ಈಗ ಮೋದಿ ಇದ್ದಾರೆ , ಮುಂದೆ ಯೋಗಿ ಬರ್ತಾರೆ ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ : ಯತ್ನಾಳ್‌ – vishwanews24

Featured, ರಾಜ್ಯ ನ್ಯೂಸ್

ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವೆ : ಬಸನಗೌಡ ಪಾಟೀಲ್ ಯತ್ನಾಳ್

ದಾವಣಗೆರೆ: ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರ್ತಾರೆ. ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಪಕ್ಷದಿಂದ ಉಚ್ಚಾಟನೆ ಆದಾಗ ಅಮಿತ್ ಶಾ ಮರಳಿ ಬಿಜೆಪಿ ಕರೆತಂದಿದ್ದರು. ಯಡಿಯೂರಪ್ಪ ಅಲ್ಲ ನನ್ನ ಹಿರಿತನ ನೋಡಿದ್ರೆ ನಾನೇ ಸಿಎಂ ಆಗಬೇಕು. ಆದ್ರೆ ನನಗೆ ಮಂತ್ರಿ ಸಹ ಮಾಡಲಿಲ್ಲ ಯಡಿಯೂರಪ್ಪ. ಆವಾಗಿಂದನೇ ತುಳಿಯುತ್ತಾ ಬಂದಿದ್ದಾರೆ, ಕೊನೆಗೆ ಮದ್ದೂರಿನಿಂದ ಎದ್ದೇ. ರಾಜ್ಯದಲ್ಲಿ ಪಕ್ಷದಿಂದ ಉಚ್ಚಾಟನೆ ಆದವರೆಲ್ಲಾ ಸಿಎಂ ಆಗಿದ್ದಾರೆ. ನಾನು ಯಾಕೆ ಆಗಬಾರದು ಅಂತ ಪ್ರಶ್ನಿಸಿದರು.

ಬೆಂಗಳೂರು :ಅಪ್ರಾಪ್ತ ಬಾಲಕಿ ಸಹಿತ ಮಹಿಳೆಯರ ಮೇಲೆ ಅತ್ಯಾಚಾರ ಆರೋಪ; ಯೋಗ ಗುರು ಬಂಧನ – vishwanews24

ರಾಜ್ಯದಲ್ಲಿ ಡಿಜೆ ಪರವಾನಿಗೆಯಿಲ್ಲ. ಆದ್ರೆ ನಮ್ಮ ವಿಜಯಪುರದಲ್ಲಿ ಮಾತ್ರ ಡಿಜೆ ಪರವಾನಿಗೆ ಇದೆ. ನಾಳೆ ನಾನು ಸಿಎಂ ಆಗುವಾಗ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವೆ. ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನೇ ಮುಂದೆ ಬಿಡುತ್ತೇನೆ. ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರಲಿದ್ದಾರೆ. ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡುತ್ತಾರೆ. ಇದಕ್ಕೆ ಸುಧಾರಿಸಿಕೊಳ್ಳಬೇಕು ಅಂದ್ರೆ 2028ರ ವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲಾದ್ರೆ ಇಷ್ಟರಲ್ಲಿ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್‌ಗೆ ಸಿಎಂ ಆಗೋಕೆ ಬಿಡಲ್ಲ. ಹಿಂದೂಗಳು ಜನಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ 3ನೇ ಮಕ್ಕಳಾದ್ರೆ ಎಲ್ಲಾ ಉಚಿತ ಸೌಲಭ್ಯ. ಮದ್ವೆಗೆ 5 ಲಕ್ಷ ರೂಪಾಯಿ ಸಹ ಉಚಿತ ಕೊಡುವೆ. ಸಾಬರು 25 ಅಡಿತಾರೆ ನಾವು ಕಟ್ಟಿದ ತೆರಿಗೆಯನ್ನೇ ಅವರೇ ತಿಂದು ತೇಗುತ್ತಾರೆ ಅಂತ ಲೇವಡಿ ಮಾಡಿದರು.

ಸೆ. 22 ರಿಂದ ಅ.2 ರ ವರೆಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದಲ್ಲಿ ಅದ್ದೂರಿ ದಸರಾ ಸಂಭ್ರಮ – vishwanews24

 

Leave a Reply