ಉಡುಪಿ: ಕಾಂಗ್ರೆಸ್ ಪುಢಾರಿಗಳಿಗೆ ಬಡ್ಡಿ ಸಮೇತ ಉತ್ತರ ನೀಡುವ ಬಂದೇ ಬರುತ್ತದೆ : ಬಿ ವೈ ವಿಜಯೇಂದ್ರ – vishwanews24

Featured, ಉಡುಪಿ

ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಉಡುಪಿಯಲ್ಲಿ ಜನಾಕ್ರೋಶ ಯಾತ್ರೆ ..

2028ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ : ಬಿ ವೈ ವಿಜಯೇಂದ್ರ

ಉಡುಪಿ: ಸರ್ಕಾರ ಬಂಡಾಟ, ಗೂಂಡಾಗಿರಿ ಕಾಲ ಹೆಚ್ಚು ದಿನ ನಡೆಯುವುದಿಲ್ಲ. ಕಾಂಗ್ರೆಸ್ ಪುಢಾರಿಗಳಿಗೆ ಬಡ್ಡಿ ಸಮೇತ ಉತ್ತರ ನೀಡುವ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.  ಉಡುಪಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ನುಡಿಗಳನ್ನಾಡಿದರು.

ಕಲ್ಸಂಕದಿಂದ ಆರಂಭಗೊಂಡ ಬಿಜೆಪಿ ಜನಾಕ್ರೋಶ ಯಾತ್ರೆಯು ಕಡಿಯಾಳಿ ಬಿಜೆಪಿ ಸಮ್ಮುಖದಲ್ಲಿ ಬೃಹತ್ ಸಮಾವೇಶದೊಂದಿಗೆ ಮುಕ್ತಾಯವಾಯಿತು.

ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕಕ್ಕೆ ಕರ್ನಾಟಕ ಸರ್ಕಾರ ಚಾಲನೆ – vishwanews24

 

ಸಭೆಯಲ್ಲಿ ಮಾತನಾಡಿದ ಅವರು 2028ರ ಚುನಾವಣೆ, ಅಥವಾ ಯಾವುದೇ ಸಂದರ್ಭದಲ್ಲಿ ಬರಬಹುದಾದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ರಾಜ್ಯದಲ್ಲಿರುವ ಹಿಟ್ಲರ್ ಸರ್ಕಾರ, ಜನವಿರೋಧಿ ಸರ್ಕಾರ ಕೊನೆಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಜನಪ್ರಿಯ ಸರಕಾರ ಅಲ್ಲ, ಜಾಹೀರಾತಿನ ಸರಕಾರ. ಬಡವರ ಪರ ಸರಕಾರ ಅಲ್ಲ, ಭರ ಎಳೆದ ಭ್ರಷ್ಟ ಕಾಂಗ್ರೆಸ್ ಸರಕಾರ. ಅಭಿವೃದ್ಧಿ ಶೂನ್ಯ ಸರಕಾರ. ಅಹಿಂದ ಹೆಸರಿನಲ್ಲಿ ಸಿಎಂ ಆದವರು ಸಿದ್ದರಾಮಯ್ಯ ಆದರೆ ಹಿಂದುಳಿದ ಸಮುದಾಯವನ್ನು ನಿರ್ಲಕ್ಷಿಸಿ ಅಲ್ಪಸಂಖ್ಯಾಕರ ಹಿಂದೆ ಹೋಗುತ್ತಿರುವ ಹಿಂದು ವಿರೋಧಿ ಸರಕಾರ ಇದಾಗಿದೆ ಎಂದರು.

ಸಾಬ್ರು ಇಂದಲೇ ನಾಡಿನ ಸಿಎಂ ಮುಖ್ಯಮಂತ್ರಿ ಅಲ್ಲ, ಅಲ್ಪಸಂಖ್ಯಾಕರಿಗೆ, ಮುಸ್ಲಿಮರ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆ. ಆತ್ಮ ರಕ್ಷಣೆಗಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗಲ್ಲ, ಲಜ್ ಜಿಹಾದ್ ಒಳಗಾಗುವ ಹಿಂದು ಹೆಣ್ಣುಮಕ್ಕಳಿಗೆ ನೀಡಬೇಕು. ಮುಸ್ಲಿಂ ಹೆಣ್ಣುಮಕ್ಕಳಿಗೆ ವಿದೇಶಿ ಶಿಕ್ಷಣಕ್ಕೆ 20-30 ಏರಿಕೆ ಮಾಡಿದ್ದಾರೆ. ಹಾಗಾದರೆ ಬಡ ಹಿಂದುಳಿದ ದಲಿತರು ಹೆಸರಿನಲ್ಲಿ ಅಧಿಕಾರ ಹಿಡಿದು ಅವರಿಗೆ ಮೋಸ ಮಾಡಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದರು.

ಉಡುಪಿ ಕೃಷ್ಣ ಮಠದ ಆವರಣದಲ್ಲಿ ವೆಡ್ಡಿಂಗ್ ಫೋಟೊಶೂಟ್ ನಿಷೇಧ – vishwanews24

 

Leave a Reply