ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ -vishwanews24

Featured, ಉಡುಪಿ

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ ಹಾಗೂ ಹೆಚ್ಚುವರಿ ರಶ್‌ ತಡೆಯಲು 16 ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೇ ನಿರ್ಧರಿಸಿದೆ. ಆ. 15ರಂದು ವಿಶೇಷ ರೈಲು ಬುಕ್ಕಿಂಗ್‌ ಸೇವೆ ಶುರುವಾಗಿದೆ.

ರೈಲು ಸಂಖ್ಯೆ 09013 ಮುಂಬಯಿ ಸೆಂಟ್ರಲ್‌-ತೋಕೂರು ಸಾಪ್ತಾಹಿಕ ವಿಶೇಷ ರೈಲು ಸೆ. 8ರಂದು ಮುಂಬಯಿಂದ ಹೊರಡಲಿದೆ. ರೈಲು ಸಂಖ್ಯೆ 09014 ತೋಕೂರು-ಮುಂಬಯಿ ಸೆಂಟ್ರಲ್‌ ಸಾಪ್ತಾಹಿಕ ವಿಶೇಷ ರೈಲು ಸೆ. 9ರಂದು ತೋಕೂರು ರೈಲು ನಿಲ್ದಾಣದಿಂದ ಹೊರಟು ಮಾರನೇ ದಿನ ಮುಂಬಯಿ ತಲುಪಲಿದೆ.

ಉಳಿದಂತೆ 15 ವಿಶೇಷ ರೈಲುಗಳು ಮುಂಬಯಿ ಸೆಂಟ್ರಲ್‌-ಸಾವಂತವಾಡಿ ರೋಡ್‌, ಬಾಂದ್ರಾ -ರತ್ನಗಿರಿ, ವಡೋದರ ಜಂಕ್ಷನ್‌-ರತ್ನಗಿರಿ, ವಿಶ್ವಾಮಿತ್ರಿ-ರತ್ನಗಿರಿ, ಉಧ್ನಾ ಜಂಕ್ಷನ್‌-ರತ್ನಗಿರಿ, ವಲ್ಸಾಡ್‌-ರತ್ನಗಿರಿ ನಡುವೆ ಸಂಚರಿಸಲಿದೆ.

ರೈಲುಗಳ ನಿಲ್ದಾಣಗಳ ವಿವರ ಹಾಗೂ ಆಗಮನ-ನಿರ್ಗಮನ ಸಮಯವು www.enquiry.indianrail.gov.in. ನಲ್ಲಿ ಲಭ್ಯವಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.

ಹೆಚ್ಚುವರಿ ಬೋಗಿ ಸೇರ್ಪಡೆ

ಬೆಂಗಳೂರು-ಕಾರವಾರ ಮಧ್ಯೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ (16595 / 16596) ಒಂದು ತಿಂಗಳ ಅವಧಿಗೆ 5 ಹೆಚ್ಚುವರಿ ಬೋಗಿ ಜೋಡಣೆಯಾಗಲಿದೆ. ಪ್ರಸ್ತುತ 14 ಬೋಗಿಯೊಂದಿಗೆ ಸಂಚಾರ ಮಾಡುತ್ತಿರುವ ಪಂಚಗಂಗಾ ಎಕ್ಸ್‌ ಪ್ರಸ್‌ ರೈಲು ಸೆ. 2ರಿಂದ ಅ. 1ರ ವರೆಗೆ 2 ಎಸಿ, 1 ಸ್ಲಿàಪರ್‌ ಹಾಗೂ 2 ಜನರಲ್‌ ಹೆಚ್ಚುವರಿ ಬೋಗಿಯೊಂದಿಗೆ ಸಂಚಾರ ಮಾಡಲಿದೆ. ಇದು ಹಬ್ಬದ ದಿನಗಳಲ್ಲಿ ಕರಾವಳಿಗೆ ಬಂದು ಹೋಗುವವರಿಗೆ ಹೆಚ್ಚು ಅನುಕೂಲವಾಗಲಿದೆ.

Leave a Reply