ಉಡುಪಿ: ಮಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಉಡುಪಿಯ 16 ಭಿಕ್ಷುಕರು – Vishwanews24
ಉಡುಪಿ: ಮಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಉಡುಪಿಯ 16 ಭಿಕ್ಷುಕರು
ಉಡುಪಿ: ಭಿಕ್ಷಾಟನೆ ನಿಷೇಧ ಕಾಯಿದೆಯಾನ್ವಯ ಬಿಕ್ಷಾಟನೆಯನ್ನು ತಡೆಗಟ್ಟುವ ಸಲುವಾಗಿ ಬಿಕ್ಷುಕರನ್ನು ನಿರಾರ್ಶಿತರ ಕೇಂದ್ರಕ್ಕೆ ಸೇರಿಸಲಾಗಿದೆ.
ನಿರಾರ್ಶಿತರ ಪರಿಹಾರ ಕೇಂದ್ರದ ಅಧೀಕ್ಷಕರು ಹಾಗೂ ಕಾರ್ಯಪಾಲಕ ಸಿಬ್ಬಂದಿ ವರ್ಗ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಇವರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನಲ್ಲಿ ಕೃಷ್ಣ ಮಠ, ಸರ್ವಿಸ್ ಬಸ್ ನಿಲ್ದಾಣ, ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಕ್ಷಾಟನೆಯನ್ನು ಮಾಡುತ್ತಿದ್ದ 16 ಜನ ಪುರುಷ ನಿರಾರ್ಶಿತರನ್ನು(ಬಿಕ್ಷುಕರನ್ನು) ಮಂಗಳೂರಿನ ಪಚ್ಚನಾಡಿಯಲ್ಲಿರುವ ಪರಿಹಾರ ಕೇಂದ್ರ ಇಲ್ಲಿಗೆ ಸೇರಿಸಲಾಗಿದೆ.
ಬೆಳ್ತಂಗಡಿ: ಕಾರು ಮತ್ತು ಬೈಕ್ ನಡುವೆ ಅಪಘಾತ ; ಬೈಕ್ ಸವಾರ ಸಾವು – Vishwanews24
ಉಡುಪಿಯಲ್ಲಿ ಬಿಕ್ಷುಕರು ಬಿಕ್ಷಾಟನೆ ಮಾಡಿ ಸಾರಾಯಿ ಕುಡಿದು ಸಾರ್ವಜನಿಕರಿಗೆ ತೊಂದರೆ ಹಾಗೂ ಗಲಾಟೆ ಮಾಡಿ ಆಸ್ಪತೆಗೆ ದಾಖಲಾಗುವ ಘಟನೆ ದಿನಪ್ರತಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಕಾರ್ಯಕ್ರಮ ಕೈಗೊಂಡಿದೆ ಎಂದು ಒಳಕಾಡು ತಿಳಿಸಿದರು.
