ಈ ಸರ್ಕಾರದಲ್ಲಿ ನಾನು ಮಂತ್ರಿ ಆಗಲ್ಲ : ಕಾಂಗ್ರೇಸ್ ಗೆ ರೋಷನ್ ಬೇಗ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಈ ಸರ್ಕಾರದಲ್ಲಿ ನಾನು ಮಂತ್ರಿ ಆಗಲ್ಲ ಎಂದು ಮಾಜಿ ಸಚಿವ ರೋಷನ್ ಬೇಗ್ ಆಕ್ರೋಶ ಹೊರಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತಿದ್ರಲ್ಲಾ ಈಗಲಾದರೂ ಇಳಿದು ಬಾ ಇಳಿದು ಬಾ ಎಂದು ಸಿದ್ದರಾಮಯ್ಯ ರೀತಿಯಲ್ಲಿ ವ್ಯಂಗ್ಯವಾಡಿದರು, ಸಿದ್ದರಾಮಯ್ಯಗೆ ನಂದೇ ನಡಿಬೇಕು. ನಾನೇ ಹೇಳಿದ ಹಾಗೇ ನಡಿಬೇಕು ಅನ್ನೋ ಅಹಂ ಭಾವನೆ ಇದೆ. ನಾನೇ ಸಿಎಂ ನಾನೇ ಸಿಎಂ ಅಂತಾ ಹೇಳ್ತಾ ಇದ್ರಿ 2018ರಲ್ಲಿ ಏನು ಫಲಿತಾಂಶ ಬಂತೋ ಈಗಲೂ ಅದೇ ಆಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶಗೊಂಡರು.

ನಾನೇ ಹೇಳಿದ ಹಾಗೇ ಎಲ್ಲಾ ಕೇಳಬೇಕು ಅನ್ನೋ ಇಗೋ ಇದೆ. ಅವರಪ್ಪರಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಹೇಳಿ ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ರಲ್ಲಾ ಎಂದು ಇದೇ ವೇಳೆ ಟೀಕೆ ಮಾಡಿದರು.

ನಾನು ಯಾವುದೇ ನೋಟೀಸ್ ಗೂ ಉತ್ತರ ಕೊಡಲ್ಲ, ಪಕ್ಷ ಬಿಡುವುದು ಇಲ್ಲ, ಬೇರೆ ಪಕ್ಷ ಸೇರುವುದೂ ಇಲ್ಲ, ನನ್ನ ಸ್ನೇಹಿತ ರಾಮಲಿಂಗಾ ರೆಡ್ಡಿ ಜೊತೆ ನಾನಿದ್ದೇನೆ. ರಾಹುಲ್ ಗಾಂಧಿ ಅವರಲ್ಲಿ ಕ್ಷಮೆ ಕೇಳುತ್ತೇನೆ. ರಾಜ್ಯದ ಇಂತಹ ಕಾಂಗ್ರೆಸ್ ಮುಖಂಡರೆಲ್ಲಾ ಅಲ್ಲಿ ಹೋಗಿ ರಾಹುಲ್ ಗಾಂಧಿಗೆ ಮಿಸ್ ಗೈಡ್ ಮಾಡ್ತಿದ್ದಾರೆ. ದಿನೇಶ ಗುಂಡೂರಾವ್ ಅಪ್ರಬುದ್ಧ ಹಾಗೂ ವಿಫಲ ಅಧ್ಯಕ್ಷ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು