ಉಡುಪಿ: ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ -Vishwanews24

Featured, ಉಡುಪಿ

ಉಡುಪಿ: ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ -Vishwanews24

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠಾಧಿಪತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶ್ರೀರಾಮ- ಹನುಮದುತ್ಸವದ ಸುಸಂದರ್ಭ ಕಾಂಚನ ಪರಂಪರೆಯ ಕರ್ನಾಟಕ ಸಂಗೀತ ಗುರು ಹಾಗೂ ಈ ಸಾಲಿನ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಸೇವೆಯನ್ನು ಗುರುತಿಸಿ, ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.

ಬಳಿಕ ಮಾತನಾಡಿದ ಮಧೂರು ಅವರು, ತನ್ನೆಲ್ಲ ಏಳಿಗೆಗೆ, ಸಂಗೀತಾರಾಧನೆಗೆ ಉಡುಪಿ ಶ್ರೀ ಕೃಷ್ಣನೇ ಕಾರಣ. ಶ್ರೀಕೃಷ್ಣನ ಅನುಗ್ರಹ ಹಾಗೂ ಶ್ರೀಗಳ ಆಶೀರ್ವಾದ ಇವೆರಡರಿಂದ ತಾನು ಧನ್ಯ ಎಂದರು.

ನಂತರ ಸುಮಾರು ಮೂರು ಗಂಟೆಗಳ ಕಾಲ ಮಧೂರು ಅವರಿಂದ ಸಂಗೀತಾರ್ಚನೆ ನಡೆಯಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ (ವಯೋಲಿನ್) ಮತ್ತು ವಿದ್ವಾನ್ ಬಾಲಚಂದ್ರ ಭಾಗವತ್ (ಮೃದಂಗ) ಸಹಕರಿಸಿದರು.

ನನ್ನ ದೇಶ ಕಷ್ಟದಲ್ಲಿದೆ, ಭಾರತಕ್ಕೆ ವ್ಯಾಕ್ಸಿನ್‍ ಲಸಿಕೆ ನೀಡಿ : ಪ್ರಿಯಾಂಕಾ ಚೋಪ್ರಾ -Vishwanews24