ಇಸ್ಲಾಮಿಕ್ ಭಯೋತ್ಪಾದಕರ ನಾಡದ ಪಾಕಿಸ್ತಾನದಲ್ಲಿ ಇನ್ನು ಮೊಳಗಲಿವೆ ಜೈ ಶ್ರೀರಾಮ್ ಘೋಷಣೆ!!
ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಪ್ರಭು ಶ್ರೀರಾಮನ ಕುರಿತಂತೆ ಅಲ್ಲಿರುವ ಹಿಂದುಗಳ ಪವಿತ್ರ ಕಾಟಾಸ್ರಾಜ್ ದೇವಸ್ಥಾನದ ಕುರಿತು ಮಹತ್ವದ ತೀರ್ಪನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಕೊಟ್ಟಿದೆ.
ಆ ದೇವಸ್ಥಾನಕ್ಕೆ ಸಂಭಂದಪಟ್ಟ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿರುವ ಪಾಕಿಸ್ತಾನದ ಹೈಕೋರ್ಟ್, ಶೀಘ್ರದಲ್ಲಿಯೇ ಕಾಟಾಸ್ರಾಜ್ ದೇವಸ್ಥಾನದಲ್ಲಿ ಪ್ರಭು ಶ್ರೀರಾಮ ಚಂದ್ರನ ಮತ್ತು ರಾಮನ ಭಕ್ತ ಭಜರಂಗಿಯ ವಿಗ್ರಹಗಳನ್ನು ಪ್ರತಿಸ್ಠಾಪಿಸುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಶಕೀಬ್ ನಿಸಾರ್ ಅವರು ಆದೇಶವನ್ನು ಹೊರಡಿಸಿದ್ದಾರೆ.
ಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.
ಭಾರತ ವಿಭಜನೆಗಿಂತ ಮೊದಲು 428 ಹಿಂದೂ ದೇವಾಲಯಗಳು ಆ ಪ್ರದೇಶದಲ್ಲಿ ಇದ್ದವು. ಆದರೆ ಇಂದು ಕೇವಲ 26 ದೇವಾಲಯಗಳು ಮಾತ್ರ ಉಳಿದುಕೊಂಡಿವೆ.
ಪಾಕಿಸ್ತಾನದಲ್ಲಿ ಈಗ ಉಳಿದ ದೇವಾಲಯಗಳ ಪೈಕಿ ಕಾಟಾಸ್ರಾಜ್ ದೇವಾಲಯ ಪ್ರಸಿದ್ಧ ದೆವಾಲಯ. ಜಗತ್ತಿನಲ್ಲಿರೋ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಇದು ಎರಡನೇ ಪುಣ್ಯ ತೀರ್ಥ ಕ್ಷೇತ್ರ. ಪಾಕಿಸ್ತಾನದ ನೆಲದಲ್ಲಿ ಬೇರೂರಿರೋ ಹಿಂದೂ ತೀರ್ಥಕ್ಷೆತ್ರದ ಜೀರ್ಣೋದ್ದಾರಕ್ಕೆ, ಸ್ವತಃ ಪಾಕಿಸ್ತಾನಾವೇ ಮುಂದಾಗಿದೆ. ಇದಕ್ಕೆ ಕಾರಣ ಭಾರತದ ಹಿರಿಯ ರಾಜಕೀಯ ಮುತ್ಸದ್ದಿ. ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ. ಇದರ ಹಿಂದೆ ಎಲ್.ಕೆ. ಅಡ್ವಾಣಿಯವರ ಪರಿಶ್ರಮವಿದೆ.
ಶತೃ ರಾಷ್ಟ್ರದಲ್ಲಿ ಹಿಂದೂ ದೇವಾಲಯ ತಲೆ ಎತ್ತಿ ನಿಂತದ್ದು ಖುಷಿಯ ವಿಚಾರ. ಹಾಗೂ ವೈರಿ ರಾಷ್ಟ್ರವೇ ದೇವಾಲಯಗಳ ಜೀರ್ಣೋದ್ಧಾರಕ್ಕೆ ನಿಂತಿರೋದು ಸಮಾಧಾನಕರ ಸಂಗತಿ. ಈಗ ಪಾಕಿಸ್ತಾನದ ಸುಪ್ರೀಂಕೋರ್ಟ್ ಕಾಟಾಸರಾಜ್ ದೇವಾಲಯದಲ್ಲಿ ಪ್ರಭು ಶ್ರೀರಾಮನ ಮತ್ತು ರಾಮನ ಭಕ್ತ ಹನುಮಾನನ ವಿಗ್ರಹ ಪ್ರತಿಷ್ಠಾಪನೆಗೆ ಆದೇಶ ಕೊಟ್ಟಿರುವುದು, ಹಿಂದುಗಳು ಹೆಮ್ಮೆ ಪಡಬೇಕಾದ ವಿಷಯ.
