ಉಡುಪಿ:  ಕೋವೀಡ್‌ ನಿಯಮ ಅನುಸರಿಸಿ ಆ. 30 ಮತ್ತು 31ರಂದು ಸರಳ ಸಂಪ್ರದಾಯಬದ್ಧ ಕೃಷ್ಣಜನ್ಮಾಷ್ಟಮಿ ಆಚರಣೆ -Vishwanews24

Featured, ಉಡುಪಿ

ಉಡುಪಿ:  ಕೋವೀಡ್‌ ನಿಯಮ ಅನುಸರಿಸಿ ಆ. 30 ಮತ್ತು 31ರಂದು ಸರಳ ಸಂಪ್ರದಾಯಬದ್ಧ ಕೃಷ್ಣಜನ್ಮಾಷ್ಟಮಿ ಆಚರಣೆ -Vishwanews24

ಉಡುಪಿ : ಕೃಷ್ಣನ ನೆಲೆವೀಡು ಉಡುಪಿಯಲ್ಲಿ ಕೃಷ್ಣಜನ್ಮಾಷ್ಟಮಿ ಗೆ ಅದರದ್ದೇ ಆದ ವೈಭವ ಸಂಭ್ರಮ ಇದೆ. ಆದರೆ ಈ ಬಾರಿಯೂ ಕೋವಿಡ್‌ ನಿಂದಾಗಿ ಕೃಷ್ಣಜನ್ಮಾಷ್ಟಮಿಯ ವೈಭವ ವಿಜೃಂಭಣೆ ಇಲ್ಲದೆ ಸರಳವಾಗಿ ಅದರೆ ಸಂಪ್ರದಾಯಬದ್ಧವಾಗಿ ನಡೆಯಲಿದೆ.

ಕಳೆದ ವರ್ಷವೂ ಕೋವಿಡ್‌ ನಿಂದಾಗಿ ಕೃಷ್ಣ ಅಷ್ಟಮಿಯನ್ನು ಸರಳವಾಗಿ ಆಚರಿಸಲಾಗಿತ್ತು. ಸಂಕೇತವಾಗಿ ಉತ್ಸವವನ್ನು ನಡೆಸಲಾಗಿತ್ತು.

ಈ ಬಾರಿಯೂ ಆ.30 -31ರಂದು ಕೋವೀಡ್‌ ನಿಯಂತ್ರಣ ನಿಯಮಗಳಡಿ ಸರಳವಾಗಿ ಆಚರಿಸಲು ಪರ್ಯಾಯ ಅದಮಾರುಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಯೋಚಿಸಿದ್ದಾರೆ.

ಮಠದೊಳಗಿನ ಧಾರ್ಮಿಕ ಆಚರಣೆಗಳುಎಂದಿನಂತೆ ಸಂಪ್ರದಾಯ ಬದ್ಧವಾಗಿ ನಡೆಯುತ್ತವೆ. ಅ.30 ರಂದು ಅರ್ಘ್ಯ ಪ್ರದಾನ, ಆ 31 ರಂದು ಅಪರಾಹ್ನ ರಥಬೀದಿಯಲ್ಲಿ ಲೀಲೋತ್ಸವ – ವಿಟ್ಲಪಿಂಡಿ ಉತ್ಸವ ನಡೆಸಲು ಸಿದ್ದತೆಗಳನ್ನು ನಡೆಸಲಾಗುತ್ತದೆ.