯ ಮೇಲೆ RP act sect 49 Ma ಅಡಿಯಲ್ಲಿ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
