ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸೂ ಹಾಕಲ್ಲ, ರಾಜೀನಾಮೆಯೂ ಕೊಡಿಸಲ್ಲ : ಗೃಹ ಸಚಿವ ಅರಗ ಜ್ಞಾನೇಂದ್ರ – Vishwanews24
ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸೂ ಹಾಕಲ್ಲ, ರಾಜೀನಾಮೆಯೂ ಕೊಡಿಸಲ್ಲ : ಗೃಹ ಸಚಿವ ಅರಗ ಜ್ಞಾನೇಂದ್ರ – Vishwanews24
ಬೆಂಗಳೂರು : ಸಚಿವ ಕೆ.ಎಸ್.ಈಶ್ವರಪ್ಪ ಅವರ ಕೇಸರಿ ಧ್ವಜದ ಕುರಿತ ವಿವಾದಾತ್ಮಕ ಹೇಳಿಕೆ ಖಂಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ. ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ಕೊಡುವಂತಹ ಏನು ತಪ್ಪನ್ನು ಮಾಡಿದ್ದಾರೆ. ಅವರ ವಿರುದ್ಧ ಯಾಕೇ ದೇಶದ್ರೋಹ ಪ್ರಕರಣ ಹಾಕಬೇಕು? ಕಾಂಗ್ರೆಸ್ ನವರು ಸದನದ ಒಳಗೆ ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದಾರೆ. ದೇಶದ್ರೋಹದ ಕೇಸ್ ಕಾಂಗ್ರೆಸ್ ವಿರುದ್ಧವೇ ಹಾಕಬೇಕು. ಕಾಂಗ್ರೆಸ್ ಏನು ಮಾಡಿದರೂ ನಾವಂತೂ ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸೂ ಹಾಕಲ್ಲ, ರಾಜೀನಾಮೆಯೂ ಕೊಡಿಸಲ್ಲ ಎಂದು ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜು – ಹಿಜಬ್ ವಿವಾದ : ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ – Vishwanews24
