ಉಡುಪಿ: ಕಾಂಗ್ರೆಸ್ಸಿಗರು ಜನರ ರೇಷನ್ ಕಾರ್ಡ್ ರದ್ದು ಮಾಡುತ್ತಿರುವ ಬಗ್ಗೆ ಪ್ರತಿಭಟನೆ ಮಾಡಲಿ : ಯಶ್ ಪಾಲ್ ಸುವರ್ಣ – vishwanews24

Featured, ಉಡುಪಿ

ಇಂದ್ರಾಳಿ ರೈಲ್ವೆ, ಬ್ರಿಡ್ಜ್ ಬಗ್ಗೆ ಪ್ರತಿಭಟನೆ ನಡೆಸುವುದು ಕೇವಲ ಪ್ರಚಾರದ ಉದ್ದೇಶಕ್ಕಾಗಿ ಮಾತ್ರ

ರಾಜ್ಯ ಸರ್ಕಾರ ಜನರ ರೇಷನ್ ಕಾರ್ಡ್ ರದ್ದು ಮಾಡುತ್ತಿರುವ ಬಗ್ಗೆ ಪ್ರತಿಭಟನೆ ಮಾಡಲಿ :ಯಶ್ ಪಾಲ್ ಸುವರ್ಣ

ಉಡುಪಿ : ಕಾಂಗ್ರೆಸ್ ನವರು ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ, ರಾಜ್ಯ ಸರ್ಕಾರ ಜನರ ರೇಷನ್ ಕಾರ್ಡ್ ರದ್ದು ಮಾಡುತ್ತಿರುವ ಬಗ್ಗೆ ಪುತಿಭಟನೆ ಮಾಡಲಿ.ಅದು ಬಿಟ್ಟು ಕೇವಲ ಇಂದ್ರಾಳಿ ರೈಲ್ವೆ, ಬ್ರಿಡ್ಜ್ ಬಗ್ಗೆ ಪುತಿಭಟನೆ ನಡೆಸುವುದು ಕೇವಲ ಪುಚಾರದ ಉದ್ದೇಶಕ್ಕಾಗಿ ಮಾತ್ರ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಉಡುಪಿಯ ಇಂದ್ರಾಳಿ ರೈಲ್ವೆ, ಬ್ರಿಡ್ಜ್ ಕಾಮಗಾರಿ ವೀಕ್ಷಿಸಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಇವತ್ತು ಕಾಂಗ್ರೆಸ್ಸಿಗರು ಇಂದ್ರಾಳಿ ರೈಲ್ವೆ, ಬ್ರಿಡ್ಜ್ ವಿಳಂಬ ಕುರಿತು ಪುತಿಭಟನೆ ನಡೆಸುವುದಾಗಿ ಹೇಳಿದ್ದಾರೆ.ಇದು ಕೇವಲ ಪುಚಾರಕ್ಕಾಗಿ ಮಾತ್ರ.ಅವರಿಗೆ ಅಷ್ಟೊಂದು ಜನಪರ ಕಾಳಜಿ ಇದ್ದರೆ ಜನರ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಲಿ, ರೇಷನ್ ಕಾರ್ಡ್ ರದ್ದತಿ ಹಕ್ಕು ಪತ್ರ ವಿತರಣೆ ಮತ್ತು ಅಂಗನವಾಡಿ ನೌಕರರಿಗೆ ಸಂಬಳ ನೀಡುವ ವಿಚಾರದಲ್ಲಿ ಪ್ರತಿಭಟನೆ ನಡೆಸಿದರೆ ಆಗ ಕಾಂಗ್ರೆಸ್ಸಿಗರದ್ದು ನಿಜವಾದ ಜನಪರ ಕಾಳಜಿ ಎಂದು ಒಪ್ಪಿಕೊಳ್ಳಬಹುದು ಎಂದು ಲೇವಡಿ ಮಾಡಿದ್ದಾರೆ.

ಉಡುಪಿ: ಸಮಾನ ಮನಸ್ಕ ಸಂಘಟನೆಗಳಿಂದ ಅ.29ರಂದು ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಪ್ರತಿಭಟನೆ – vishwanews24

Leave a Reply