ಉಡುಪಿ : ಅಖಂಡ ಭಾರತ ಸಂಕಲ್ಪ ದಿನಾಚರಣೆ : ಆ 14ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ – vishwanews24
ಅಖಂಡ ಭಾರತ ಸಂಕಲ್ಪ ದಿನಾಚರಣೆ : ಆ 14ರಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ
ಉಡುಪಿ : ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಉಡುಪಿ ತಾಲೂಕಿನ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಆಗಸ್ಟ್ 14ರಂದು ಸಂಜೆ 7:00ಗೆ ಜೋಡುಕಟ್ಟೆಯಿಂದ ಆರಂಭಗೊಂಡು ಜಟಕ ಸ್ಟ್ಯಾಂಡ್ ವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ

ಉಡುಪಿಯ ದಂತ ವೈದ್ಯರು ಡಾಕ್ಟರ್ ವಿಜೇಂದ್ರ ವಸಂತ ಅಧ್ಯಕ್ಷತೆ ವಹಿಸಲಿದ್ದು. ಆರ್.ಎಸ್.ಎಸ್ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಮಂಗಳೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂದೂ ಜಾಗರಣ ವೇದಿಕೆ ಪ್ರಾಂತ ನಿಧಿ ಪ್ರಮುಖ ಮಹೇಶ್ ಬೈಲೂರು, ಜಿಲ್ಲಾ ಸಂಯೋಜಕ ಶಂಕರ್ ಕೋಟ ಜಿಲ್ಲಾ ಸಹಸಂಯೋಜಕರು ಉಮೇಶ್ ಸೂಡ ಮತ್ತು ರಾಜೇಶ್ ಉಚ್ಚಿಲ.ಉಡುಪಿ ತಾಲೂಕು ಸಂಯೋಜಕ ನಿಖಿಲ್ ಮಂಚಿ. ತಾಲೂಕು ಸಹಸಯೋಜಕರು ಪ್ರಶಾಂತ್ ನಿಟ್ಟೂರು ಸುದೀಪ್ ಕಡಿಯಾಳಿ ಉಪಸ್ಥಿತರಿರಲಿದ್ದರೆ. ಎಂದು ಸಹಸಂಯೋಜಕ್ ಉಮೇಶ್ ಶೆಟ್ಟಿ ಪಕ್ಕಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
