ಉಡುಪಿ: ಕೇಂದ್ರ ಸರಕಾರದ ಬಜೆಟ್ ಉಳ್ಳವರ ಬಜೆಟ್, ನಿರಾಶದಾಯಕ ಬಜೆಟ್ : ಜೆಡಿಎಸ್ -Vishwanews24
ಉಡುಪಿ: ಕೇಂದ್ರ ಸರಕಾರದ ಬಜೆಟ್ ಉಳ್ಳವರ ಬಜೆಟ್, ನಿರಾಶದಾಯಕ ಬಜೆಟ್ : ಜೆಡಿಎಸ್
“ಕೇಂದ್ರ ಸರಕಾರದ ಬಜೆಟ್ ಉಳ್ಳವರ ಬಜೆಟ್,ನಿರಾಶದಾಯಕ ಬಜೆಟ್ ,ದೇಶದ ಅಭಿವೃದ್ಧಿ ಪಥಕ್ಕೆ ದಿಕ್ಸೂಚಿಯಾಗುವಂತಹ ಯಾವುದೇ ಘೋಷಣೆಗಳಿಲ್ಲ.ಶಿಕ್ಷಣ ಬಜೆಟ್ ಶೇ 2.64 ರಿಂದ 2.5 ಕ್ಕೆ ಇಳಿಕೆ,ಅರೋಗ್ಯ ಕ್ಷೇತ್ರದಲ್ಲಿ ಶೇ 2.2 ರಿಂದ 1.98 ಗೆ ಇಳಿಕೆ.
ಸಣ್ಣ ರೈತರ ಸಾಲಮನ್ನಾ ಆಗಬಹುದು ಅನ್ನುವ ನಿರೀಕ್ಷೆ ಸುಳ್ಳಾಯಿತು.ಕೃಷಿ ಕ್ಷೇತ್ರದ ನಿರ್ಲಕ್ಷ್ಯಪೆಟ್ರೋಲ್ ಡೀಸೆಲ್ ಗ್ಯಾಸ್ ನಂತಹ ದಿನಬಳಕೆಯ ವಸ್ತುಗಳ ದರ ಇಳಿಕೆಯಾಗಬಹುದೆನ್ನುವ ನಿರೀಕ್ಷೆ ಸುಳ್ಳಾಗಿದೆ” ಎಂದು ಜೆಡಿಎಸ್ ಜಿಲ್ಲಾಧಯಕ್ಷರಾದ ಯೋಗೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ .
