ಉಡುಪಿ-ದಕ ವಿಧಾನ ಪರಿಷತ್ ಉಪ ಚುನಾವಣೆಯ ಸೀಟ್ ಘೋಷಣೆ : ಕುಯಿಲಾಡಿ ಸುರೇಶ್ ನಾಯಕ್ ಬಂಡಾಯ..?? vishwanews24

Featured, ಉಡುಪಿ

ಉಡುಪಿ-ದಕ ವಿಧಾನ ಪರಿಷತ್ ಉಪ ಚುನಾವಣೆಯ ಸೀಟ್ ಘೋಷಣೆ : ಕುಯಿಲಾಡಿ ಸುರೇಶ್ ನಾಯಕ್ ಬಂಡಾಯ..??

ಇಂದು ಸಂಜೆ ಖಾಸಗಿ ಹೋಟೆಲ್ ನಲ್ಲಿ ಬೆಂಬಲಿಗರ ಸಭೆ..!

ಉಡುಪಿ: ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪಚುನಾವಣೆ ಸೀಟ್ ಘೋಷಣೆಯಾಗುತ್ತಿದ್ದಂತೆ ಉಡುಪಿ ಜಿಲ್ಲೆಯ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬಂಡಾಯ ಅಭ್ಯರ್ಥಿಯಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ.

ಪರಿಷತ್ ಚುನಾವಣೆಗೆ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಅಂತಿಮ ಕ್ಷಣದಲ್ಲಿ ಟಿಕೆಟ್ ಮಿಸ್ಸಾದ ಪರಿಣಾಮವಾಗಿ ಬೆಂಬಲಿಗರ ಸಹಕಾರದೊಂದಿಗೆ ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

Bharatiya Janata Party (BJP) | History, Ideology, Election Performance, &  Beliefs | Britannica

ಶಿಕ್ಷಕರ-ಪದವಿಧರ ಕ್ಷೇತ್ರದ ಪರಿಷತ್ತು ಚುನಾವಣೆಯಲ್ಲಿ ಕೂಡ ಉಡುಪಿ ಜಿಲ್ಲೆಗೆ ಅನ್ಯಾಯವಾಗಿತ್ತು ಈ ಬಾರಿಯಾದರೂ ಸರದೂಗಿಸುವ ಲೆಕ್ಕಾಚಾರ ಆಕಾಂಕ್ಷಿಗಳಲ್ಲಿತ್ತು ಆದರೆ ಕಡೇ ಕ್ಷಣದಲ್ಲಿ ಉಡುಪಿ ಜಿಲ್ಲೆಗೆ ಟಿಕೆಟ್ ಮಿಸ್ಸಾಗಿ ದ.ಕ ಪಾಲಾಗಿದ್ದು ಬೇಸರ ಮೂಡಿಸಿದೆ.

ಪ್ರತಿಯೊಬ್ಬರೂ ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು : ಸಿ.ಎಂ – vishwanews24

ಜಿಎಸ್ ಬಿ ಸಮುದಾಯದ ಪ್ರಭಲ ಆಕಾಂಕ್ಷಿಯಾಗಿದ್ದ ಸುರೇಶ್ ನಾಯಕ್ ಬೆಂಬಲಿಗರು ಜಿಲ್ಲೆಯ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ ಸಭೆ ಕರೆದು ಚುನಾವಣೆ ಸ್ಪರ್ಧೆಯ ಚರ್ಚೆ ನಡೆಯಲಿದೆಂದು ಮಾಹಿತಿ ಹೊರಬಿದ್ದಿದೆ.

ಬ್ಯೂರೋ ರಿಪೋರ್ಟ್: ವಿಶ್ವನ್ಯೂಸ್24

Leave a Reply