ಉಡುಪಿ – ದುರ್ಗಾ ದೌಡ್ : ಅ. 2ರಂದು ಕೃಷ್ಣನಗರಿಗೆ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ – Vishwanews24
ಉಡುಪಿ ದುರ್ಗಾ ದೌಡ್’ : ಅ. 2ರಂದು ಕೃಷ್ಣನಗರಿಗೆ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್
ಉಡುಪಿ : ಹಿಂದೂ ಜಾಗರಣ ವೇದಿಕೆ ವತಿಯಿಂದ ಅ. 2ರಂದು ಆಯೋಜಿಸಲಾದ “ದುರ್ಗಾ ದೌಡ್’ ಕಾರ್ಯಕ್ರಮಕ್ಕೆ ಭೋಪಾಲದ ಸಂಸದೆ, ವಾಗ್ಮಿ ಪ್ರಜ್ಞಾ ಸಿಂಗ್ ಠಾಕೂರ್ ಆಗಮಿಸುತ್ತಿದ್ದಾರೆ.
ನಗರವನ್ನು ಕೇಸರಿ ಪತಾಕೆಗಳಿಂದ ಅಲಂಕರಿಸಲಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕೊರಗ ಸಮುದಾಯದ ಸುಂದರ ಕೊರಗ ಕಾರ್ಯಕ್ರಮ ಉದ್ಘಾಟಿಸುವರು.

ಇದನ್ನೂ ಓದಿ: ಮಂಗಳ ಕಾರ್ಯಗಳಿಂದ ಶುಭ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಹಿಂದೂ ಸಮಾಜದ ಎಲ್ಲ ಸಮುದಾಯಗಳ ಮುಖಂಡರು ಭಾಗವಹಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಮೆರವಣಿಗೆ ಕಡಿಯಾಳಿಯಿಂದ ಆರಂಭಗೊಂಡು ಕಲ್ಸಂಕ, ಸಿಟಿ ಬಸ್ ನಿಲ್ದಾಣ, ತೆಂಕಪೇಟೆ, ರಥಬೀದಿವರೆಗೆ ತೆರಳಲಿದೆ. ಸಂಜೆ 5ಕ್ಕೆ ಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಪ್ರಜ್ಞಾ ಸಿಂಗ್ ಮಾತನಾಡಲಿದ್ದಾರೆ.
ಬಂಟ್ವಾಳ : ನಿಷೇಧಿತ ಸಂಘಟನೆಯಾದ ಪಿ.ಎಫ್.ಐ., ಎಸ್.ಡಿ.ಪಿ.ಐ. ಕಚೇರಿಗಳಿಗೆ ಬೀಗ – Vishwanews24
