ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ,ಅಭಿವೃದ್ಧಿ, ಉದ್ಯೋಗ ಸೃಷ್ಟಿಯೇ,ಸಂಸದನಾದರೆ ನಾನು ಮಾಡುವ ಪರಿಹಾರ : ಅಮೃತ್ ಶೆಣೈ
ಲೋಕಸಭಾ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ,ಅಭಿವೃದ್ಧಿ, ಉದ್ಯೋಗ ಸೃಷ್ಟಿಯೇ,ಸಂಸದನಾದರೆ ನಾನು ಮಾಡುವ ಪರಿಹಾರ : ಅಮೃತ್ ಶೆಣೈ
ಉಡುಪಿ: ಜಾತ್ಯತೀತ ಮನೋಭಾವ ಹೊಂದಿರುವ ವ್ಯಕ್ತಿ ಹಲವಾರು ಚುನಾವಣೆಯನ್ನ ನಿಭಾಯಿಸಿದ ಅನುಭವವಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಮಿಂಚಿನ ಸಂಚಾರ ನಡೆಸಿ ಮತಯಾಚನೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಒಂದು ಪಕ್ಷೇತರ ಅಭ್ಯರ್ಥಿ ಈ ಸಂಚಲನ ಮತದಾರರಲ್ಲಿ ಹೊಸ ಹುರುಪನ್ನ ಹುಟ್ಟುಹಾಕಿದೆ.
ಉದ್ಯೋಗ ಸೃಷ್ಟಿ, ಉದ್ಯಮಗಳ ಪುನರುತ್ಥಾನ, ಸಾಮರಸ್ಯದ ಜೀವನ,ಅಭಿವೃದ್ಧಿಯಲ್ಲಿ ಮೇಲುಗೈ ಸಾಧಿಸಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದೆ ಎಂದು ಸದಾ ಹೇಳಿತ್ತಿರುವ ಶೆಣೈಯ ಮಾತುಗಳು ಮತದಾರರಿಗೆ ಹೊಸ ಚೈತನ್ಯ ಮೂಡಿಸುವಂತಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಅನುಭವ ಹಾಗೂ ಕಾರ್ಯಕರ್ತರ ಜತೆಗಿನ ನಿಕಟ ಸಂಬಂಧ ಹೊಂದಿರುವ ಅಮೃತ್ ಶೆಣೈ ಈ ಭಾರಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಅನ್ನುತ್ತಾರೆ ರಾಜಕೀಯ ಅನುಭವಿಗಳು.
ಎರಡೂ ಜಿಲ್ಲೆಯಲ್ಲಿ ಉದ್ಭವಿಸುತ್ತಿರುವ ಮರಳಿನ ಸಮಸ್ಯೆ,ನಿರುದ್ಯೋಗ ಸಮಸ್ಯೆ, ಹೆದ್ದಾರಿ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ ಯ ಧ್ವನಿ ಏರಿಸಲಿದ್ದೇನೆ ಎಂದು ಅಮೃತ್ ಶೆಣೈ ಹೇಳುತ್ತಿದ್ದಾರೆ.
https://m.facebook.com/story.php?story_fbid=10157148593197480&id=844252479



